Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಭಾರತದ ಷೇರುಮಾರುಕಟ್ಟೆಗಳಿಗೆ ಗುರು ದೆಸೆ; ಸೆನ್ಸೆಕ್ಸ್, ನಿಫ್ಟಿಗೆ ಗುರುವಾರ ಶುಭಾರಂಭ; ಏನು ಕಾರಣ?

Sensex and Nifty Gains: ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೇ 18ರಂದು ಉತ್ತಮ ಆರಂಭ ಪಡೆದಿದ್ದು ಕ್ರಮವಾಗಿ 400 ಮತ್ತು 100 ಅಂಕಗಳಷ್ಟು ಹೆಚ್ಚು ಗಳಿಕೆ ಕಂಡಿವೆ. ಅಮೆರಿಕದ ಡೆಟ್ ಸೀಲಿಂಗ್ ಕ್ರಮ ಈ ಬೆಳವಣಿಗೆಗೆ ಕಾರಣ.

Share Market: ಭಾರತದ ಷೇರುಮಾರುಕಟ್ಟೆಗಳಿಗೆ ಗುರು ದೆಸೆ; ಸೆನ್ಸೆಕ್ಸ್, ನಿಫ್ಟಿಗೆ ಗುರುವಾರ ಶುಭಾರಂಭ; ಏನು ಕಾರಣ?
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2023 | 10:58 AM

ನವದೆಹಲಿ: ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ (Indian Stock Markets) ಮೇ 18, ಗುರುವಾರದಂದು ಉತ್ತಮ ಆರಂಭ ಪಡೆದಿವೆ. ಕಳೆದ ಎರಡು ದಿನಗಳ ಕಾಲ ನಕರಾತ್ಮಕ ವಹಿವಾಟುಗಳನ್ನು ಕಂಡಿದ್ದ ಷೇರುಪೇಟೆಗಳಲ್ಲಿ ವ್ಯವಹಾರ ಇಂದು ಗರಿಗೆದರಿದೆ. ಬಿಎಸ್​ಇ ಸೆನ್ಸೆಕ್ಸ್ ಗುರುವಾರ ಬೆಳಗಿನ ವಹಿವಾಟಿನಲ್ಲಿ 400 ಅಂಕಗಳಷ್ಟು ಹೆಚ್ಚಳ ಕಂಡು 62,000 ಅಂಕಗಳ ಮಟ್ಟಸ ಸಮೀಪಕ್ಕೆ ಏರಿದೆ. ಇನ್ನು, ನಿಫ್ಟಿ50 ಸೂಚ್ಯಂಕ ಹೆಚ್ಚೂಕಡಿಮೆ 100 ಅಂಕಗಳಷ್ಟು ಮೇಲೇರಿ 18,277 ಅಂಕಗಳ ಮಟ್ಟದಲ್ಲಿದೆ.

ಬ್ಯಾಂಕಿಂಗ್ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಆ್ಯಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ, ಬಜಾಜ್ ಫೈನ್​ಸರ್ವ್ ಷೇರುಗಳು ಒಳ್ಳೆಯ ಬೆಲೆಗೆ ಬಿಕರಿಯಾಗುತ್ತಿವೆ. ಅಲ್ಟ್ರಾಟೆಕ್ ಸಿಮೆಂಟ್, ಇನ್ಫೋಸಿಸ್, ನೆಸ್ಲೆ ಮತ್ತಿತರ ಷೇರುಗಳಿಗೂ ಉತ್ತಮ ಬೇಡಿಕೆ ಇದೆ. ವರ್ಲ್​ಪೂಲ್ ಇಂಡಿಯಾ, ಜಿಂದಾಲ್ ಸ್ಟೈನ್​ಲೆಸ್ ಮೊದಲಾದವುಗಳೂ ಗಮನ ಸೆಳೆದಿವೆ. ಟೈಟಾನ್, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಷೇರುಗಳ ಬೆಲೆ ತುಸು ಕುಗ್ಗಿರುವುದು ಬಿಟ್ಟರೆ ಒಟ್ಟಾರೆಯಾಗಿ ಷೇರುಪೇಟೆ ಗುರುವಾರ ಝಗಮಗಿಸುತ್ತಿದೆ.

ಇದನ್ನೂ ಓದಿSP Hinduja Passes Away: ಹಿಂದೂಜಾ ಗ್ರೂಪ್ ಛೇರ್ಮನ್ ಎಸ್.ಪಿ. ಹಿಂದೂಜಾ ನಿಧನ; 109 ವರ್ಷದ ಹಳೆಯ ಕಂಪನಿಯ ನೊಗ ಹೊತ್ತು ಮುನ್ನಡೆಸಿದ್ದ ಧೀಮಂತ ಉದ್ಯಮಿ

ಷೇರುಪೇಟೆಗೆ ಯಾಕೆ ಇಂದು ಒಳ್ಳೆಯ ಮೂಡು?

ಭಾರತದ ಷೇರು ಮಾರುಕಟ್ಟೆಗೆ ಇಂದು ಶುಭಫಲ ಸಿಗಲು ಕಾರಣವಾಗಿದ್ದು ಗ್ಲೋಬಲ್ ಮೂಡ್. ಇದಕ್ಕೆ ಕಾರಣ ಅಮೆರಿಕ ಸರ್ಕಾರ ತೆಗೆದುಕೊಳ್ಳುತ್ತಿರುವ ಒಂದು ಹೆಜ್ಜೆ. ಅಮೆರಿಕದ ಡೆಟ್ ಸೀಲಿಂಗ್ ಅನ್ನು ಹೆಚ್ಚಿಸುವ ಸಂಬಂಧ ಅಲ್ಲಿನ ಅಧ್ಯಕ್ಷ ಜೋ ಬೈಡನ್ ಹೆಜ್ಜೆ ಇಡುತ್ತಿದ್ದಾರೆ. ಇದರಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಗಳು ಗರಿಗೆದರಿವೆ. ನಿನ್ನೆ ಅಲ್ಲಿನ ನಾಸ್ಡಾಕ್, ಡೋ ಜೋನ್ಸ್ ಮತ್ತು ಎಸ್ ಅಂಡ್ ಪಿ ಸೂಚ್ಯಂಕಗಳು ಶೇ. 1ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿವೆ. ಅದರ ಫಲವಾಗಿ ಏಷ್ಯಾದ ಪ್ರಮುಖ ಷೇರುಪೇಟೆಗಳಾದ ನಿಕ್ಕೀ, ಹ್ಯಾಂಗ್ ಸೆಂಗ್, ಸ್ಟ್ರೇಟ್ ಟೈಮ್ಸ್, ಕೋಸ್ಪಿ ಇತ್ಯಾದಿಗಳಲ್ಲೂ ಹೂಡಿಕೆದಾರರು ಸಾವಧಾನವಾಗಿ ಖರೀದಿ ಮಾಡಿದ್ದಾರೆ. ಈ ಒಟ್ಟಾರೆ ಒಳ್ಳೆಯ ಮೂಡು ಇಂದು ಗುರುವಾರ ಭಾರತದ ಷೇರುಪೇಟೆಗೂ ತಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ