Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಕೊಟ್ಟು ಕುಣಿಕೆ ಹಾಕೋ ಆನ್ಲೈನ್ ಖದೀಮರಿದ್ದಾರೆ ಹುಷಾರ್; ಲೋನ್ ಸ್ಕ್ಯಾಮ್ ಗುರುತಿಸುವುದು ಹೇಗೆ?

Loan Scam: ಲೋನ್ ಆ್ಯಪ್​ಗಳಲ್ಲಿ ಸುಲಭವಾಗಿ ಸಿಗುತ್ತದೆಂದು ಸಾಲ ಪಡೆದು ಬ್ಲ್ಯಾಕ್​ಮೇಲ್ ಇತ್ಯಾದಿ ದೌರ್ಜನ್ಯಕ್ಕೆ ಒಳಗಾದ ಹಲವು ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಲೇ ಇವೆ. ಬ್ಯಾಂಕುಗಳಲ್ಲಿ ಸಾಲ ಪಡೆಯಲು ಯತ್ನಿಸಿ ವಿಫಲರಾದ ಮಂದಿ, ಅಥವಾ ತುರ್ತಾಗಿ ಹಣ ಬೇಕಿರುವ ಮಂದಿ ಸಾಮಾನ್ಯವಾಗಿ ಆನ್ಲೈನ್ ಲೋನ್ ಜಾಲಕ್ಕೆ ಬೀಳುತ್ತಾರೆ. ಆನ್ಲೈನ್ ಆ್ಯಪ್​ನವರು ಏನು ಮಾಡಿಯಾರು ಎಂದು ಸುಮ್ಮನಿರುವಂತಿಲ್ಲ. ನಿಮ್ಮ ಜುಟ್ಟು ಜನಿವಾರವನ್ನು ಅವರ ಕೈಗೆ ಕೊಟ್ಟಿರುತ್ತೀರಿ.

ಸಾಲ ಕೊಟ್ಟು ಕುಣಿಕೆ ಹಾಕೋ ಆನ್ಲೈನ್ ಖದೀಮರಿದ್ದಾರೆ ಹುಷಾರ್; ಲೋನ್ ಸ್ಕ್ಯಾಮ್ ಗುರುತಿಸುವುದು ಹೇಗೆ?
ಲೋನ್ ಸ್ಕ್ಯಾಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 05, 2023 | 1:51 PM

ಸಾಕಷ್ಟು ಸವಲತ್ತುಗಳಿರುವ ಇವತ್ತಿನ ಕಾಲದಲ್ಲಿ ಖರ್ಚು ಮಾಡಲು ಹೇರಳ ನೆಪಗಳಿವೆ. ಅಂತೆಯೇ, ಬಹುತೇಕ ಮಂದಿಗೆ ಸಾಲ ಅನಿವಾರ್ಯ ಆಗಿಹೋಗಿದೆ. ಒಮ್ಮೆ ಸಾಲದ ಸುಳಿಗೆ ಸಿಲುಕಿಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಹಿಂದೆಲ್ಲಾ ಖಾಸಗಿ ಫೈನಾನ್ಷಿಯರ್​ಗಳಲ್ಲಿ ಸಿಕ್ಕಾಪಟ್ಟೆ ಬಡ್ಡಿಗೆ ಸಾಲ ಪಡೆದು ಆಸ್ತಿಪಾಸ್ತಿ ಕಳೆದುಕೊಂಡ ಉದಾಹರಣೆ ಬಹಳ ಉಂಟು. ಈಗ ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಆದರೂ ಕೂಡ ಕಡಿಮೆ ಕ್ರೆಡಿಟ್ ಸ್ಕೋರ್ ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಬ್ಯಾಂಕುಗಳಲ್ಲಿ ಸಾಲ ಸಿಗದ ಜನರು ಆನ್ಲೈನ್ ಖದೀಮರ ಜಾಲಕ್ಕೆ (loan scam) ಸುಲಭವಾಗಿ ಬೀಳುತ್ತಾರೆ.

ಲೋನ್ ಆ್ಯಪ್​ಗಳಲ್ಲಿ ಸುಲಭವಾಗಿ ಸಿಗುತ್ತದೆಂದು ಸಾಲ ಪಡೆದು ಬ್ಲ್ಯಾಕ್​ಮೇಲ್ ಇತ್ಯಾದಿ ದೌರ್ಜನ್ಯಕ್ಕೆ ಒಳಗಾದ ಹಲವು ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಲೇ ಇವೆ. ಈ ಆನ್ಲೈನ್ ವಂಚಕರು ಸಾಲ ಕೊಡುವುದು ನಿಜವೇ ಆದರೂ ವಿಪರೀತ ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ವಿಧಿಸಿ ಹಿಂಸಿಸುವುದುಂಟು.

ಲೋನ್ ಸ್ಕ್ಯಾಮ್ ಜಾಲ ಹೇಗೆ ಕೆಲಸ ಮಾಡುತ್ತೆ?

ಬ್ಯಾಂಕುಗಳಲ್ಲಿ ಸಾಲ ಪಡೆಯಲು ಯತ್ನಿಸಿ ವಿಫಲರಾದ ಮಂದಿ, ಅಥವಾ ತುರ್ತಾಗಿ ಹಣ ಬೇಕಿರುವ ಮಂದಿ ಸಾಮಾನ್ಯವಾಗಿ ಆನ್ಲೈನ್ ಲೋನ್ ಜಾಲಕ್ಕೆ ಬೀಳುತ್ತಾರೆ. ಇಮೇಲ್, ವಾಟ್ಸಾಪ್, ಟೆಲಿಗ್ರಾಮ್, ಎಸ್ಸೆಮ್ಮೆಸ್ ಹೀಗೆ ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಲ್ಲಿ ಸುಲಭವಾಗಿ ಲೋನ್ ಕೊಡಲಾಗುತ್ತದೆಂಬ ಮೆಸೇಜ್ ಕಳುಹಿಸಲಾಗುತ್ತದೆ. ಯಾವುದೇ ದಾಖಲೆ ಇಲ್ಲದೇ ಕೆಲವೇ ಕ್ಷಣಗಳಲ್ಲಿ ಲೋನ್ ಸ್ಯಾಂಕ್ಷನ್ ಆಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತದೆ.

ಇದನ್ನೂ ಓದಿ: Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ

ಈ ಮೆಸೇಜ್​ನಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಅನಧಿಕೃತ ಆ್ಯಪ್ ಡೌನ್​ಲೋಡ್ ಆಗುತ್ತದೆ. ಅಥವಾ ಆನ್ಲೈನ್ ಫಾರ್ಮ್ ಪ್ರತ್ಯಕ್ಷವಾಗುತ್ತದೆ. ಆ ಆ್ಯಪ್ ಮೂಲಕ ನಿಮ್ಮ ಫೋನ್​ನ ಎಲ್ಲಾ ವೈಯಕ್ತಿಕ ಮಾಹಿತಿಯು ಖದೀಮರಿಗೆ ದೊರಕಿಹೋಗುತ್ತದೆ.

ನಿಮಗೆ ತತ್​ಕ್ಷಣಕ್ಕೆ ಸಾಲ ಸಿಗಬಹುದು. ಆದರೆ, ಬಡ್ಡಿದರ, ಪ್ರೋಸಸಿಂಗ್ ಫೀ ಇತ್ಯಾದಿ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. 1 ಲಕ್ಷ ರೂ ಸಾಲ ನೀಡಿದರೆ 20,000 ರೂನಷ್ಟು ಪ್ರೋಸಸಿಂಗ್ ಫೀ ಮುರಿದುಕೊಳ್ಳಬಹುದು. ಜೊತೆಗೆ ಬಡ್ಡಿದರ ತಿಂಗಳಿಗೆ ಶೇ. 10ಕ್ಕಿಂತಲೂ ಹೆಚ್ಚು ಇರಬಹುದು. ತಡವಾಗಿ ಕಟ್ಟಿದರೆ ಸಿಕ್ಕಾಪಟ್ಟೆ ದಂಡ ವಿಧಿಸಬಹುದು.

ಆನ್ಲೈನ್ ಆ್ಯಪ್​ನವರು ಏನು ಮಾಡಿಯಾರು ಎಂದು ಸುಮ್ಮನಿರುವಂತಿಲ್ಲ. ನಿಮ್ಮ ಜುಟ್ಟು ಜನಿವಾರವನ್ನು ಅವರ ಕೈಗೆ ಕೊಟ್ಟಿರುತ್ತೀರಿ. ನಿಮ್ಮ ಮೊಬೈಲ್​ನಲ್ಲಿರುವ ಫೋಟೋ ಮತ್ತಿತರ ವೈಯಕ್ತಿಕ ಮಾಹಿತಿ ಇಟ್ಟುಕೊಂಡು ನಿಮ್ಮನ್ನು ಬ್ಲ್ಯಾಕ್​ಮೇಲ್ ಮಾಡುತ್ತಾರೆ. ನಿಮಗೆ ಫೋನ್ ಮಾಡಿ ಬೆದರಿಸುತ್ತಾರೆ. ರಿಕವರಿ ಏಜೆಂಟ್​ಗಳು ನಿಮ್ಮ ಮನೆಬಾಗಿಲಿಗೆ ಬಂದು ಧಮಕಿ ಹಾಕುತ್ತಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

ಲೋನ್ ವಂಚಕರ ಸುಳಿಗೆ ಬೀಳದಿರುವುದು ಹೇಗೆ?

  • ಲೋನ್ ಕೊಡುತ್ತೇವೆಂದು ನಿಮ್ಮನ್ನು ಸಂಪರ್ಕಿಸುವ ಸಂಸ್ಥೆ ಆರ್​ಬಿಐನಲ್ಲಿ ನೊಂದಾಯಿತವಾಗಿದೆಯಾ ಪರಿಶೀಲಿಸಿ
  • ಫೋನ್, ಇಮೇಲ್ ಅಥವಾ ಇನ್ಯಾವುದಾದರೂ ಮೂಲಕ ನಿಮ್ಮ ಕಾರ್ಡ್ ವಿವರ ತಿಳಿಸಬೇಡಿ. ಯಾವ ಒಟಿಪಿ ಇತ್ಯಾದಿಯನ್ನು ಕೊಡಬೇಡಿ.
  • ಸಾಲ ಕೊಡುವ ಸಂಸ್ಥೆಯ ವಿಳಾಸ ನೈಜವಾ ಇಲ್ಲವಾ, ಕಚೇರಿ ಹೊಂದಿದೆಯಾ ಇಲ್ಲವಾ ಪರಿಶೀಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Tue, 5 December 23

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ