AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು

Groww platform controversy over allegations by an investor: ಬ್ರೋಕರ್ ಪ್ಲಾಟ್​ಫಾರ್ಮ್ ಆದ ಗ್ರೋ ವಿರುದ್ಧ ವ್ಯಕ್ತಿಯೊಬ್ಬರು ವಂಚನೆಯ ಆರೋಪ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಫೋಲಿಯೋ ಅಕೌಂಟ್ ರಚನೆಯಾದರೂ ಆ ಹಣ ಮ್ಯೂಚುವಲ್ ಫಂಡ್​ಗೆ ತಲುಪುವುದೇ ಇಲ್ಲ. ಮೂರ್ನಾಲ್ಕು ವರ್ಷದ ಬಳಿಕ ಫಂಡ್ ರಿಡೀಮ್ ಮಾಡಲು ಹೋದಾಗ ಸಾಧ್ಯವಾಗುವುದಿಲ್ಲ. ಗ್ರೋ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ಆ ವ್ಯಕ್ತಿ ಆರೋಪ ಮಾಡಿದ್ದಾರೆ.

ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು
ಗ್ರೋ ಆ್ಯಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 24, 2024 | 12:17 PM

Share

ನವದೆಹಲಿ, ಜೂನ್ 24: ಜನಪ್ರಿಯ ಸ್ಟಾಕ್ ಮಾರ್ಕೆಟ್ ಬ್ರೋಕರ್ ಸಂಸ್ಥೆಯಾದ ಗ್ರೋ (Groww) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವಂಚನೆ ಆರೋಪ ಕೇಳಿಬಂದಿದೆ. ಹಣ ಕಡಿತಗೊಳಿಸಿ ಅದು ಎಲ್ಲಿಯೂ ಹೂಡಿಕೆ ಮಾಡದೇ ವಂಚಿಸಲಾಗಿದೆ ಎಂದು ಗ್ರೋ ಪ್ಲಾಟ್​ಫಾರ್ಮ್​ನ ಬಳಕೆದಾರರೊಬ್ಬರು ಆರೋಪಿಸಿದ್ದಾರೆ. ಹನೇಂದ್ರ ಪ್ರತಾಪ್ ಸಿಂಗ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಗ್ರೋ ಸಂಸ್ಥೆ ಸ್ಪಂದಿಸಿ, ಇದು ತಾಂತ್ರಿಕ ದೋಷವೆಂದು ಸ್ಪಷ್ಟಪಡಿಸಿದ್ದು, ಆ ಹಣವನ್ನೂ ಗ್ರಾಹಕರಿಗೆ ಮರಳಿಸಿದೆ.

ಏನಿದು ಪ್ರಕರಣ?

ಹನೇಂದ್ರ ಪ್ರತಾಪ್ ಸಿಂಗ್ ಎಂಬುವವರು ತಮ್ಮ ಸೋದರಿಗೆ ಆದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗ್ರೋ ಪ್ಲಾಟ್​ಫಾರ್ಮ್​ನಲ್ಲಿ 2020ರಲ್ಲಿ ಪರಾಗ್ ಪಾರಿಖ್ ಮ್ಯೂಚುವಲ್ ಫಂಡ್​ನಲ್ಲಿ ಅವರ ಸೋದರಿ ಹೂಡಿಕೆ ಮಾಡಿದ್ದರಂತೆ. ಅದಕ್ಕಾಗಿ ಫೋಲಿಯೋ ಖಾತೆಯನ್ನೂ ರಚನೆಯಾಗಿತ್ತು. ಇತರ ಮ್ಯೂಚುವಲ್ ಫಂಡ್​ಗಳಂತೆ ಇದೂ ಕೂಡ ಪ್ರತೀ ದಿನ ಲಾಭ ನಷ್ಟದ ಏರಿಳಿಕೆಯನ್ನು ತೋರಿಸುತ್ತಿತ್ತು. ಇದೀಗ ಫಂಡ್ ಅನ್ನು ಮರಳಿಸಿ ಹಣ ಪಡೆಯಲು ಹೋದಾಗ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

ಪರಾಗ್ ಪಾರೀಖ್ ಫಂಡ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಆ ಫೋಲಿಯೋವೇ ಸೃಷ್ಟಿಯಾಗಿಲ್ಲ ಎಂಬ ಮಾಹಿತಿ ಗೊತ್ತಾಗುತ್ತದೆ. ತನ್ನ ಸೋದರಿ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿದರೆ ಉದ್ದಟತನದಿಂದ ವರ್ತಿಸಿದ್ದಾರೆ. ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಹೇಳಿ ಒಟಿಪಿಗಳನ್ನು ಪಡೆದು ಫೋಲಿಯೋ ಎಂಟ್ರಿಯನ್ನೇ ತೆಗೆದುಹಾಕಿದ್ದಾರೆ. ಆದರೆ, ಬ್ಯಾಂಕ್ ಅಕೌಂಟ್​ಗೆ ಹಣ ಮರಳಿಲ್ಲ. ತಾನು ಯಾವ ಹಂತಕ್ಕೆ ಹೋಗಿಯಾದರೂ ಪಾಠ ಕಲಿಸುವುದಾಗಿ ಹನೇಂದ್ರ ಪ್ರತಾಪ್ ಸಿಂಗ್ ತಮ್ಮ ಪೋಸ್ಟ್​ನಲ್ಲಿ ಹಾಕಿದ್ದಾರೆ.

ರೋಹನ್ ದಾಸ್ ಎಂಬುವವರು ಈ ಪೋಸ್ಟ್​ನ ಸ್ಕ್ರೀನ್​ಶಾಟ್ ತೆಗೆದು ತಮ್ಮ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಗ್ರೋ ಸಂಸ್ಥೆ, ಇದು ತಾಂತ್ರಿಕ ದೋಷ ಮಾತ್ರವೇ ಆಗಿದ್ದು, ಗ್ರಾಹಕರ ಖಾತೆಯಿಂದ ಹಣ ಕಡಿತಗೊಳಿಸಲಾಗಿರಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ಖಾತೆಯಿಂದ ಹಣ ಕಡಿತಗೊಳಿಸಲಾಗಿಲ್ಲ ಎಂದಾದರೆ ಗ್ರಾಹಕರಿಗೆ ಹಣ ಯಾಕೆ ಮರಳಿಸಿದ್ದೀರಿ ಎಂದು ರೋಹನ್ ದಾಸ್ ಮತ್ತೊಂದು ಸ್ಕ್ರೀನ್​ಶಾಟ್​ವೊಂದನ್ನು ಲಗತ್ತಿಸಿ, ಕೇಳಿದ್ದಾರೆ. ಇದು ಗ್ರಾಹಕರಿಗೆ ಅವರ ಹಣದ ಬಗ್ಗೆ ಆತಂಕಗೊಳ್ಳಬಾರದು ಎಂಬ ಕಾರಣಕ್ಕೆ ವಿಶ್ವಾಸಪೂರ್ವಕವಾಗಿ ಹಣವನ್ನು ಕ್ರೆಡಿಟ್ ಮಾಡಿದ್ದೇವೆ. ಬ್ಯಾಂಕ್​ನಿಂದ ಹಣ ಕಡಿತಗೊಂಡಿದ್ದರೆ ಅದರ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಕೊಡಲು ಗ್ರಾಹಕರಿಗೆ ತಿಳಿಸಿದ್ದೇವೆ ಎಂದು ಗ್ರೋ ಸಂಸ್ಥೆ ಪ್ರತಿಕ್ರಿಯಿಸಿದೆ.

ಈ ಪೋಸ್ಟ್​ಗೆ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವರು ತಮಗೂ ಇಂಥ ಸಮಸ್ಯೆಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!