AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್​ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ

Nandan Nilekani says AI amplifies IT jobs: ನಂದನ್ ನಿಲೇಕಣಿ ಅವರು AI ನಿಂದ ಉದ್ಯೋಗ ಕುಸಿತವಾಗದೆ ಸಾಮರ್ಥ್ಯ ಹೆಚ್ಚಲಿದೆ ಎಂದಿದ್ದಾರೆ. ಇನ್ಫೋಸಿಸ್ AGM ನಲ್ಲಿ ಮಾತನಾಡಿದ ಅವರು, AI ತಂತ್ರಜ್ಞಾನ ಐಟಿ ಕಂಪನಿಗಳನ್ನು ಕೊನೆಗಾಣಿಸದೆ ಶಕ್ತಿಯನ್ನು ದುಪ್ಪಟ್ಟು ಮಾಡಲಿದೆ ಎಂದರು. 2030ರ ವೇಳೆಗೆ $400 ಬಿಲಿಯನ್ AI ಸೇವಾ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ಇನ್ಫೋಸಿಸ್ ಇದಕ್ಕೆ ಸಿದ್ಧವಾಗಿದೆ. AI ಅಂತರ ತುಂಬುವ, ಹಳೆಯ ಸಾಫ್ಟ್‌ವೇರ್ ಆಧುನೀಕರಣ ಮತ್ತು ಡೇಟಾ ಭದ್ರತೆಯಲ್ಲಿ Infosys ಪ್ರಮುಖ ಪಾತ್ರ ವಹಿಸಲಿದೆ.

ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್​ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ
ನಂದನ್ ನಿಲೇಕಣಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2026 | 7:30 PM

Share

ಬೆಂಗಳೂರು, ಜೂನ್ 23: ಎಐನಿಂದ ಉದ್ಯೋಗ ಕುಸಿತ ಆಗುವುದಿಲ್ಲ. ಬದಲಿಗೆ ಉದ್ಯೋಗ ಸಾಮರ್ಥ್ಯ ಹೆಚ್ಚಲಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಹೇಳಿದ್ದಾರೆ. ಇನ್ಫೋಸಿಸ್ (Infosys) ಸಂಸ್ಥೆಯ 45ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಅವರು ಐಟಿ ಉದ್ಯಮದ ಭವಿಷ್ಯ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕುರಿತು ಅತ್ಯಂತ ಸಕಾರಾತ್ಮಕ ಹಾಗೂ ಆತ್ಮವಿಶ್ವಾಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಎಐ ತಂತ್ರಜ್ಞಾನವು ಇನ್ಫೋಸಿಸ್‌ನಂತಹ ಐಟಿ ಕಂಪನಿಗಳನ್ನು ಎಂದಿಗೂ ಕೊನೆಗಾಣಿಸುವುದಿಲ್ಲ, ಬದಲಿಗೆ ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ” ಎಂದು ಅವರು ಷೇರುದಾರರಿಗೆ ಭರವಸೆ ನೀಡಿದ್ದಾರೆ.

ಎಐ ಉದ್ಯೋಗಗಳನ್ನು ಕಿತ್ತುಕೊಳ್ಳುವುದಿಲ್ಲ, ಸಾಮರ್ಥ್ಯ ಹೆಚ್ಚಿಸಲಿದೆ

ಜನರೇಟಿವ್ ಎಐ (GenAI) ಬಂದಿರುವುದರಿಂದ ಕೋಡಿಂಗ್ ಸಂಪೂರ್ಣವಾಗಿ ಸ್ವಯಂಚಾಲಿತವಾಗುತ್ತದೆ ಮತ್ತು ಐಟಿ ಕಂಪನಿಗಳ ಅಗತ್ಯವಿರುವುದಿಲ್ಲ ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಈ ಅಭಿಪ್ರಾಯವನ್ನು ನಿರಾಕರಿಸಿದ ನಿಲೇಕಣಿ, “ಎಐ ನಮ್ಮಂತಹ ಕಂಪನಿಗಳನ್ನು ಬದಲಿಸುವುದಿಲ್ಲ (Replace). ಬದಲಿಗೆ ಯಾರು ವೇಗವಾಗಿ ಮತ್ತು ಉದ್ದೇಶಪೂರ್ವಕವಾಗಿ ಬದಲಾವಣೆಗೆ ಹೊಂದಿಕೊಳ್ಳುತ್ತಾರೋ ಅವರ ಶಕ್ತಿಯನ್ನು ಇದು ದುಪ್ಪಟ್ಟು (Amplify) ಮಾಡಲಿದೆ” ಎಂದಿದ್ದಾರೆ.

ಎಐ ಸೇವೆಗಳಲ್ಲಿ $400 ಬಿಲಿಯನ್ ಭಾರಿ ಅವಕಾಶ

2030ರ ವೇಳೆಗೆ ಜಾಗತಿಕವಾಗಿ ‘ಎಐ-ಫಸ್ಟ್’ ಸೇವೆಗಳ ಮಾರುಕಟ್ಟೆಯು ಸುಮಾರು 300 ರಿಂದ 400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಈ ಬೃಹತ್ ಅವಕಾಶವನ್ನು ಬಳಸಿಕೊಳ್ಳಲು ಇನ್ಫೋಸಿಸ್ ಸಂಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೇ ಕಂಪನಿಯ ಎಐ ಸೇವೆಗಳ ವಾರ್ಷಿಕ ಆದಾಯವು 1 ಬಿಲಿಯನ್ ಡಾಲರ್ ಗಡಿಯನ್ನು ದಾಟಿದೆ ಎಂದು ಆಧಾರ್ ಪ್ರಾಜೆಕ್ಟ್ ರೂವಾರಿಯಾದ ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ

ದೊಡ್ಡ ಕಂಪನಿಗಳಲ್ಲಿ ‘ಎಐ ಗ್ಯಾಪ್’ ಇದೆ ಎಂದ ನಿಲೇಕಣಿ

ದೊಡ್ಡ ಕಾರ್ಪೊರೇಟ್ ಕಂಪನಿಗಳು ಎಐ ತಂತ್ರಜ್ಞಾನವನ್ನು ಹೊಂದಿದ್ದರೂ, ಅದನ್ನು ತಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು (Deployment) ಕಷ್ಟಪಡುತ್ತಿವೆ. ಈ ಕರಾರುವಕ್ಕಾದ ಗ್ಯಾಪ್ ಅನ್ನು ತುಂಬುವ ಕೆಲಸವನ್ನು ಇನ್ಫೋಸಿಸ್ ಮಾಡಲಿದ್ದು, ಪ್ರಸ್ತುತ ಕಂಪನಿಯು ತನ್ನ ಟಾಪ್ 200 ಗ್ರಾಹಕರಲ್ಲಿ ಶೇಕಡಾ 90 ರಷ್ಟು ಕಂಪನಿಗಳೊಂದಿಗೆ ಎಐ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಹಳೆಯ ಸಾಫ್ಟ್‌ವೇರ್ ಆಧುನೀಕರಣ: ಎಐ ಕ್ರಾಂತಿಯಿಂದಾಗಿ ಜಾಗತಿಕ ಕಂಪನಿಗಳು ತಮ್ಮ ದಶಕಗಳಷ್ಟು ಹಳೆಯದಾದ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಬದಲಾಯಿಸಲು (Legacy Modernisation) ಮುಂದಾಗುತ್ತಿವೆ. ಇದು ಇನ್ಫೋಸಿಸ್‌ಗೆ ಹೊಸ ಮತ್ತು ದೊಡ್ಡ ಆರ್ಡರ್‌ಗಳನ್ನು ತಂದುಕೊಡುತ್ತಿದೆ. ಅಲ್ಲದೆ, ಕಂಪನಿಗಳು ಇನ್ಮುಂದೆ ಸಾಫ್ಟ್‌ವೇರ್ ಖರೀದಿಸುವ ಬದಲು ಸ್ವಂತವಾಗಿ ‘ಬಿಲ್ಡ್’ ಮಾಡಲು ಇಷ್ಟಪಡುತ್ತಿದ್ದು, ಇದಕ್ಕೆ ಐಟಿ ತಜ್ಞರ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಡೇಟಾ ಭದ್ರತೆ ಮತ್ತು ಗವರ್ನೆನ್ಸ್: ಎಐ ಮಾಡೆಲ್‌ಗಳನ್ನು ಕಂಪನಿಗಳು ಬಳಸುವಾಗ ಕಠಿಣ ಸೈಬರ್ ಸೆಕ್ಯುರಿಟಿ, ಕಟ್ಟುನಿಟ್ಟಾದ ಡೇಟಾ ಗವರ್ನೆನ್ಸ್ ಮತ್ತು ನಿರಂತರ ಟೆಸ್ಟಿಂಗ್ ಅಗತ್ಯವಿರುತ್ತದೆ. ಇವುಗಳನ್ನು ಕೇವಲ ಬಾಹ್ಯ ಪ್ಲಾಟ್‌ಫಾರ್ಮ್‌ಗಳಿಗೆ ಬಿಡಲು ಸಾಧ್ಯವಿಲ್ಲ, ಇನ್ಫೋಸಿಸ್‌ನಂತಹ ನಂಬಿಕಸ್ಥ ಐಟಿ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕು ಎಂದು ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೇವತಿ ಅದ್ವೈತಿಯಿಂದ ಹಿಡಿದು ಸುಂದರ್ ಪಿಚೈವರೆಗೆ ಜಾಗತಿಕ ದೈತ್ಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಭಾರತೀಯರು; ಈಗ ಕುನಾಲ್ ಹೊಸ ಸೇರ್ಪಡೆ

ಜನರೇಟಿವ್ ಎಐ ತಂತ್ರಜ್ಞಾನ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿದ್ದರೂ, ಇನ್ಫೋಸಿಸ್ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಮತ್ತು ಮುಂದಿನ ದಶಕದ ಬೆಳವಣಿಗೆಗೆ ಕಂಪನಿಯು ತನ್ನ ಉದ್ಯೋಗಿಗಳಿಗೆ ಹೊಸ ಮಾನಸಿಕ ಮಾದರಿಗಳು ಹಾಗೂ ನಿರಂತರ ತರಬೇತಿಯನ್ನು ನೀಡುವ ಮೂಲಕ ಸನ್ನದ್ಧಗೊಳಿಸುತ್ತಿದೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ