Mutual Fund: ನಷ್ಟ ತಂದರೆ ಪೇಮೆಂಟ್ ಇಲ್ಲ; ಸಾಮಾನ್ಯರಿಗೆ ಸಿಹಿ, ಮ್ಯೂಚುವಲ್ ಫಂಡ್​ಗಳಿಗೆ ಕಹಿ ಸುದ್ದಿ; ಚರ್ಚೆಗೀಡು ಮಾಡಿದೆ ಸೆಬಿ ಪ್ರಸ್ತಾವ

SEBI Proposes New Rule To Protect Investors: ನಿರ್ದಿಷ್ಟ ಲಾಭ ತರದ ಮ್ಯೂಚುವಲ್ ಫಂಡ್​ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂದು ಸೆಬಿ ಹೊಸ ನಿಯಮ ಮುಂದಿಟ್ಟಿದೆ. ಇದು ಇನ್ನೂ ಪ್ರಸ್ತಾವದ ಹಂತದಲ್ಲಿದೆ. ಆಗಲೇ ಇದು ಫಂಡ್ ಉದ್ಯಮವನ್ನು ಅಲ್ಲೋಲಕಲ್ಲೋಲಗೊಳಿಸತೊಡಗಿದೆ.

Mutual Fund: ನಷ್ಟ ತಂದರೆ ಪೇಮೆಂಟ್ ಇಲ್ಲ; ಸಾಮಾನ್ಯರಿಗೆ ಸಿಹಿ, ಮ್ಯೂಚುವಲ್ ಫಂಡ್​ಗಳಿಗೆ ಕಹಿ ಸುದ್ದಿ; ಚರ್ಚೆಗೀಡು ಮಾಡಿದೆ ಸೆಬಿ ಪ್ರಸ್ತಾವ
ಮ್ಯೂಚುವಲ್ ಫಂಡ್​ಗಳು
Follow us
|

Updated on: May 23, 2023 | 3:38 PM

ಮ್ಯೂಚುವಲ್ ಫಂಡ್​ಗಳು (Mutual Funds) ಒಂದು ವರ್ಷದಲ್ಲಿ ಅಷ್ಟು ಲಾಭ ತಂದಿದೆ, ಇಷ್ಟು ಲಾಭ ತಂದಿದೆ ಎಂಬ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಅಬ್ಬಾ, ಮ್ಯೂಚುವಲ್ ಫಂಡ್​ಗಳೆಲ್ಲವೂ ಭರ್ಜರಿ ಲಾಭಮೂಲಗಳಾಗಬಹುದು ಎಂದು ಭಾವಿಸಿ ಕಣ್ಮುಚ್ಚಿ ಹೂಡಿಕೆ ಮಾಡಲು ಹೋಗುವವರು ಹೆಚ್ಚು. ವಾಸ್ತವದಲ್ಲಿ, ಎಲ್ಲಾ ಮ್ಯುಚುವಲ್ ಫಂಡ್​ಗಳು ದೊಡ್ಡ ಲಾಭ ಮಾಡುವುದಿಲ್ಲ. ಬಹುಪಾಲು ಮ್ಯೂಚುವಲ್ ಫಂಡ್​ಗಳು ತೀರಾ ಕಡಿಮೆ ಲಾಭ ಅಥವಾ ನಷ್ಟ ತರುವುದುಂಟು. ಒಂದು ಸಮೀಕ್ಷೆ ಪ್ರಕಾರ, ಶೇ. 26.67ರಷ್ಟು ಮ್ಯೂಚುವಲ್ ಫಂಡ್​ಗಳು ಮಾತ್ರ 5 ವರ್ಷಗಳು ಬೆಂಚ್​ಮಾರ್ಕ್ ಇಂಡೆಕ್ಸ್​ಗಿಂತ (Benchmark Index) ಹೆಚ್ಚಿನ ಮಟ್ಟದ ರಿಟರ್ನ್ ಕೊಟ್ಟಿವೆಯಂತೆ. ದೊಡ್ಡ ಭರವಸೆಗಳನ್ನು ನಂಬಿ ಮ್ಯೂಚುವಲ್ ಫಂಡ್ ಮೇಲೆ ಹಣ ಹಾಕಿದ ಜನರು ಅಲವತ್ತುಕೊಳ್ಳದೇ ಬೇರೆ ದಾರಿ ಇಲ್ಲ. ಇಂಥ ಜನರಿಗೆ ಹೊರೆ ತಗ್ಗಿಸಲೆಂದು ಸೆಬಿ (SEBI) ಹೊಸ ದಾರಿ ಹುಡುಕಿದೆ. ಅದೇ ಮ್ಯೂಚುವಲ್ ಫಂಡ್​ಗಳಿಗೆ ಚಳಿ ಮೂಡಿಸುವ ದಾರಿ. ನಿರ್ದಿಷ್ಟ ಲಾಭ ತರದ ಮ್ಯೂಚುವಲ್ ಫಂಡ್​ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂಬ ನಿಯಮ. ಇದು ಇನ್ನೂ ಪ್ರಸ್ತಾವದ ಹಂತದಲ್ಲಿದೆ. ಆಗಲೇ ಇದು ಫಂಡ್ ಉದ್ಯಮವನ್ನು ಅಲ್ಲೋಲಕಲ್ಲೋಲಗೊಳಿಸತೊಡಗಿದೆ.

ಬೆಂಚ್​ಮಾರ್ಕ್ ದಾಟದ ಮ್ಯೂಚುವಲ್ ಫಂಡ್​ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ:

ಇಲ್ಲಿ ಬೆಂಚ್​ಮಾರ್ಕ್ ಇಂಡೆಕ್ಸ್​ಗಿಂತ ಹೆಚ್ಚಿನ ಮಟ್ಟದ ಲಾಭ ತರದ ಮ್ಯೂಚುವಲ್ ಫಂಡ್​ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂಬ ಪ್ರಸ್ತಾವವನ್ನು ಸೆಬಿ ಮುಂದಿಟ್ಟಿದೆ. ಬೆಂಚ್​ಮಾರ್ಕ್ ಇಂಡೆಕ್ಸ್ ಎಂದರೆ ಷೇರುಪೇಟೆಯಲ್ಲಿ ಆಯ್ದ ಷೇರುಗಳ ಸರಾಸರಿ ಬೆಲೆ. ಉದಾಹರಣೆಗೆ, ಬಿಎಸ್​ಇ ಸೆನ್ಸೆಕ್ಸ್30, ನಿಫ್ಟಿ50 ಇತ್ಯಾದಿ ಸೂಚ್ಯಂಕಗಳು. ಸೆನ್ಸೆಕ್ಸ್30 ಎಂಬುದು ಆಯ್ದ 30 ಪ್ರಮುಖ ಕಂಪನಿಗಳ ಷೇರುಗಳಾಗಿವೆ. ಈ ಷೇರುಗಳ ಬೆಲೆ ಏರಿಳಿಕೆಯ ಮೇಲೆ ಸೂಚ್ಯಂಕದಲ್ಲಿ ವ್ಯತ್ಯಾಸವಾಗುತ್ತವೆ. ಸಾಮಾನ್ಯವಾಗಿ ಈ ಸೂಚ್ಯಂಕಗಳು ವರ್ಷದಲ್ಲಿ ಶೇ. 10ರಷ್ಟು ಹೆಚ್ಚಾಗುತ್ತವೆ. ಈ ಸೂಚ್ಯಂಕಗಳ ದರವನ್ನು ಮ್ಯೂಚುವಲ್ ಫಂಡ್​ಗಳಿಗೆ ಮಾನದಂಡವಾಗಿ ಮಾಡಲು ಸೆಬಿ ಹೊರಟಿದೆ. ಮೇ 18ರಂದು ಸೆಬಿ ಬರೆದ ಕನ್ಸಲ್ಟೇಶನ್ ಪೇಪರ್​ನಲ್ಲಿ ಈ ಕಾರ್ಯನಿರ್ವಹಣೆ ಆಧಾರಿತ ಶುಲ್ಕ ಮಾದರಿ ವ್ಯವಸ್ಥೆಯ ಪ್ರಸ್ತಾವ ಇದೆ.

ಇದನ್ನೂ ಓದಿSEBI Notice: 14,000 ಕೋಟಿ ರೂ ಪಿಎನ್​ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಸೆಬಿ ನೋಟೀಸ್; ದಂಡ ಕಟ್ಟದಿದ್ದರೆ ಅರೆಸ್ಟ್; ಆತ ಇರುವುದಾದರೂ ಎಲ್ಲಿ?

ಮ್ಯೂಚುವಲ್ ಫಂಡ್​ಗಳ ಮ್ಯಾನೇಜ್ಮೆಂಟ್ ಫೀಸ್ ಎಷ್ಟು?

ಮ್ಯೂಚುವಲ್ ಫಂಡ್​ಗಳು ಜನರು ಹಾಕುವ ಹೂಡಿಕೆ ಹಣವನ್ನು ವಿವಿಧ ಷೇರುಗಳು, ಬಾಂಡ್​ಗಳು ಇತ್ಯಾದಿಗಳಲ್ಲಿ ಮರುಹೂಡಿಕೆ ಮಾಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೂಡಿಕೆ ಆಗುತ್ತದೆ. ಒಂದು ಕಂಪನಿಯ ಷೇರು ಬೆಲೆ ಏರಿಕೆ ಅಥವಾ ಇಳಿಕೆಯಾಗುವುದು ಆ ಕಂಪನಿಯ ಕ್ಷೇತ್ರ ಎಷ್ಟು ಆರೋಗ್ಯದಿಂದಿದೆ, ಕಂಪನಿ ಎಷ್ಟು ಲಾಭದಾಯಕವಾಗಿದೆ, ಭವಿಷ್ಯದಲ್ಲಿ ಈ ಉದ್ಯಮಕ್ಕೆ ಹೇಗಿದೆ ವಾತಾವರಣ ಇವೆಲ್ಲವೂ ಅವಲಂಬಿತವಾಗಬಹುದು. ಈ ಹಿನ್ನೆಲೆಯಲ್ಲಿ ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಕ್ಷೇಮಕರ ಎಂಬುದನ್ನು ನಿರ್ಧರಿಸಲು ಫಂಡ್ ಮ್ಯಾನೇಜರ್​ಗಳನ್ನು ನಿಯೋಜಿಸಲಾಗುತ್ತದೆ. ಈ ಫಂಡ್ ಮ್ಯಾನೇಜರ್​ಗಳ ಅಡಿಯಲ್ಲಿ ಪಕ್ಕಾ ವೃತ್ತಿಪರ ತಂಡ ಕಾರ್ಯನಿರ್ವಹಿಸುತ್ತದೆ. ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂದು ನಿರ್ಧರಿಸುವುದೇ ಈ ತಂಡದ ಕೆಲಸ. ಇಂಥ ಮ್ಯೂಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಲು ನಿರ್ದಿಷ್ಟ ಮ್ಯಾನೇಜ್ಮೆಂಟ್ ಶುಲ್ಕ ಪಾವತಿಸಬೇಕು. ಫಂಡ್​ನಿಂದ ಲಾಭವಾಗಲಿ, ನಷ್ಟವಾಗಲೀ ನಿರ್ದಿಷ್ಟ ಶುಲ್ಕ ಸಂದಾಯವಾಗಲೇಬೇಕು.

ಈಗ ಸೆಬಿ ಈ ನಿಯಮ ಬದಲಾವಣೆ ಮಾಡಲು ಹೊರಟಿದೆ. ಬೆಂಚ್ಮಾರ್ಕ್ ಇಂಡೆಕ್ಸ್​ಗಿಂತ ಕಡಿಮೆ ಲಾಭ ತರುವ ಮ್ಯೂಚುವಲ್ ಫಂಡ್​ಗಳು ಹೂಡಿಕೆದಾರರಿಂದ ಯಾವುದೇ ನಿರ್ವಹಣ ಶುಲ್ಕ ಪಡೆಯುವಂತಿಲ್ಲ ಎಂದು ಹೇಳಿದೆ. ಇಂಡೆಕ್ಸ್​ಗಿಂತ ಉತ್ತಮ ಲಾಭ ತಂದರೆ ಆಗ ಹೆಚ್ಚಿನ ಫೀಸ್ ವಸೂಲಿ ಮಾಡುವ ಅವಕಾಶವನ್ನೂ ಈ ಪ್ರಸ್ತಾವ ಮುಂದಿಟ್ಟಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್