AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡವಿಟ್ಟ ಚಿನ್ನ, ಲಾಕರ್​​ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್

What happens when customer's gold is lost by bank: ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ನೀವು ಸಾಲಕ್ಕಾಗಿ ಅಡವಿಟ್ಟ ಚಿನ್ನವು ಕಳುವಾಗಿ ಹೋದರೆ ಗ್ರಾಹಕರು ತೀರಾ ತಲೆಕೆಡಿಸಿಕೊಳ್ಳುವ ಹಂಗಿಲ್ಲ. ಚಿನ್ನದ ಮೌಲ್ಯದಷ್ಟು ಹಣವನ್ನು ನಿಮ್ಮ ಸಾಲಕ್ಕೆ ವಜಾ ಹಾಕಲಾಗುತ್ತದೆ. ಒಂದು ವೇಳೆ ಬ್ಯಾಂಕ್ ಲಾಕರ್ ಕಳುವಾದಲ್ಲಿ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಹಣವನ್ನು ಗ್ರಾಹಕರು ಪಡೆಯಲು ಸಾಧ್ಯ.

ಅಡವಿಟ್ಟ ಚಿನ್ನ, ಲಾಕರ್​​ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್
ಬ್ಯಾಂಕ್ ದರೋಡೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2025 | 12:06 PM

Share

ಬೆಂಗಳೂರು, ಜೂನ್ 4: ಕೆನರಾ ಬ್ಯಾಂಕ್​​ನಲ್ಲಿ ಮೊನ್ನೆ 59 ಕಿಲೋ ಚಿನ್ನದ ಕಳ್ಳತನವಾದ (Gold burglary) ಪ್ರಕರಣ ಗಮನಿಸಿರಬಹುದು. ಅದು ಸಾಲಕ್ಕಾಗಿ ಅಡವಿಟ್ಟಿದ್ದ ಚಿನ್ನ. ಬ್ಯಾಂಕುಗಳಲ್ಲಿ ಹೀಗೆ ಅಡವಿಡಲಾದ ಸಾಕಷ್ಟು ಚಿನ್ನ, ಆಸ್ತಿಪತ್ರಗಳು ಇರುತ್ತವೆ. ಹಾಗೆಯೇ, ಗ್ರಾಹಕರು ಲಾಕರ್​​ಗಳಲ್ಲೂ (bank lockers) ಬೆಲೆ ಬಾಳುವ ವಸ್ತುಗಳನ್ನು ಇರಿಸುತ್ತಾರೆ. ಈ ರೀತಿ ಇಟ್ಟ ಚಿನ್ನ ಇತ್ಯಾದಿ ವಸ್ತುಗಳು ಕಳುವಾದಾಗ ಏನಾಗುತ್ತದೆ? ಕಳುವಿಗೆ ಬ್ಯಾಂಕೇ ಹೊಣೆ. ಆದರೆ, ಎಷ್ಟು ಹೊಣೆ ಎಂಬುದು ಪ್ರಶ್ನೆ. ಈ ಬಗ್ಗೆ ಉತ್ತರ…

ಅಡವಿಟ್ಟ ಚಿನ್ನ ಕಳುವಾದಾಗ ಏನು?

ಕೆನರಾ ಬ್ಯಾಂಕ್ ಪ್ರಕರಣದಲ್ಲಾದಂತೆ, ನೀವು ಚಿನ್ನ ಅಡ ಇಟ್ಟು ಸಾಲ ಪಡೆದಾಗ ಅಕಸ್ಮಾತ್ ಆ ಚಿನ್ನವು ಕಳ್ಳತನ ಆಗಿ ಹೋದರೆ ಏನಾಗುತ್ತದೆ? ನಿಯಮಗಳ ಪ್ರಕಾರ, ನೀವು ಚಿನ್ನ ಅಡ ಇಟ್ಟಾಗ ಸಾಲ ಮರಳುವವರೆಗೂ ಅದು ಬ್ಯಾಂಕ್ ಆಸ್ತಿಯೇ ಆಗಿರುತ್ತದೆ. ಗ್ರಾಹಕರು ಚಿನ್ನಕ್ಕೆ ಪರ್ಯಾಯವಾಗಿ ಚಿನ್ನವನ್ನು ಪಡೆಯಲು ಆಗುವುದಿಲ್ಲ.

ನೀವು ಗೋಲ್ಡ್ ಲೋನ್ ಪಡೆಯುವಾಗ ಚಿನ್ನದ ಮೌಲ್ಯಮಾಪನ ಅಥವಾ ಅಸೆಸ್ಮೆಂಟ್ ಮಾಡಲಾಗುತ್ತದೆ. ಚಿನ್ನದ ಶುದ್ಧತೆ, ತೂಕ, ಹಾಗೂ ಅದರ ಮೌಲ್ಯವನ್ನು ರಸೀದಿಯಲ್ಲಿ ನಮೂದಿಸಲಾಗಿರುತ್ತದೆ. ಅದು ಬಹಳ ಮುಖ್ಯವಾದ ದಾಖಲೆ. ನಿಮ್ಮ ಚಿನ್ನ ಕಳುವಾದಾಗ ಈ ದಾಖಲೆಯೇ ನಿಮಗೆ ಆಧಾರ. ಇದರಲ್ಲಿ ನಮೂದಿಸಲಾಗಿರುವ ಮೌಲ್ಯದ ಹಣವನ್ನು ನೀವು ಕ್ಲೇಮ್ ಮಾಡಬಹುದು. ಬ್ಯಾಂಕ್ ಈ ಹಣವನ್ನು ನಿಮ್ಮ ಬಾಕಿ ಸಾಲಕ್ಕೆ ವಜಾ ಹಾಕಿ, ಉಳಿದದ್ದನ್ನು ಮರಳಿಸಬಹುದು.

ಇದನ್ನೂ ಓದಿ
Image
ಇನ್ಷೂರೆನ್ಸ್ ಪಾಲಿಸಿ ಪಡೆಯುವಾಗ ಧೂಮಪಾನ ಅಭ್ಯಾಸ ಮುಚ್ಚಿಟ್ಟರೆ ಏನು?
Image
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
Image
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
Image
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ

ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್

ನೀವು ಅಡವಿಟ್ಟು ಒಂದು ವರ್ಷದ ಮೇಲಾಗಿದ್ದು, ಅದರ ಮಾರುಕಟ್ಟೆ ಮೌಲ್ಯ ಈಗ ಬಹಳಷ್ಟು ಹೆಚ್ಚಾಗಿದ್ದಾಗ ಬ್ಯಾಂಕ್​​ನಲ್ಲಿ ಕೇಳಲು ಸಾಧ್ಯ. ಆದರೆ, ಇದಕ್ಕೆ ಬ್ಯಾಂಕ್ ಒಪ್ಪಬೇಕೆಂಬ ನಿಯಮ ಇಲ್ಲ.

ಲಾಕರ್​​ನಲ್ಲಿ ಇಟ್ಟ ಚಿನ್ನ ಕಳ್ಳತನ ಆದರೆ?

ಮನೆಯಲ್ಲಿ ಇಡುವುದು ಸುರಕ್ಷಿತವಲ್ಲ ಎಂದು ನೀವು ಬ್ಯಾಂಕ್​​ನ ಲಾಕರ್​​​ನಲ್ಲಿ ಚಿನ್ನ ಇಟ್ಟಿರಬಹುದು. ಒಂದು ವೇಳೆ ಲಾಕರ್ ಕಳ್ಳತನವಾಗಿಯೋ ಅಥವಾ ಪ್ರಕೃತಿ ವಿಕೋಪದಿಂದ ನಾಶವಾಗಿಯೂ ಆ ಚಿನ್ನ ಕಳೆದುಹೋದರೆ ಮುಂದೇನು?

ಈ ಸಂದರ್ಭದಲ್ಲಿ ಲಾಕರ್​ನ ವಾರ್ಷಿಕ ಬಾಡಿಗೆಯ 100 ಪಟ್ಟು ಹಣ ಮಾತ್ರವೇ ನಿಮಗೆ ಸಿಗಬಹುದು. ಒಂದು ವೇಳೆ, ನೀವು 50 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಲಾಕರ್​​ನಲ್ಲಿ ಇಟ್ಟಿದ್ದರೆ, ಅಷ್ಟಕ್ಕೂ ನಿಮಗೆ ಪರಿಹಾರ ಸಿಕ್ಕೋದಿಲ್ಲ.

ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್

ಇನ್ಷೂರೆನ್ಸ್ ಮಾಡಿಸಿರಬೇಕು…

ನೀವು ಲಾಕರ್​ನಲ್ಲಿರುವ ವಸ್ತುಗಳಿಗೆ ಪ್ರತ್ಯೇಕವಾಗಿ ಇನ್ಷೂರೆನ್ಸ್ ಮಾಡಿಸಿರಬೇಕು. ಲಾಕರ್​​ನಲ್ಲಿರುವ ವಸ್ತುಗಳು ನಿಮ್ಮವು ಎನ್ನುವುದಕ್ಕೆ ದಾಖಲೆಗಳು ಬೇಕು. ಚಿನ್ನ ಇರಿಸಿದ್ದರೆ ಅದನ್ನು ಎಲ್ಲಿ ಖರೀದಿಸಿದ್ದೀರಿ, ಅದರ ರಸೀದಿ ಇರಬೇಕು. ಹೀಗಿದ್ದಾಗ ನಿಮ್ಮ ವಸ್ತುಗಳ ಮೌಲ್ಯದಷ್ಟು ಹಣವನ್ನು ವಿಮಾ ಕಂಪನಿಗಳು ಭರಿಸಬಹುದು.

ಬ್ಯಾಂಕುಗಳು ಸಾಮಾನ್ಯವಾಗಿ ಚಿನ್ನ ಇತ್ಯಾದಿ ವಸ್ತುಗಳಿಗೆ ಇನ್ಷೂರೆನ್ಸ್ ಮಾಡಿಸುತ್ತವೆ. ಇದರ ಮೂಲಕ ಬ್ಯಾಂಕುಗಳು ಒಂದಷ್ಟು ಪರಿಹಾರ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಬಂಡೆಮಹಾಕಾಳಿ ದೇವಾಲಯಕ್ಕೆ ತಟ್ಟದ ಚಂದ್ರಗ್ರಹಣ; ಕಾಳಿಯ ದರ್ಶನಕ್ಕೆ ಜನವೋ ಜನ!
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಹೊರ ಓಡಿದ ವಕೀಲರು 
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್