AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು

Reserve Bank of India gold loan regulations: ಗೋಲ್ಡ್ ಲೋನ್ ವಿಚಾರಲ್ಲಿ ಆರ್​​ಬಿಐ ತುಸು ನಿರ್ಬಂಧಗಳನ್ನು ಹೇರಲು ಯೋಜಿಸಿದೆ. ಗೋಲ್ಡ್ ಲೋನ್​​ನ ಎಲ್​​ಟಿವಿ ಶೇ. 75ರ ಮಿತಿಯೊಳಗೆ ಇರಬೇಕು ಎನ್ನುವ ನಿಯಮ ಹಾಕಬಹುದು. ಲೋನ್ ಅವಧಿಯಲ್ಲಿ ಯಾವ ಸಂದರ್ಭದಲ್ಲೂ ಬಾಕಿ ಇರುವ ಸಾಲವು ಶೇ. 75ರ ಎಲ್​​ಟಿವಿ ಮಿತಿ ದಾಟಿ ಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು
ಗೋಲ್ಡ್ ಲೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 10, 2025 | 3:07 PM

RBI Gold Loan Guidelines: ಆಪತ್ಕಾಲಕ್ಕೆ ಚಿನ್ನ ಬಹಳ ಉಪಯೋಗಕ್ಕೆ ಬರುತ್ತದೆ. ಯಾವುದೇ ಬ್ಯಾಂಕು ಮತ್ತು ಫೈನಾನ್ಸ್ ಕಂಪನಿಗೆ ಒಡವೆ ಒತ್ತೆ ಇಟ್ಟು ಸುಲಭವಾಗಿ ಸಾಲ ಪಡೆಯಬಹುದು. ಬ್ಯಾಂಕುಗಳಿಗೂ ಈ ಗೋಲ್ಡ್ ಲೋನ್ ರಿಸ್​ರಹಿತ ಎನಿಸುತ್ತವೆ. ಆದರೆ, ಈಗ ಭಾರತೀಯ ರಿಸರ್ವ್ ಬ್ಯಾಂಕ್ ಗೋಲ್ಡ್ ಲೋನ್ (Gold Loan) ಮೇಲೆ ಕಣ್ಣಿಟ್ಟಿದೆ. ನಿನ್ನೆ ಆರ್​​ಬಿಐ ಎಂಪಿಸಿ ಸಭೆ ಬಳಿಕ ಗೋಲ್ಡ್ ಲೋನ್ ನಿಯಮಗಳನ್ನು ಪರಿಷ್ಕರಿಸುವುದಾಗಿ ಹೇಳಲಾಗಿದೆ. ಅದರಂತೆ ಡ್ರಾಫ್ಟ್​​ವೊಂದನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಾಡಲಾಗಿರುವ ಪ್ರಸ್ತಾವಗಳಲ್ಲಿ ಪ್ರಮುಖವಾದುದ ಎಲ್​​ಟಿವಿ, ಅಥವಾ ಲೋನ್ ಟು ವ್ಯಾಲ್ಯು. ಅಂದರೆ, ಚಿನ್ನದ ಮೌಲ್ಯಕ್ಕೆ ಅನುಗುಣವಾದ ಸಾಲ.

ಕೋವಿಡ್ ಸಂದರ್ಭದಲ್ಲಿ ಜನರಿಗೆ ಗೋಲ್ಡ್ ಲೋನ್ ಸುಲಭವಾಗಿ ಸಿಗಲು ಸಾಧ್ಯವಾಗಲಿ ಎಂದು ಎಲ್​​ಟಿವಿಯನ್ನು ಶೇ. 90ಕ್ಕೆ ಹೆಚ್ಚಿಸಲಾಗಿತ್ತು. ಅಂದರೆ, ಚಿನ್ನದ ಮೌಲ್ಯದ ಶೇ. 90ರಷ್ಟು ಹಣವನ್ನು ಬ್ಯಾಂಕುಗಳು ಸಾಲವಾಗಿ ಕೊಡಲು ಅವಕಾಶ ಕೊಡಲಾಗಿತ್ತು. ಈಗ ಎಲ್​​ಟಿವಿಯನ್ನು ಶೇ. 75ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ.

ಬಡ್ಡಿ ಕಟ್ಟದೇ ಬಾಕಿ ಉಳಿಯುವ ಹಣವೂ ಎಲ್​​ಟಿವಿ ವ್ಯಾಪ್ತಿಯಲ್ಲಿ…

ಗಮನಿಸಬೇಕಾದ ಸಂಗತಿ ಎಂದರೆ, ಗ್ರಾಹಕರು ಶೇ. 75ರಷ್ಟು ಎಲ್​​ಟಿವಿಯಲ್ಲಿ ಗೋಲ್​ಡ್ ಲೋನ್ ಪಡೆದರೆಂದಿಟ್ಟುಕೊಳ್ಳಿ. ಒಂದು ವರ್ಷ ಅಥವಾ ಕೆಲ ತಿಂಗಳಾದರೂ ಯಾವುದೇ ಬಡ್ಡಿ ಕಟ್ಟದೇ ಹೋದರೆ ಆಗ ಇರುವ ಸಾಲ ಬಾಕಿಯು ಶೇ. 75ರ ಎಲ್​​ಟಿವಿ ಮಿತಿಯಲ್ಲೇ ಇರಬೇಕು ಎನ್ನುವ ನಿಯಮವನ್ನು ಆರ್​​ಬಿಐ ತರುತ್ತಿದೆ.

ಇದನ್ನೂ ಓದಿ
Image
ಸರ್ಕಾರದಿಂದ ಎಸ್​​ಜಿಬಿ ಬಾಕಿ 1.2 ಲಕ್ಷ ಕೋಟಿ ರೂ?
Image
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
Image
ಚಿನ್ನದ ಬೆಲೆ ಇಳಿಕೆ ಯಾವಾಗ?
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ಇದನ್ನೂ ಓದಿ: ಎಸ್​​ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ

ಉದಾಹರಣೆಗೆ, ನೀವು 10 ಗ್ರಾಮ್ ಒಡವೆ ಒತ್ತೆ ಇಟ್ಟರೆ, ಅದರ ಒಂದು ಗ್ರಾಮ್ ಮೌಲ್ಯ 8,500 ರೂ ಇಂದಿಟ್ಟುಕೊಂಡರೆ, ನಿಮಗೆ 63,750 ರೂ ಸಾಲದ (ಶೇ. 75 ಎಲ್​​​ಟಿವಿ) ಅವಕಾಶ ಇರುತ್ತದೆ. ನೀವು ಕೆಲ ಕಾಲ ಬಡ್ಡಿ ಕಟ್ಟದೇ, ಸುಮಾರು 10,000 ರೂ ಬಡ್ಡಿ ಬೆಳೆದು ನಿಮ್ಮ ಸಾಲ ಬಾಕಿ 73,000 ಆಯಿತು ಎಂದಿಟ್ಟುಕೊಳ್ಳಿ. ಅದು ಶೇ. 75ರ ಎಲ್​​ಟಿವಿ ವ್ಯಾಪ್ತಿಯೊಳಗೇ ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ದಂಡ ಕಟ್ಟಬೇಕಾಗುತ್ತದೆ.

ಇಲ್ಲಿ ದಂಡ ಎಂದರೆ, ಒಟ್ಟು ಸಾಲದ ಹಣದಲ್ಲಿ ಶೇ. 1ರಷ್ಟನ್ನು ಬ್ಯಾಂಕ್​​ನವರು ಲೋನ್​​ಗೆ ಕವರ್ ಆಗಿ ಎತ್ತಿಡಬೇಕು. 30 ದಿನಗಳಿಗಿಂತ ಹೆಚ್ಚು ಅವಧಿ ಶೇ. 75ರ ಎಲ್​​ಟಿವಿ ಮಿತಿ ಹೆಚ್ಚು ಇದ್ದಾಗ ಈ ಕ್ರಮ ಇರುತ್ತದೆ. ಬ್ಯಾಂಕ್​ನವರು ಗ್ರಾಹಕರಿಂದ ಆದಷ್ಟು ಬೇಗ ಬಡ್ಡಿಯನ್ನಾದರೂ ವಸೂಲಿ ಮಾಡಿ ಎಲ್​​ಟಿವಿಯನ್ನು ಶೇ. 75ರ ಮಿತಿಯೊಳಗೆ ತರಬೇಕಾಗುತ್ತದೆ.

ಬ್ಯಾಂಕಿಗಿಂತ ಎನ್​​ಬಿಎಫ್​​ಸಿಗಳಿಗೆ ಹೆಚ್ಚು ನಿರ್ಬಂಧ

ಎಲ್​​ಟಿವಿ ವಿಚಾರದಲ್ಲಿ ಆರ್​​ಬಿಐ ಎನ್​​ಬಿಎಫ್​​ಸಿಗಳ ಮೇಲೆ ತುಸು ಕಠಿಣವಾಗಿದೆ. ಎರಡು ರೀತಿಯ ಸಾಲಗಳಿರುತ್ತವೆ. ಕನ್ಸಂಪ್ಷನ್ ಲೋನ್ ಅಥವಾ ಅನುಭೋಗ ಸಾಲ. ಮತ್ತೊಂದು ಆದಾಯ ಸೃಷ್ಟಿಸುವ ಸಾಲ. ಕನ್ಸಂಪಕ್ಷನ್ ಲೋನ್ ಎಂಬುದು ಪರ್ಸನಲ್ ಲೋನ್, ವೆಹಿಕಲ್ ಲೋನ್, ಆಸ್ಪತ್ರೆ ಚಿಕಿತ್ಸೆ ಇತ್ಯಾದಿ ದೈನಂದಿನ ಖರ್ಚುವೆಚ್ಚಗಳಿಗೆ ಮಾಡಲಾಗುವ ಸಾಲವಾಗಿರುತ್ತದೆ. ಇನ್ಕಮ್ ಜನರೇಶನ್ ಲೋನ್ ಎಂದರೆ ಬ್ಯುಸಿನೆಸ್​​ಗಳಿಗೆ ಬಳಸಲಾಗುವ ಲೋನ್ ಆಗಿರುತ್ತದೆ.

ಇದನ್ನೂ ಓದಿ: ಗೋಲ್ಡ್ ಲೋನ್​​ಗೆ ಸಮಗ್ರ ಮಾರ್ಗಸೂಚಿ ಹೊರಡಿಸಲಿದೆ ಆರ್​​ಬಿಐ; ನಿಯಮ ಬಿಗಿಗೊಳ್ಳುತ್ತದಾ? ಗವರ್ನರ್ ಸ್ಪಷ್ಟನೆ ಇದು

ಕಮರ್ಷಿಯಲ್ ಬ್ಯಾಂಕುಗಳು ಇನ್ಕಮ್ ಜನರೇಶನ್​​ಗೆ ನೀವು ಒಡವೆ ಸಾಲಗಳಿಗೆ ಶೇ. 75ರ ಎಲ್​​ಟಿವಿ ಮಿತಿ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಬಹುದು. ಆದರೆ, ಎನ್​​ಬಿಎಫ್​​ಸಿಗಳು ಕನ್ಷಂಪ್ಷನ್ ಸಾಲವಾಗಲೀ, ಇನ್ಕಮ್ ಜನರೇಶನ್ ಸಾಲವಾಗಲಿ ಶೇ. 75ರ ಎಲ್​​ಟಿವಿ ಮಿತಿಯನ್ನು ಪಾಲಿಸಬೇಕಾಗುತ್ತದೆ.

ಇದೇ ಕಾರಣಕ್ಕೆ ಎನ್​​ಬಿಎಫ್​​ಸಿಗಳ ಷೇರುಬೆಲೆ ಇಳಿಕೆ ಆಗುತ್ತಿರುವುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Thu, 10 April 25

ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್