AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITPCLನಲ್ಲಿನ ಎನ್​ಪಿಎ ಖಾತೆಯಲ್ಲಿ 2,060 ಕೋಟಿ ರೂ. ಸಾಲ ವಂಚನೆ ವರದಿ ಮಾಡಿದ ಪಿಎನ್​ಬಿ

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ತಮಿಳುನಾಡು ಐಟಿಪಿಸಿಎಲ್​ನ ಎನ್​ಪಿಎ 2060 ಕೋಟಿ ರೂಪಾಯಿಯ ಎನ್​ಪಿಎ ವರದಿ ಮಾಡಲಾಗಿದೆ.

ITPCLನಲ್ಲಿನ ಎನ್​ಪಿಎ ಖಾತೆಯಲ್ಲಿ 2,060 ಕೋಟಿ ರೂ. ಸಾಲ ವಂಚನೆ ವರದಿ ಮಾಡಿದ ಪಿಎನ್​ಬಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 16, 2022 | 2:17 AM

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಿಂದ ಮಾರ್ಚ್ 15ನೇ ತಾರೀಕಿನಂದು IL&FS ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ (ITPCL)ನ NPA ಖಾತೆಯಲ್ಲಿ 2,060 ಕೋಟಿ ರೂಪಾಯಿಗಳ ವಂಚನೆಯನ್ನು ವರದಿ ಮಾಡಿದೆ. ನಿಗದಿತ ವಿವೇಚನಾ ನಿಯಮಗಳ ಪ್ರಕಾರ, 824.1 ಕೋಟಿ ರೂಪಾಯಿ ಮೊತ್ತದ ಪ್ರಾವಿಷನ್ ಈಗಾಗಲೇ ಮಾಡಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ನಿಯಂತ್ರಕ ಫೈಲಿಂಗ್‌ನಲ್ಲಿ ಪಿಎನ್‌ಬಿ ಹೀಗೆ ಹೇಳಿದೆ: “ಕಂಪೆನಿಯ ಖಾತೆಗಳಲ್ಲಿ 2060.14 ಕೋಟಿ ರೂ.ಗಳ ವಂಚನೆಯನ್ನು ಬ್ಯಾಂಕ್​ನಿಂದ ಆರ್‌ಬಿಐಗೆ ವರದಿ ಮಾಡುತ್ತಿದೆ. ನಿಗದಿತ ವಿವೇಕದ ಮಾನದಂಡಗಳ ಪ್ರಕಾರ, ಬ್ಯಾಂಕ್ ಈಗಾಗಲೇ 824.06 ಕೋಟಿ ರೂಪಾಯಿ ಪ್ರಾವಿಷನ್ ಮಾಡಿದೆ.”

ನಿಖರವಾಗಿ ಒಂದು ತಿಂಗಳ ಹಿಂದೆ, ಫೆಬ್ರವರಿಯಲ್ಲಿ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ IL&FS ತಮಿಳುನಾಡು ವಂಚನೆ ಖಾತೆಯನ್ನು ಘೋಷಿಸಿದ್ದು, 148 ಕೋಟಿ ರೂಪಾಯಿ ಬಾಕಿ ಇದೆ ಎಂದಿದೆ. “148.86 ಕೋಟಿ ರೂಪಾಯಿಗಳ ಬಾಕಿ ಇರುವ ಎನ್‌ಪಿಎ ಖಾತೆ, ಅಂದರೆ ಐಎಲ್‌ಅಂಡ್‌ಎಫ್‌ಎಸ್ ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ ಅನ್ನು ವಂಚನೆ ಎಂದು ಘೋಷಿಸಲಾಗಿದೆ. ಮತ್ತು ನಿಯಂತ್ರಕ ಅಗತ್ಯಗಳ ಪ್ರಕಾರ ಇಂದು ಆರ್‌ಬಿಐಗೆ ವರದಿ ಮಾಡಲಾಗಿದೆ,” ಎಂದು ಬ್ಯಾಂಕ್​ನಿಂದ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ.

ತಮಿಳುನಾಡಿನ ಕಡಲೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ತನ್ನ ಎನರ್ಜಿ ಪ್ಲಾಟ್​ಫಾರ್ಮ್​ IEDCL ಅಡಿಯಲ್ಲಿ ಸಾಲದ ಹೊರೆ ಹೊತ್ತಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (IL&FS) ನಿಂದ ಕಂಪೆನಿಯನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಆಗಿ ಸ್ಥಾಪಿಸಲಾಯಿತು.

ಇದನ್ನೂ ಓದಿ: Bank Locker Fee: ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್​ಬಿ ಬ್ಯಾಂಕ್ ಲಾಕರ್​ ಶುಲ್ಕಗಳ ವಿವರ ಇಲ್ಲಿದೆ

ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ