AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷುವಲ್ ಎಫೆಕ್ಟ್ಸ್ ಕೊಡಲು ಬಾಹುಬಲಿಯಂಥ ಸಿನಿಮಾ ಬರಲಿಲ್ಲ: ಸ್ಪಿರಿಟ್ ಮೀಡಿಯಾ ಮುಚ್ಚಲು ಕಾರಣ ತಿಳಿಸಿದ ರಾನಾ ದಗ್ಗುಬಾಟಿ

Rana Daggubati and Visual Effects: ರಾನಾ ದಗ್ಗುಬಾಟಿ 2005ರಲ್ಲಿ ಸ್ಪಿರಿಟ್ ಮೀಡಿಯಾ ಕಂಪನಿ ಸ್ಥಾಪಿಸಿದ್ದರು. ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ಕೊಡುವ ಬಿಸಿನೆಸ್ ಅದರದ್ದು. 2006ರಲ್ಲಿ ಮಹೇಶ್ ಬಾಬು ನಟನೆಯ ಸೈನಿಕುಡು ಸಿನಿಮಾಗೆ ಇವರ ಕಂಪನಿಯೇ ಸ್ಪೆಷಲ್ ಎಫೆಕ್ಟ್ಸ್ ನೀಡಿದ್ದು. ಇದಕ್ಕಾಗಿ ರಾನಾ ಅವರಿಗೆ ಆಂಧ್ರದ ನಂದಿ ಪ್ರಶಸ್ತಿ ಬಂದಿತ್ತು. ಆದರೆ, ಬಾಹುಬಲಿಯಂಥ ಸಿನಿಮಾಗೆ ಕೆಲಸ ಮಾಡಬೇಕೆಂಬ ಕನಸು ಆಗ ನನಸಾಗಲಿಲ್ಲ. ಈ ಹತಾಶೆಯಲ್ಲಿ ಕಂಪನಿ ಮಾರಿದರಂತೆ ದಗ್ಗುಬಾಟಿ.

ವಿಷುವಲ್ ಎಫೆಕ್ಟ್ಸ್ ಕೊಡಲು ಬಾಹುಬಲಿಯಂಥ ಸಿನಿಮಾ ಬರಲಿಲ್ಲ: ಸ್ಪಿರಿಟ್ ಮೀಡಿಯಾ ಮುಚ್ಚಲು ಕಾರಣ ತಿಳಿಸಿದ ರಾನಾ ದಗ್ಗುಬಾಟಿ
ರಾಣಾ ದಗ್ಗುಬಾಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2023 | 4:30 PM

Share

ರಾನಾ ದಗ್ಗುಬಾಟಿ (Rana Daggubati ಸದ್ಯ ಟಾಲಿವುಡ್​ನಲ್ಲಿ ಇರುವ ಶ್ರೇಷ್ಠ ನಟರಲ್ಲಿ ಒಬ್ಬರು. ಬಾಹುಬಲಿ ಸಿನಿಮಾದಲ್ಲಿ ಇವರ ವಿಲನ್ ಪಾತ್ರ ಕಂಡು ಸೋಜಿಗರಾಗದವರು ಯಾರಿದ್ದಾರೆ ಹೇಳಿ..? ಇವರು ನಟನೆಗೆ ಬರುವ ಮುನ್ನ ನಿರ್ಮಾಪಕ ಮತ್ತು ವಿಷುವಲ್ ಎಫೆಕ್ಟ್ಸ್ ತಂತ್ರಜ್ಞರೂ (visual effects ಹೌದು. 2010ರಲ್ಲಿ ಇವರು ನಟನೆಗೆ ಬಂದವರು. ಆದರೆ, 2005ರಲ್ಲೇ ಇವರು ಸ್ಪಿರಿಟ್ ಮೀಡಿಯಾ (spirit media) ಎಂಬ ವಿಷುವಲ್ ಎಫೆಕ್ಟ್ಸ್ ಕಂಪನಿ ಸ್ಥಾಪಿಸಿದ್ದರಂತೆ. ಆಗ ಹೇಳಿಕೊಳ್ಳುವ ದೊಡ್ಡ ಸಿನಿಮಾಗಳ್ಯಾವುವೂ ಬರದೇ ಕೊನೆಗೆ ಅದನ್ನು ಮಾರಿ ಕೈತೊಳೆದುಕೊಂಡರಂತೆ.

ರಾಣಾ ದಗ್ಗುಬಾಟಿ ಅಥವಾ ರಾನಾ ದಗ್ಗುಬಾಟಿ ಅವರ ಪೂರ್ಣ ಹೆಸರು ರಾಮಾನಾಯ್ಡು ದಗ್ಗುಬಾಟಿ. ಖ್ಯಾತ ಟಾಲಿವುಡ್ ನಿರ್ಮಾಪಕ ರಾಮಾ ನಾಯ್ಡು (producer ramanaidu) ಅವರ ಮೊಮ್ಮಗ. ಅಕ್ಕಿನೇನಿ-ದಗ್ಗುಬಾಟಿ (Daggubati Akkineni family) ಕುಟುಂಬದ ಸದಸ್ಯ. ಅಕ್ಕಿನೇನಿ ನಾಗೇಶ್ವರರಾವ್, ನಾಗಾರ್ಜುನ ಮೊದಲಾದವರು ಈ ಕುಟುಂಬಕ್ಕೆ ಸೇರಿದವರು.

ಬಾಹುಬಲಿಯಂತಹ ಸಿನಿಮಾಗಾಗಿ ಕಾಯುತ್ತಿದ್ದೆ…

ರಾನಾ ದಗ್ಗುಬಾಟಿ 2005ರಲ್ಲಿ ಸ್ಪಿರಿಟ್ ಮೀಡಿಯಾ ಕಂಪನಿ ಸ್ಥಾಪಿಸಿದ್ದರು. ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ಕೊಡುವ ಬಿಸಿನೆಸ್ ಅದರದ್ದು. 2006ರಲ್ಲಿ ಮಹೇಶ್ ಬಾಬು ನಟನೆಯ ಸೈನಿಕುಡು ಸಿನಿಮಾಗೆ ಇವರ ಕಂಪನಿಯೇ ಸ್ಪೆಷಲ್ ಎಫೆಕ್ಟ್ಸ್ ನೀಡಿದ್ದು. ಇದಕ್ಕಾಗಿ ರಾನಾ ಅವರಿಗೆ ಆಂಧ್ರದ ನಂದಿ ಪ್ರಶಸ್ತಿ ಬಂದಿತ್ತು.

ಇದನ್ನೂ ಓದಿ: ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ

ರಾನಾ ದಗ್ಗುಬಾಟಿ ಅವರು ಬಹಳ ದೊಡ್ಡ ಆಲೋಚನೆಯಲ್ಲಿ ಸ್ಪಿರಿಟ್ ಮೀಡಿಯಾ ಸ್ಥಾಪಿಸಿದ್ದರು. ಹಾಲಿವುಡ್ ರೇಂಜ್​ನಲ್ಲಿ ಸಿನಿಮಾ ವಿಷುವಲ್ ಎಫೆಕ್ಟ್ಸ್ ಕೊಡಲು ತಹತಹಿಸಿದ್ದರು. ಆದರೆ, ಆ ರೀತಿ ಕೆಲಸ ಬೇಡುವ ಸಿನಿಮಾ ಯಾವುದೂ ಬರಲೇ ಇಲ್ಲ. 70ಕ್ಕೂ ಹೆಚ್ಚು ಸಿನಿಮಾಗಳಿಗೆ ವಿಷುವಲ್ ಎಫೆಕ್ಟ್ಸ್ ನೀಡಿದರೂ ರಾಜಮೌಳಿ ಅವರ ಬಾಹುಬಲಿಯಂಥ ಸಿನಿಮಾಗಾಗಿ ದಗ್ಗುಬಾಟಿ ಕಾಯುತ್ತಿದ್ದರು. ಆದರೆ ಆಗ ಇಂಥ ಸಿನಿಮಾ ಬರಲಿಲ್ಲ.

ಐದು ವರ್ಷ ಸ್ಪಿರಿಟ್ ಮೀಡಿಯಾ ನಡೆಸಿದ ರಾಣಾ ದಗ್ಗುಬಾಟಿಗೆ ನಿರಾಸೆ ಮತ್ತು ಹತಾಶೆ ಎರಡೂ ಆಯಿತು. ಕೊನೆಗೆ ಪ್ರೈಮ್ ಫೋಕಸ್ ಎಂಬ ಕಂಪನಿಗೆ ಸ್ಪಿರಿಟ್ ಮೀಡಿಯಾವನ್ನು ಮಾರಿದರು. ಈ ಪ್ರೈಮ್ ಫೋಕಸ್ ಈಗ ವಿಶ್ವದ ಅತಿದೊಡ್ಡ ವಿಷುವಲ್ ಎಫೆಕ್ಟ್ಸ್ ಕಂಪನಿ ಆಗಿದೆ.

ತನ್ನ ಸ್ಪಿರಿಟ್ ಮೀಡಿಯಾ ಕಂಪನಿ ಮಾರುವ ಸಂದರ್ಭದಲ್ಲಿ ರಾಣಾ ದಗ್ಗುಬಾಟಿ ಅವರಿಗೆ ತಾನು ಬಹಳ ಮುಂಚಿತವಾಗಿ ವಿಷುವಲ್ ಎಫೆಕ್ಟ್ಸ್ ಕ್ಷೇತ್ರಕ್ಕೆ ಕಾಲಿಟ್ಟುಬಿಟ್ಟೆ ಅಂತ ಅನಿಸಿತಂತೆ.

ಅಪ್ಪ ಮಾತು ಬಿಟ್ಟರು…

ರಾಣಾ ದಗ್ಗುಬಾಟಿ ಅವರು ಸ್ಪಿರಿಟ್ ಮೀಡಿಯಾ ಕಂಪನಿ ಮುಚ್ಚಿದಾಗ ಅವರ ತಂದೆ ಕೆಲ ಕಾಲ ಮಾತುಬಿಟ್ಟಿದ್ದರಂತೆ. ನಿನಗೆ ಕಂಪನಿ ನಡೆಸಲು ಆಗದೇ ಮುಚ್ಚುತ್ತಿದ್ದೀಯಾ ಎಂಬುದು ಅವರ ಆಕ್ಷೇಪವಾಗಿತ್ತು. ಅದೇನೇ ಆಗಲೀ, ರಾಣಾ ದಗ್ಗುಬಾಟಿ ತಮ್ಮ ಸ್ಪಿರಿಟ್ ಮೀಡಿಯಾ ಮುಚ್ಚಿದ ಐದಾರು ವರ್ಷಕ್ಕೆ ಅವರ ಕನಸಿನ ಬಾಹುಬಲಿ ಸಿನಿಮಾ ಬಂದಿತ್ತು. ಕಾಕತಾಳೀಯವಾಗಿ, ಎರಡು ಸರಣಿಯ ಆ ಸಿನಿಮಾದಲ್ಲಿ ದಗ್ಗುಬಾಟಿ ಪ್ರಮುಖ ವಿಲನ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ ಮೇಲೆ ಹಿರಿಯ ನಿರ್ದೇಶಕ ಗರಂ: ಕಾರಣ?

ರಾಣಾ ದಗ್ಗುಬಾಟಿ ಆಗ ವಿಷುವಲ್ ಎಫೆಕ್ಟ್ಸ್ ವ್ಯವಹಾರದಲ್ಲಿ ಇದ್ದದ್ದು ಮಾತ್ರವಲ್ಲ, ಪ್ರೊಡ್ಯೂಸರ್ ಕೂಡ ಆಗಿದ್ದರು. ಸದ್ಯ ಹಿರಣ್ಯಕಶಿಪು ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ರಾನಾ ದಗ್ಗುಬಾಟಿ, ನಟನೆಯ ಜೊತೆಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತಿ ಬ್ಯುಸಿ ಇದ್ದಾರೆ.

ಇವತ್ತು ದಿ ಸ್ಪಿರಿಟ್ ಮೀಡಿಯಾ ಎಂಬ ಇನ್ನೊಂದು ಕಂಪನಿಯನ್ನು ರಾಣಾ ದಗ್ಗುಬಾಟಿ ನಿರ್ವಹಿಸುತ್ತಿದ್ದಾರೆ. ಇದು ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು