AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ

India's Rs 7,280 crore rare earth mineral plan: ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಸೋಲಾರ್ ಇತ್ಯಾದಿ ನಾನಾ ಅಪ್ಲಿಕೇಶನ್​ಗಳಿಗೆ ರೇರ್ ಅರ್ಥ್ ಮ್ಯಾಗ್ನೆಟ್ ಬಳಕೆ ಅನಿವಾರ್ಯ. ಈ ವಿರಳ ಭೂ ಖನಿಜಗಳ ಸಂಪತ್ತು ಬಹುತೇಕ ಚೀನಾ ಕೈಯಲ್ಲಿದೆ. ಅಮೆರಿಕ ಸೇರಿದಂತೆ ಹೆಚ್ಚಿನ ದೇಶಗಳು ವಿರಳ ಭೂ ಖನಿಜಗಳಿಗೆ ಚೀನಾ ಮೇಲೆ ಅವಲಂಬಿತವಾಗಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಈ ಅವಲಂಬನೆ ತಪ್ಪಿಸಲು ಭಾರತ 7,280 ಕೋಟಿ ರೂ ಪ್ಲಾನ್ ಹಾಕಿದೆ.

ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ
ವಿರಳ ಭೂ ಖನಿಜ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2025 | 12:59 PM

Share

ನವದೆಹಲಿ, ನವೆಂಬರ್ 27: ದಶಕಗಳ ಕಾಲ ಜಾಗತಿಕ ಬೆಳವಣಿಗೆಗೆ ಪೆಟ್ರೋಲಿಯಂ ಪುಷ್ಟಿ ಕೊಟ್ಟಂತೆ, ಮುಂದಿನ ಹಂತದ ವಿಶ್ವ ಏಳ್ಗೆಗೆ ವಿರಳ ಭೂ ಖನಿಜಗಳು (Rare Earth Minerals) ಕಾರಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಈಗ ವಿರಳ ಭೂ ಖನಿಜಗಳಿಗೆ ಇಡೀ ಜಗತ್ತು ಬಹುತೇಕ ಚೀನಾ (China) ಮೇಲೆ ಅವಲಂಬಿತವಾಗಿವೆ. ಅಮೆರಿಕದಂಥ ಅಮೆರಿಕವೇ ಚೀನಾವನ್ನು ಮುಟ್ಟಲು ಹೆದರುವಂತಾಗಿದೆ. ಇದಕ್ಕೆ ಕಾರಣವೇ ಚೀನಾ ಬಳಿ ಇರುವ ವಿರಳ ಭೂ ಖನಿಜಗಳ ಸಂಪತ್ತು. ಈ ರೇರ್ ಅರ್ಥ್ ಮಿನರಲ್ ಅಥವಾ ಮ್ಯಾಗ್ನೆಟ್ ಇಲ್ಲದಿದ್ದರೆ ಅಮೆರಿಕದ ಸ್ಮಾರ್ಟ್​ಫೋನೂ ಕೆಲಸ ಮಾಡಲ್ಲ, ಲ್ಯಾಪ್ಟಾಪ್ ಕೂಡ ಕೆಲಸ ಮಾಡಲ್ಲ. ಎದುರಾಳಿಗಳನ್ನು ನಡುಕ ಹುಟ್ಟಿಸಬಲ್ಲ ಎಫ್-35ನಂತಹ ಯುದ್ಧ ವಿಮಾನವೂ ಸದ್ದು ಮಾಡಲ್ಲ. ಆ ಮಟ್ಟಿಗೆ ವಿಶ್ವದ ತಂತ್ರಜ್ಞಾನ ಲೋಕವು ವಿರಳ ಭೂ ಖನಿಜಗಳ ಮೇಲೆ ಅವಲಂಬಿತವಾಗಿದೆ.

ಯಾಕೆ ಮುಖ್ಯ ಈ ವಿರಳ ಭೂ ಖನಿಜ?

ವಿರಳ ಭೂ ಖನಿಜಗಳು ವಿಶ್ವಾದ್ಯಂತ ಲಭ್ಯ ಇವೆ. ಆದರೆ, ಅದನ್ನು ಹೆಕ್ಕಿ ತೆಗೆಯುವುದೇ ಬಹಳ ಕಷ್ಟದ ಕೆಲಸ. ಬೆಟ್ಟ ಅಗೆದು ಇಲಿ ಹಿಡಿದಂತೆ. ಇದರ ಗಣಿಗಾರಿಕೆಯಿಂದ ಪರಿಸರಕ್ಕೆ ತೀವ್ರ ಮಾಲಿನ್ಯ ಹರಡುತ್ತದೆ. ಹೀಗಾಗಿ, ಮುಂದುವರಿದ ದೇಶಗಳು ಈ ಕೆಲಸವನ್ನು ತೃತೀಯ ಜಗತ್ತಿಗೆ ವರ್ಗಾಯಿಸಿದಂತಿವೆ. ಚೀನಾ ತನ್ನ ವಿನೂತನ ತಂತ್ರಜ್ಞಾನಗಳನ್ನು ಬಳಸಿ ವಿರಳ ಭೂ ಖನಿಜಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪರಿಣಿತಿ ಗಳಿಸಿದೆ. ಹಲವು ದಶಕಗಳ ಅನುಭವದಿಂದ ಇವತ್ತು ಶೇ. 90ರಷ್ಟು ವಿರಳ ಭೂ ಖನಿಜ ಮಾರುಕಟ್ಟೆ ಚೀನಾ ಹಿಡಿತದಲ್ಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಎಚ್​ಡಿಕೆ ಪ್ರಸ್ತಾಪ ಪರಿಗಣಿಸಿದ ಕೇಂದ್ರ ಸರ್ಕಾರ

ಎಲ್ಲೆಲ್ಲಿಗೆ ಬೇಕು ಈ ವಿರಳ ಭೂ ಖನಿಜ?

ಸ್ಕ್ಯಾಂಡಿಯಂ, ವೈಟ್ರಿಯಂ, ಲ್ಯಾಂಥಾನಂ, ನಿಯೋಡೈಮಿಯಂ, ಗ್ಯಾಡೋಲಿನಿಯಂ, ಲುಟೇಟಿಯಂ ಇತ್ಯಾದಿ 17 ಮೂಲವಸ್ತುಗಳನ್ನು ರೇರ್ ಅರ್ಥ್ ಮಿನರಲ್ ಎಂದು ವರ್ಗೀಕರಿಸಲಾಗಿದೆ. ಇವು ಬಹಳ ವ್ಯಾಪಕವಾಗಿ ಲಭ್ಯ ಇರುತ್ತವೆ. ಆದರೆ, ಸ್ವತಂತ್ರವಾಗಿ ಇವು ಇರುವುದಿಲ್ಲ. ಬೇರೆ ವಸ್ತುಗಳೊಂದಿಗೆ ಬೆರೆತು ಹೋಗಿರುತ್ತವೆ. ಇವುಗಳನ್ನು ಬೇರ್ಪಡಿಸುವ ಕಾರ್ಯ ಬಹಳ ಸಂಕೀರ್ಣವಾದುದು.

ಈ ವಿರಳ ಭೂ ಖನಿಜಗಳನ್ನು ಶಕ್ತಿಶಾಲಿ ಮ್ಯಾಗ್ನೆಟ್ ತಯಾರಿಸಲು ಬಳಸಲಾಗುತ್ತದೆ. ಬಹಳ ಪುಟ್ಟ ಗಾತ್ರದ ಆದರೆ, ಅಗಾಧ ಶಕ್ತಿಯ ಮ್ಯಾಗ್ನೆಟ್ ತಯಾರಿಸಲು ಸಾಧ್ಯ. ಲೇಸರ್, ಮೋಟಾರು ಇತ್ಯಾದಿ ಬಹುತೇಕ ಎಲ್ಲಾ ತಂತ್ರಜ್ಞಾನ ಅಪ್ಲಿಕೇಶನ್​ಗಳಿಗೆ ಈ ಮ್ಯಾಗ್ನೆಟ್​ಗಳು ಅತ್ಯಗತ್ಯ ಎನಿಸುತ್ತವೆ. ಹೀಗಾಗಿ, ವಿರಳ ಭೂ ಖನಿಜಗಳಿಗೆ ಜಾಗತಿಕವಾಗಿ ವಿಪರೀತ ಬೇಡಿಕೆ ಇದೆ.

ಇದನ್ನೂ ಓದಿ: ಅಪರೂಪದ ಮ್ಯಾಗ್ನೆಟ್ ಉತ್ಪಾದನೆ ಉತ್ತೇಜಿಸಲು 7,280 ಕೋಟಿ ರೂ. ಯೋಜನೆಗೆ ಸಂಪುಟ ಅನುಮೋದನೆ

ಭಾರತದ 7,280 ಕೋಟಿ ರೂ ಪ್ಲಾನ್​ನಿಂದ ಏನು ಪ್ರಯೋಜನ?

ಅತಿಹೆಚ್ಚು ವಿರಳ ಭೂ ಖನಿಜ ಇರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆಯುತ್ತದೆ. ಆದರೆ, ಈ ಖನಿಜ ಉತ್ಪಾದನೆಯಲ್ಲಿ ಭಾರತದ ಕೊಡುಗೆ ಶೇ. 1 ಮಾತ್ರವೇ ಇರುವುದು. ಈಗ ಇವುಗಳನ್ನು ಭಾರತದಲ್ಲೇ ಹೆಚ್ಚೆಚ್ಚು ಉತ್ಪಾದಿಸಲು ಸರ್ಕಾರ ಉತ್ತೇಜನ ಕೊಡಲು ನಿರ್ಧರಿಸಿದೆ. ಭಾರತಕ್ಕೆ ಅಗತ್ಯ ಇರುವ ರೇರ್ ಅರ್ಥ್ ಮ್ಯಾಗ್ನೆಟ್​ಗಳ ಸರಬರಾಜು ಸರಪಳಿ ಭಾರತದೊಳಗೇ ಇರಲಿ ಎಂಬುದು ಸರ್ಕಾರದ ಗುರಿ.

ಕೇರಳ, ಒಡಿಶಾ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ವಿರಳ ಭೂ ಖನಿಜಗಳು ಇವೆ. ರಾಜಸ್ಥಾನ್, ಬಿಹಾರ್, ಜಾರ್ಖಂಡ್ ಮೊದಲಾದ ಕೆಲ ರಾಜ್ಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಈ ಖನಿಜಗಳಿವೆ. ಇವುಗಳನ್ನು ಬಳಸಿಕೊಳ್ಳುವುದರಿಂದ ಚೀನಾ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ