RBI: ಐಟಿ ಸರ್ವಿಸ್ ಹೊರಗುತ್ತಿಗೆ: ಗ್ರಾಹಕರ ಜವಾಬ್ದಾರಿಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಆರ್​ಬಿಐ ಹೊಸ ನಿಯಮ

Bank Outsourcing its IT Services: ಹೊರಗುತ್ತಿಗೆ ನೀಡಿ ಬ್ಯಾಂಕು ಮತ್ತಿತರ ನಿಯಂತ್ರಿತ ಹಣಕಾಸು ವಲಯ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

RBI: ಐಟಿ ಸರ್ವಿಸ್ ಹೊರಗುತ್ತಿಗೆ: ಗ್ರಾಹಕರ ಜವಾಬ್ದಾರಿಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಆರ್​ಬಿಐ ಹೊಸ ನಿಯಮ
ಆರ್​ಬಿಐ
Follow us
|

Updated on:Apr 11, 2023 | 12:20 PM

ಮುಂಬೈ: ಬ್ಯಾಂಕುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಸಂಸ್ಥೆಗಳು ತಮ್ಮ ಗ್ರಾಹಕರ ದೂರು ಇತ್ಯಾದಿಯನ್ನು ಅಲಿಸಿ ಪರಿಹಾರ ಕೊಡುವ ಕೆಲಸವನ್ನು ಹೊರಗುತ್ತಿಗೆ ಕೊಡುತ್ತವೆ. ಅಂತೆಯೇ ಕಾಲ್ ಸೆಂಟರ್​ನಂತಹ ಬಿಪಿಒಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಬಹಳ ಸಂದರ್ಭಗಳಲ್ಲಿ ಗ್ರಾಹಕರ ಕರೆ ಸ್ವೀಕರಿಸುವ ಕಾಲ್ ಸೆಂಟರ್ ಸಿಬ್ಬಂದಿ ಅಸಮರ್ಪಕ ಸೇವೆ ನೀಡುವ ಬಗ್ಗೆ ಬಹಳಷ್ಟು ತಗಾದೆಗಳಂತೂ ಇವೆ. ಈ ವಿಚಾರದ ಬಗ್ಗೆ ಆರ್​ಬಿಐ ಗಮನ ಹರಿಸಿದೆ. ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಹಾಗೂ ನಿಯಂತ್ರಿಕ ಹಣಕಾಸು ವಲಯದ ಸಂಸ್ಥೆಗಳು ಐಟಿ ಸೇವೆಗಳನ್ನು ಔಟ್​ಸೋರ್ಸ್ (Outsource) ಮಾಡುವ ವಿಚಾರದಲ್ಲಿ ಅರ್​ಬಿಐ ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಹೊರಗುತ್ತಿಗೆ ನೀಡಿ ಬ್ಯಾಂಕು ಮತ್ತಿತರ ನಿಯಂತ್ರಿತ ಹಣಕಾಸು ವಲಯ ಸಂಸ್ಥೆಗಳು (RE- Regulated Entity) ತಮ್ಮ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಬ್ಯಾಂಕು ಸೇರಿದಂತೆ ನಿಯಂತ್ರಿತ ಸಂಸ್ಥೆಗಳು (ಆರ್​ಇ) ತಮ್ಮ ಗ್ರಾಹಕರಿಗೆ ಒದಗಿಸುವ ಬ್ಯುಸಿನೆಸ್ ಮಾಡಲ್, ಉತ್ಪನ್ನ ಮತ್ತು ಸೇವೆಗಳ ನಿರ್ವಹಣೆಗೆ ವ್ಯಾಪಕವಾಗಿ ಐಟಿ ಸೇವೆಗಳನ್ನು ಬಳಸಿಕೊಳ್ಳುತ್ತವೆ. ಈ ರೀತಿ ಹೊರಗುತ್ತಿಗೆ ಕೊಡುವ ಮೂಲಕ ಬ್ಯಾಂಕುಗಳು ತಮ್ಮ ಗ್ರಾಹಕ ಸೇವೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆರ್​ಬಿಐನ ನಿಯಮಗಳಿಂದಲೂ ತಪ್ಪಿಸಿಕೊಳ್ಳುವಂತಿಲ್ಲ ಎಂದು ‘ಮಾಸ್ಟರ್ ಡೈರೆಕ್ಷನ್ ಆನ್ ಔಟ್​ಸೋರ್ಸಿಂಗ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಸರ್ವಿಸಸ್’ (ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆಗೆ ನಿರ್ದೇಶನ) ಎಂಬ ತನ್ನ ಹೊಸ ನಿಯಮಾವಳಿಯಲ್ಲಿ ಹೇಳಿದೆ.

ಇದನ್ನೂ ಓದಿGoogle Pay: ಗೂಗಲ್ ಪೇ ಸರ್ವರ್ ಗ್ಲಿಚ್​ನಿಂದಾಗಿ ಕೆಲವು ಬಳಕೆದಾರರ ಖಾತೆಗೆ ರೂ.80,000 ಜಮೆ; ನಿಮಗೂ ಬಂದಿದೆಯೇ?

ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳ ಹೊರಗುತ್ತಿಗೆ ಸೇವೆಗೆ ಆರ್​ಬಿಐ ರೂಪಿಸಿದ ಹೊಸ ನಿಯಮಗಳು

  1. ಬ್ಯಾಂಕಿನಲ್ಲೇ ಒಂದು ಸೇವೆ ಹೇಗೆ ನಿರ್ವಹಣೆ ಅಗುತ್ತದೋ ಅದೇ ರೀತಿ ಹೊರಗುತ್ತಿಗೆ ಕೊಟ್ಟಾಗಲೇ ಅದೇ ಗುಣಮಟ್ಟದ ಸೇವೆ ಸಿಗುತ್ತಿದೆಯಾ ಎಂಬುದನ್ನು ಬ್ಯಾಂಕು ಖಾತ್ರಿಪಡಿಸಿಕೊಳ್ಳಬೇಕು.
  2. ಬ್ಯಾಂಕು ಅಥವಾ ಹಣಕಾಸು ಸಂಸ್ಥೆಯ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಐಟಿ ಸೇವೆ ನೀಡುವವರು ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು.
  3. ಐಟಿ ಸಪೋರ್ಟ್ ಕೊಡುವ ಮಂದಿ ಭಾರತದಲ್ಲೇ ಇರಲಿ ಹೊರದೇಶದಲ್ಲೆ ಇರಲಿ ಬ್ಯಾಂಕು ಅವರ ಕಾರ್ಯಗಳನ್ನು ಗಮನಿಸಲು ಮತ್ತು ನಿಭಾಯಿಸಲು ಅವಕಾಶ ಮತ್ತು ಸ್ವಾತಂತ್ರ್ಯ ಇರಬೇಕು.
  4. ಒಂದು ಹಣಕಾಸು ಸಂಸ್ಥೆ ತನ್ನದೇ ಅಂಗಸಂಸ್ಥೆಗೆ ಐಟಿ ಬೆಂಬಲಿತ ಸೇವೆಯನ್ನು ಔಟ್​ಸೋರ್ಸ್ ಕೊಡಬಹುದು. ಆದರೆ, ಆರ್​ಬಿಐನ ಮಾಸ್ಟರ್ ಡೈರೆಕ್ಷನ್​ನಲ್ಲಿರುವ ಷರುತ್ತುಗಳಿಗೆ ಬದ್ಧವಾಗಿರಬೇಕು.
  5. ಯೋಜಿತವಲ್ಲದ ಘಟನೆಗಳು ಎದುರಾದಾಗ ಕಾರ್ಯಾಚರಣೆ ಮುಂದುವರಿಸುವ ಯೋಜನೆ (ಬ್ಯುಸಿನೆಸ್ ಕಂಟಿನ್ಯುಟಿ ಪ್ಲಾನ್) ಮತ್ತು ವಿಪತ್ತು ಪುನಶ್ಚೇತನ ಯೋಜನೆ ಈ ವಿಚಾರದಲ್ಲಿ ಐಟಿ ಸರ್ವಿಸ್ ಪ್ರೊವೈಡರ್​ಗಳು ಒಂದು ಉತ್ತಮ ವ್ಯವಸ್ಥೆ ರೂಪಿಸಿದ್ದಾರಾ ಎಂಬುದನ್ನು ಹಣಕಾಸು ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Tue, 11 April 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ