AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಬಿಎಫ್​ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್​​ಬಿಐ ನಿರ್ದೇಶನ

RBI directive to NBFCs: ದೊಡ್ಡ ಎನ್​ಬಿಎಫ್​ಸಿಗಳು ತಮ್ಮ ವಿವಿಧ ವಿಭಾಗಗಳ ಸಾಲಗಳಿಗೆ ಗರಿಷ್ಠ ಎಷ್ಟು ಬಡ್ಡಿ ವಿಧಿಸುತ್ತವೆ ಎಂಬುದನ್ನು ಆರ್​ಬಿಐಗೆ ನಿರ್ದಿಷ್ಟಪಡಿಸಬೇಕು. ಈ ಬಗ್ಗೆ ಈ ಹಣಕಾಸು ಸಂಸ್ಥೆಗಳಿಗೆ ಆರ್​ಬಿಐ ನಿರ್ದೇಶನ ನೀಡಿದೆ. ಗರಿಷ್ಠ ಬಡ್ಡಿದರದ ಬಗ್ಗೆ ಎನ್​ಬಿಎಫ್​ಸಿಗಳು ಮಂಡಳಿ ಅನುಮೋದನೆ ಪಡೆಯಬೇಕು. ಬಡ್ಡಿಮಿತಿ ಹೆಚ್ಚಿಸಿದಲ್ಲಿ ಅದಕ್ಕೂ ಮಂಡಳಿ ಅನುಮೋದನೆ ಪಡೆಯಬೇಕಾಗುತ್ತದೆ.

ಎನ್​ಬಿಎಫ್​ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್​​ಬಿಐ ನಿರ್ದೇಶನ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2025 | 1:16 PM

Share

ನವದೆಹಲಿ, ಫೆಬ್ರುವರಿ 6: ತಮ್ಮ ಗ್ರಾಹಕರಿಗೆ ಗರಿಷ್ಠ ಬಡ್ಡಿದರ ವಿಧಿಸುತ್ತೀರಿ ಎಂದು ವಿವರ ಕೊಡಿ ಎಂದು ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್​ಬಿಎಫ್​ಸಿ) ಆರ್​ಬಿಐ ನಿರ್ದೇಶನ ನೀಡಿದೆ. ಪ್ರತಿಯೊಂದು ವಿಭಾಗದ ಸಾಲಕ್ಕೂ ಗರಿಷ್ಠ ಬಡ್ಡಿದರ ಎಷ್ಟು ಎಂಬುದನ್ನು ಈ ಹಣಕಾಸು ಸಂಸ್ಥೆಗಳು ಆರ್​ಬಿಐಗೆ ತಿಳಿಸಬೇಕಾಗಿದೆ. ಬಡ್ಡಿದರ, ಇನ್ಷೂರೆನ್ಸ್, ಪ್ರೋಸಸಿಂಗ್ ಫೀಸ್ ಇತ್ಯಾದಿ ಯಾವುದೇ ವೆಚ್ಚಗಳು ಸೇರಿ ಗರಿಷ್ಠ ದರವನ್ನು ಎನ್​ಬಿಎಫ್​ಸಿಗಳು ನಿರ್ದಿಷ್ಟಪಡಿಸಬೇಕು. ಅಡಮಾನ ಸಾಲ, ವಾಹನ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ ಇತ್ಯಾದಿ ಬೇರೆ ಬೇರೆ ಸಾಲ ವಿಭಾಗದಲ್ಲಿ ಗರಿಷ್ಠ ದರವನ್ನು ಈ ಹಣಕಾಸು ಸಂಸ್ಥೆಗಳು ತಿಳಿಸಬೇಕು. ಇಲ್ಲಿ ಎನ್​ಬಿಎಫ್​ಸಿಗಳು ತಮ್ಮ ಗರಿಷ್ಠ ಬಡ್ಡಿದರಗಳಿಗೆ ಮಂಡಳಿಯ ಅನುಮೋದನೆ ಪಡೆಯುವುದು ಅಗತ್ಯ ಎಂದೂ ಆರ್​ಬಿಐ ಸೂಚಿಸಿದೆ.

ಮೈಕ್ರೋಫೈನಾನ್ಸ್ ಸಂಸ್ಥೆಗಳು, ಎನ್​ಬಿಎಫ್​​ಸಿಗಳು ಹಾಗೂ ಕೆಲ ಬ್ಯಾಂಕ್​ಗಳು ಕೆಲ ಗ್ರಾಹಕರಿಂದ ಸಿಕ್ಕಾಪಟ್ಟೆ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಆರೋಪಗಳು ಸಾಕಷ್ಟು ಕೇಳಿಬಂದಿವೆ. ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್​ನವರ ಉಪಟಳದಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು, ಹಲವು ಕುಟುಂಬಗಳು ಊರು ಬಿಟ್ಟು ಹೋಗಿರುವುದು ಇತ್ಯಾದಿ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಆರ್​ಬಿಐನ ಈ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹೈಸ್ಪೀಡ್ ಹೆದ್ದಾರಿಗಳಲ್ಲಿ ಟೋಲ್ ತಡೆಗಳಿಗೆ ಗುಡ್ ಬೈ: ಬರಲಿದೆ ಹೊಸ ವೈಶಿಷ್ಟ್ಯ

ಕಡಿಮೆ ಕ್ರೆಡಿಟ್ ಸ್ಕೋರ್, ಅಡಮಾನಕ್ಕೆ ಆಸ್ತಿ ಇಲ್ಲದಿರುವುದು ಇತ್ಯಾದಿ ಕಾರಣಕ್ಕೆ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಬಹಳಷ್ಟು ಜನರಿಗೆ ಸಾಲ ಸಿಗುವುದಿಲ್ಲ. ಇಂಥವರು ಎನ್​ಬಿಎಫ್​ಸಿ, ಮೈಕ್ರೋಫೈನಾನ್ಸ್ ಇತ್ಯಾದಿ ಸಂಸ್ಥೆಗಳತ್ತ ಎಡತಾಕುತ್ತಾರೆ. ಇಲ್ಲಿ ಹೆಚ್ಚು ಸುಲಭವಾಗಿ ಸಾಲ ಸಿಗುತ್ತದಾದರೂ ಬಡ್ಡಿದರವೂ ಅತ್ಯಧಿಕ ಇರುತ್ತದೆ ಎನ್ನುವ ಆರೋಪ ಇದೆ

ಕ್ರೆಡಿಟ್ ಸ್ಕೋರ್ ಸರಿ ಇಲ್ಲದ ವ್ಯಕ್ತಿಗೆ ಸಾಲ ಕೊಡುವುದು ಯಾವುದೇ ಹಣಕಾಸು ಸಂಸ್ಥೆಗಾದರೂ ಅಪಾಯ ಇರುವ ಸಂಗತಿ. ಸಾಲ ಮರಳಿಸದಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಇಂಥವರಿಗೆ ಹೆಚ್ಚಿನ ಬಡ್ಡಿದರ ಹಾಕಲಾಗಿರುತ್ತದೆ. ಇಷ್ಟೇ ಬಡ್ಡಿಮಿತಿ ಇರಬೇಕು ಎಂದು ಆರ್​ಬಿಐ ಕೂಡ ತಾಕೀತು ಮಾಡಲು ಆಗುವುದಿಲ್ಲ. ಭಾರತದಲ್ಲಿ ಬ್ಯಾಂಕುಗಳು ತಮ್ಮದೇ ಬಡ್ಡಿದರ ನಿಗದಿ ಮಾಡಿಕೊಳ್ಳಲು ಸ್ವತಂತ್ರ ಇರುತ್ತವೆ. ಆದರೂ ಕೂಡ ಬ್ಯಾಂಕುಗಳಿಗೆ ಯಜಮಾನನಾಗಿರುವ ಆರ್​ಬಿಐ, ಇವುಗಳತ್ತ ಒಂದು ಕಣ್ಣಿಡುವುದು ಅನಿವಾರ್ಯವಾಗಿರುತ್ತದೆ.

ಇದನ್ನೂ ಓದಿ: ಟಿಡಿಎಸ್ ಕ್ರೆಡಿಟ್ ಕ್ಲೈಮ್ ಆಗುತ್ತಿಲ್ಲವಾ? ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನ; ಏನಿದು ಟಿಡಿಎಸ್ ಸಂಗತಿ…?

ಒಂದು ವಿಭಾಗದ ಸಾಲದಲ್ಲಿ ಗರಿಷ್ಠ ದರ ಎಷ್ಟೆಂದು ನಿರ್ದಿಷ್ಟಪಡಿಸಿದರೆ ಆ ಹಣಕಾಸು ಸಂಸ್ಥೆಯು ಆ ದರಮಿತಿಗೆ ಬದ್ಧವಾಗಿರಬೇಕಾಗುತ್ತದೆ. ಈ ದರಕ್ಕೆ ಮಂಡಳಿ ಅನುಮೋದನೆ ಕೊಟ್ಟ ಬಳಿಕ, ದರ ಹೆಚ್ಚಳ ಮಾಡಿದಲ್ಲಿ ಮತ್ತೊಮ್ಮೆ ಮಂಡಳಿಯ ಅನುಮೋದನೆ ಪಡೆಯಬೇಕಾಗುತ್ತದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಇದರ ವರದಿ ಪ್ರಕಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ