AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ

Reliance Industries to issue 1:1 bonus shares: ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ ಪ್ರತೀ ಷೇರಿಗೆ 1:1 ಅನುಪಾತದಲ್ಲಿ ಬೋನಸ್ ಷೇರು ಹಂಚಿಕೆ ಮಾಡಲು ನಿರ್ಧರಿಸಿದೆ. ಸೆ. 5ರಂದು ನಡೆಯಲಿರುವ ಆರ್​ಐಎಲ್​ನ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಈ ಬೋನಸ್ ಹಂಚಿಕೆಯಿಂದ ಷೇರುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದಾದರೂ ಒಟ್ಟಾರೆ ಷೇರು ಸಂಪತ್ತಿನ ಮೌಲ್ಯ ಅಷ್ಟೇ ಇರುತ್ತದೆ.

ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ
ಆರ್​ಐಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 29, 2024 | 7:11 PM

Share

ಮುಂಬೈ, ಆಗಸ್ಟ್ 29: ಭಾರತದ ಅತಿದೊಡ್ಡ ಮಾರುಕಟ್ಟೆ ಸಂಪತ್ತಿನ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಪ್ರತೀ ಷೇರರಿಗೆ ಪ್ರತೀ ಷೇರಿಗೆ ಒಂದು ಹೆಚ್ಚುವರಿ ಷೇರು ನೀಡುತ್ತಿದೆ. ಈ ಸಂಬಂಧ ಸೆಪ್ಟಂಬರ್ 5ರಂದು ಆರ್​ಐಎಲ್​ನ ಬೋರ್ಡ್ ಮೀಟಿಂಗ್ ನಡೆಯಲಿದ್ದು ಅಲ್ಲಿ 1:1 ಬೋನಸ್ ಷೇರು ವಿತರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಬೋನಸ್ ಷೇರುಗಳಿಂದ ಷೇರುದಾರರ ಸಂಪತ್ತಿಗಾಗಲೀ, ಆರ್​ಐಎಲ್​ನ ಒಟ್ಟಾರೆ ಮಾರುಕಟ್ಟೆ ಸಂಪತ್ತಿಗಾಗಲೀ ವ್ಯತ್ಯಯ ಉಂಟು ಮಾಡದು. ಈ ಬೋನಸ್ ಷೇರುಗಳ ಹಂಚಿಕೆಯ ವಿಚಾರವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇಂದು ಗುರುವಾರ ಸ್ಟಾಕ್ ಎಕ್ಸ್​ಚೇಂಜ್​ಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.

1:1 ಬೋನಸ್ ಷೇರು ಎಂದರೇನು?

ಪ್ರತೀ ಷೇರಿಗೆ ಬದಲಾಗಿ ಅದರ ಅರ್ಧ ಮೌಲ್ಯದ ಎರಡು ಷೇರುಗಳನ್ನು ನೀಡಲಾಗುತ್ತದೆ. ಒಂದು ರಿಲಾಯನ್ಸ್ ಷೇರು ಹೊಂದಿರುವವರು ಒಂದು ಹೆಚ್ಚುವರಿ ಷೇರು ಪಡೆಯುತ್ತಾರೆ. ಒಟ್ಟಾರೆ ಮೌಲ್ಯ ಅಷ್ಟೇ ಇರುತ್ತದೆ. ಇಂದು ಗುರುವಾರ ರಿಲಾಯನ್ಸ್ ಷೇರುಬೆಲೆ 3,042.90 ರೂ ಇದೆ. ಇದೇ ಬೆಲೆ ಆಧಾರವಾಗಿಟ್ಟುಕೊಂಡು ರಿಲಾಯನ್ಸ್ ಬೋನಸ್ ಷೇರು ಕೊಟ್ಟಿದ್ದೇ ಆದಲ್ಲಿ ಒಂದು ಷೇರಿನ ಬೆಲೆ 1,521.45 ರೂ ಆಗುತ್ತದೆ. ಆದರೆ, ಒಂದು ಹೆಚ್ಚುವರಿ ಷೇರು ಸಿಗುತ್ತದೆ.

ನೂರು ಷೇರು ಹೊಂದಿರುವವರಿಗೆ ಇನ್ನೂ ನೂರು ಷೇರು ಸಿಗುತ್ತದೆ. ಆದರೆ, ಒಟ್ಟಾರೆ ಮೌಲ್ಯ ಅಷ್ಟೇ ಇರುತ್ತದೆ. ಇದನ್ನು ಬೋನಸ್ ಷೇರು ಹಂಚಿಕೆ ಎನ್ನುತ್ತಾರೆ.

ಇದನ್ನೂ ಓದಿ: ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್

ಬೋನಸ್ ಷೇರು ಹಂಚಿಕೆ ಯಾಕೆ?

ಷೇರು ವಿಭಜನೆ ರೀತಿಯಲ್ಲಿ ಬೋನಸ್ ಷೇರು ಹಂಚಿಕೆಯಿಂದ ಕೆಲ ಪ್ರಮುಖ ಅನುಕೂಲಗಳಿವೆ. ಒಂದು, ಆ ಕಂಪನಿಯ ಷೇರುಗಳ ಲಿಕ್ವಿಡಿಟಿ ಹೆಚ್ಚುತ್ತದೆ. ಹೆಚ್ಚು ಷೇರುಗಳು ವಹಿವಾಟಿಗೆ ಲಭ್ಯ ಇರುತ್ತವೆ. ಎರಡನೇ ಅಂಶವೆಂದರೆ, ಷೇರುಬೆಲೆ ಕಡಿಮೆ ಅಗುವುದರಿಂದ ಸಣ್ಣ ಹೂಡಿಕೆದಾರರನ್ನು ಆಕರ್ಷಿಸಬಹುದು. ಇದರಿಂದ ಷೇರಿಗೆ ಬೇಡಿಕೆ ಹೆಚ್ಚಬಹುದು. ಮೂರನೇ ಅಂಶವೆಂದರೆ, ಬೋನಸ್ ಷೇರು ಹಂಚಿಕೆಯು ಕಂಪನಿಯ ಮಾಲೀಕರ ಆತ್ಮವಿಶ್ವಾಸವನ್ನು ಬಿಂಬಿಸುತ್ತದೆ.

2017ರಲ್ಲೂ ರಿಲಾಯನ್ಸ್ ಇಂಡಸ್ಟ್ರೀಸ್ 1:1 ಪ್ರಮಾಣದಲ್ಲಿ ಬೋನಸ್ ಷೇರು ಹಂಚಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಆರ್​ಐಎಲ್​ ಬೋನಸ್ ಷೇರು ಕೊಟ್ಟಿದೆ. ಒಟ್ಟಾರೆ ಈವರೆಗೆ ಆರ್​ಐಎಲ್ ಐದು ಬಾರಿ ಬೋನಸ್ ಷೇರು ಹಂಚಿಕೆ ಮಾಡಿದೆ. 1980ರಲ್ಲಿ ಪ್ರತೀ 3 ಷೇರಿಗೆ 5 ಬೋನಸ್ ಷೇರು ಹಂಚಿತ್ತು. 1983ರಲ್ಲಿ 6:10 ಬೋನಸ್ ಷೇರು ಕೊಟ್ಟಿತ್ತು. ಅಂದರೆ ಆರು ಷೇರಿನ ಬದಲಾಗಿ 10 ಷೇರು ಕೊಟ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Thu, 29 August 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!