Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ

Dilkhush Kumar Successful RodBez Startup: ಒಂದು ಕಾಲದಲ್ಲಿ ಜೀವನ ನಡೆಸಲು ನೂಕುಗಾಡಿ ಚಲಾಯಿಸುತ್ತಿದ್ದ ದಿಲ್​ಖುಷ್ ಇವತ್ತು ಕೋಟ್ಯಂತರ ರೂ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ. ಕೇವಲ 12ನೇ ತರಗತಿ ಓದಿರುವ ಅವರು ಇದೀಗ ಐಐಟಿ, ಐಐಎಂನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಮಟ್ಟದಲ್ಲಿದ್ದಾರೆ.

Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ
ದಿಲ್​ಖುಷ್ ಕುಮಾರ್
Follow us
|

Updated on:Apr 07, 2023 | 11:01 AM

1972ರಲ್ಲಿ ಬಿಡುಗಡೆಯಾದ ವರನಟ ಡಾ|| ರಾಜಕುಮಾರ್ (Dr. Rajkumar) ಅಭಿನಯದ ‘ಬಂಗಾರದ ಮನುಷ್ಯ’ (Bangarada Manushya) ನಮ್ಮ ಸ್ಯಾಂಡಲ್ವುಡ್​ನ ಎವರ್​ಗ್ರೀನ್ ಸಿನಿಮಾ. ಅದರಲ್ಲಿ ಪಿ.ಬಿ. ಶ್ರೀನಿವಾಸ್ ಸಿರಿಕಂಠದಲ್ಲಿ ‘ಆಗದು ಎಂದು ಕೈಲಾಗದು ಎಂದು…’ ಎಂಬ ಹಾಡು ಕೇಳಿರುತ್ತೀರಿ. ಆರ್.ಎನ್. ಜಯಗೋಪಾಲ್ ಬರೆದ ಈ ಹಾಡಿನ ಪ್ರತಿಯೊಂದು ಸಾಲೂ ಕೂಡ ಜೀವನಸ್ಫೂರ್ತಿ ತುಂಬುವ ಪದಗಳೇ. ಬಿಹಾರದ ದಿಲ್​ಖುಷ್ ಕುಮಾರ್ (Dilkhush Kumar) ಎಂಬ ಉದ್ಯಮಿಯ ಕಥೆ ಕೇಳಿದಾಗ ಬಂಗಾರದ ಮನುಷ್ಯನ ಈ ಹಾಡು ನೆನಪಿಗೆ ಬರುತ್ತದೆ. ನಮ್ಮ ಹಣೆಬರಹವೇ ಇಷ್ಟು ಎಂದು ದಿಲ್​ಖುಷ್ ಕೈಕಟ್ಟಿ ಕೂತಿದ್ದರೆ ಇಂದು ರಾಡ್​ಬೇಜ್ (Rodbez) ಎಂಬ ಸ್ಟಾರ್ಟಪ್​ಗೆ ಸಿಇಒ ಆಗುತ್ತಿರಲಿಲ್ಲ. ಮನಸೊಂದಿದ್ದರೆ ಮಾರ್ಗವು ಉಂಟು ಎಂಬುದಕ್ಕೆ ದಿಲ್​ಖುಷ್ ಜೀವಂತ ಉದಾಹರಣೆ ಆಗಿದ್ದಾರೆ.

ಒಂದು ಕಾಲದಲ್ಲಿ ಜೀವನ ನಡೆಸಲು ನೂಕುಗಾಡಿ ಚಲಾಯಿಸುತ್ತಿದ್ದ ದಿಲ್​ಖುಷ್ ಇವತ್ತು ಕೋಟ್ಯಂತರ ರೂ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ. ಕೇವಲ 12ನೇ ತರಗತಿ ಓದಿರುವ ಅವರು ಇದೀಗ ಐಐಟಿ, ಐಐಎಂನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಮಟ್ಟದಲ್ಲಿದ್ದಾರೆ. ಟ್ಯಾಕ್ಸಿ ಡ್ರೈವರ್​ಗಳಿಗೆ ತಿಂಗಳಿಗೆ 55ರಿಂದ 60 ಸಾವಿರ ರೂ ಸಂಬಳ ಕೊಡುವ ಕಂಪನಿಯ ಸಿಇಒ ಆಗಿದ್ದಾರೆ ದಿಲ್​ಖುಷ್ ಕುಮಾರ್.

ಟ್ಯಾಕ್ಸಿ ಸರದಾರ ದಿಲ್​ಖುಷ್ ಕುಮಾರ

ದಿಲ್​ಖುಷ್ ಕುಮಾರ್ ಅವರು ರಾಡ್​ಬೇಜ್ ಎಂಬ ಸ್ಟಾರ್ಟಪ್ ಕಂಪನಿ ನಡೆಸುತ್ತಿದ್ದಾರೆ. ಇದು ಸದ್ಯ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಪಾಟ್ನಾ ನಗರದಿಂದ ಸುತ್ತಲಿನ ಪ್ರತಿಯೊಂದು ಹಳ್ಳಿಗೂ ರಾಡ್​ಬೇಜ್ ಟ್ಯಾಕ್ಸಿ ಸಂಪರ್ಕ ಕಲ್ಪಿಸುತ್ತದೆ. ಎರಡನೇ ಹಂತದಲ್ಲಿ ಬಿಹಾರದ ವಿವಿಧ ನಗರಗಳಿಗೆ ಟ್ಯಾಕ್ಸಿ ಸೇವೆ ಕೊಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ಬಿಹಾರದ ಪ್ರತಿಯೊಂದು ಗ್ರಾಮವನ್ನೂ ರಾಡ್​ಬೇಜ್ ಟ್ಯಾಕ್ಸಿ ಮೂಲಕ ಸಂಪರ್ಕ ಕಲ್ಪಿಸುವುದು ದಿಲ್​ಖುಷ್ ಕುಮಾರ್ ಕನಸು. ಬಿಹಾರದಲ್ಲಿ ಈ ಪ್ರಯೋಗ ಯಶಸ್ವಿಯಾದರೆ ಮತ್ತು ಬಂಡವಾಳ ಹರಿದುಬಂದರೆ ದೇಶಾದ್ಯಂತ ರಾಡ್​ಬೇಜ್ ಟ್ಯಾಕ್ಸಿ ಸೇವೆ ವಿಸ್ತರಣೆ ಮಾಡುವ ಉತ್ಸಾಹದಲ್ಲಿ ದಿಲ್​ಖುಷ್ ಕುಮಾರ್ ಇದ್ದಾರೆ.

ಇದನ್ನೂ ಓದಿWhat is OneWeb: ಏನಿದು ಒನ್​ವೆಬ್ ಯೋಜನೆ?: ಭಾರತದಲ್ಲಿ ಬಿಡುಗಡೆ ಆದರೆ ಏನು ಪ್ರಯೋಜನ?: ಇಲ್ಲಿದೆ ಸಂಪೂರ್ಣ ಮಾಹಿತಿ

ಓಲಾ, ಊಬರ್​ಗಿಂತ ಭಿನ್ನ ರಾಡ್​ಬೇಜ್

ಇವತ್ತು ಓಲಾ ಮತ್ತು ಊಬರ್ ಟ್ಯಾಕ್ಸಿ ಮೂಲಕ ನಗರದ ಮೂಲೆಮೂಲೆಗೂ ತಲುಪಬಹುದು. ಇದೇ ತಂತ್ರ ಮತ್ತು ಕಾರ್ಯವಿಧಾನವವನ್ನು ರಾಡ್​ಬೇಜ್ ಅನುಸರಿಸುತ್ತಿರಬಹುದು ಎನಿಸಬಹುದು. ಆದರೆ, ಓಲಾ, ಊಬರ್​ಗಿಂತ ಇದು ತುಸು ಭಿನ್ನ. 50 ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋಗಬೇಕೆನ್ನುವ ಗ್ರಾಹಕರಿಗೆ ಟ್ಯಾಕ್ಸಿ ಡ್ರೈವರ್ ಮತ್ತು ವಾಹನದ ವ್ಯವಸ್ಥೆ ಮಾಡುವ ಒಂದು ಡಾಟಾಬೇಸ್ ಕಂಪನಿ ರಾಡ್​ಬೇಜ್.

Dilkhush Kumar with his Rodbez Team

ದಿಲ್​ಖುಷ್ ಕುಮಾರ್ ತಮ್ಮ ರಾಡ್​ಬೇಜ್ ತಂಡದೊಂದಿಗೆ

ಅಂದಹಾಗೆ ರಾಡ್​ಬೇಜ್ ಎಂಬ ಹೆಸರಿನ ಅರ್ಥ ಏನು ಎಂದು ಕೇಳಿದರೆ ಅಚ್ಚರಿಯ ಉತ್ತರ ಸಿಗುತ್ತದೆ. ಇಂಗ್ಲೀಷ್​ನ ರೋಡ್​ವೇಸ್ ಪದದ ಅಪಭ್ರಂಶ ಪದ ರಾಡ್​ಬೇಜ್. ಗ್ರಾಮ್ಯ ಸೊಗಡಿನ ಉಚ್ಛಾರಣೆ ಅದು. ರೋಡ್​ವೇಸ್ (Roadways) ಪದವನ್ನು ಸಾಮಾನ್ಯ ಬಿಹಾರಿಗರು ರಾಡ್​ಬೇಜ್ ಎಂದೇ ಉಲಿಯುತ್ತಾರೆ. ಅದೇ ಪದವನ್ನು ದಿಲ್​ಖುಷ್ ಕುಮಾರ್ ತಮ್ಮ ಕಂಪನಿಗೆ ಇಟ್ಟಿದ್ದಾರೆ.

ಕೈಗಾಡಿ ನೂಕುತ್ತಿದ್ದ ಕಾಲದಿಂದ ರಾಡ್​ಬೇಜ್​ವರೆಗೆ ದಿಲ್​ಖುಷ್ ಪ್ರಯಾಣ ಹೀಗಿತ್ತು….

ದಿಲ್​ಖುಷ್ ಕುಮಾರ್ ಬಿಹಾರದ ಸಹರಸಾ ಜಿಲ್ಲೆಯ ಬನಗಾಂವ್ ಎಂಬ ಊರಿನವರು. ಓದಿದ್ದು ಕೇವಲ 12ನೇ ತರಗತಿ ಮಾತ್ರ. ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ರಿಕ್ಷಾ ಗಾಡಿ ನೂಕುತ್ತಾ ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ಬಿಹಾರದ ಪಾಟ್ನಾದಲ್ಲಿ ತರಕಾರಿ ಮಾರುತ್ತಿದ್ದರು.

ಇದನ್ನೂ ಓದಿಅಪಾಯದಲ್ಲಿದೆ ಡಾಲರ್ ಭವಿಷ್ಯ: ನಮಗೆ ತಿಳಿದಿರಬೇಕಾದ ಅಂಶಗಳು

ದಿಲ್​ಖುಷ್ ತಂದೆ ಬಸ್ ಡ್ರೈವರ್ ಆಗಿದ್ದರು. ಅವರಿಂದ ವಾಹನ ಚಲಾಯಿಸುವುದನ್ನು ಕಲಿತರು. ಇದೇ ಅವರ ಜೀವನಕ್ಕೆ ತಿರುವು ತಂದುಕೊಟ್ಟಿದ್ದು. ಡ್ರೈವರ್ ವೃತ್ತಿಯಲ್ಲಿ ಅವರು ಮುಂದುವರಿದರು. ಈ ಹಂತದಲ್ಲೇ ದಿಲ್​ಖುಷ್ ಕುಮಾರ್ ಅವರಿಗೆ ರಾಡ್​ಬೇಜ್ ಕಂಪನಿಯ ಕನಸು ಹತ್ತಿದ್ದು. ತಮ್ಮ ಸ್ನೇಹಿತರ ಜೊತೆ ಸೇರಿ ರಾಡ್​ಬೇಜ್ ಟ್ಯಾಕ್ಸಿ ಸೇವೆ ಆರಂಭಿಸಿದರು. ಅವರ ಬಳಿ ಇದ್ದ ಸೆಕೆಂಡ್ ಹ್ಯಾಂಡ್ ಟಾಟಾ ನ್ಯಾನೋ ಕಾರಿನಿಂದ ರಾಡ್​ಬೇಜ್ ಸೇವೆ ಆರಂಭವಾಯಿತು. ಆರೇಳು ತಿಂಗಳಲ್ಲೇ ಅವರು 4 ಕೋಟಿ ರೂ ಬಂಡವಾಳ ಶೇಖರಿಸುವಲ್ಲಿ ಯಶಸ್ವಿಯಾದರು. ಇವತ್ತು ರಾಡ್​ಬೇಜ್ ಜೊತೆ ಜೋಡಿಸಿಕೊಂಡಿರುವ ಡ್ರೈವರ್​ಗಳಿಗೆ ತಿಂಗಳಿಗೆ 60,000 ರೂನಷ್ಟು ಸಂಬಳ ಕೊಡಲಾಗುತ್ತಿದೆ.

ವಾಚ್​ಮ್ಯಾನ್ ಕೆಲಸಕ್ಕೂ ನಾಲಾಯಕ್ಕು ಎನಿಸಿಕೊಂಡಿದ್ದ ದಿಲ್​ಖುಷ್ ಕುಮಾರ್….

ಯಾವುದೇ ಬೆನ್ನೆಲುಬು ಇಲ್ಲದೇ ಸ್ವಂತವಾಗಿ ಬೆಳೆಯುವ ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಹಲವಾರು ರೀತಿಯ ಅವಮಾನ, ಸೋಲು, ಕಷ್ಟಕೋಟಲೆಗಳು, ಅಡ್ಡಿ ಆತಂಕಗಳು ತೊಡರುಗಾಲಿನಂತೆ ಬರುತ್ತವೆ. ದಿಲ್​ಖುಷ್ ಕುಮಾರ್ ಜೀವನವೂ ಇದರಿಂದ ಹೊರತಾಗಿರಲಿಲ್ಲ. ಒಮ್ಮೆ ದಿಲ್​ಖುಷ್ ಕುಮಾರ್ ಅವರು ಗಾರ್ಡ್ ಕೆಲಸಕ್ಕಾಗಿ ಇಂಟರ್​ವ್ಯೂಗೆ ಹೋಗಿದ್ದರಂತೆ. ಸರಿಯಾಗಿ ಓದಿಲ್ಲ ಮತ್ತು ನಯನಾಜೂಕು ಇಲ್ಲ ಎಂಬ ಕಾರಣ ಹೇಳಿ ದಿಲ್​ಖುಷ್ ಕುಮಾರ್​ಗೆ ಕೆಲಸ ನಿರಾಕರಿಸಲಾಗಿತ್ತು.

Dilkhush Kumar with his Rodbez Team

ದಿಲ್​ಖುಷ್ ಮತ್ತವರ ತಂಡ

ಕುತೂಹಲವೆಂದರೆ ಒಮ್ಮೆ ಸಂದರ್ಶನವೊಂದರಲ್ಲಿ ಅವರನ್ನು ಐಫೋನ್​ನಲ್ಲಿರುವ ಲೋಗೋವನ್ನು ಗುರುತಿಸುವಂತೆ ಕೇಳಲಾಯಿತಂತೆ. ದಿಲ್​ಖುಷ್ ಕುಮಾರ್ ಅದೇ ಮೊದಲ ಬಾರಿಗೆ ಐಫೋನ್ ನೋಡಿದ್ದು. ಅವರಿಗೆ ಲೋಗೋ ಕಂಡುಹಿಡಿಯಲಾಗಲಿಲ್ಲ.

ಇದನ್ನೂ ಓದಿPanipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ

ಅಂಥ ಹಂತದಲ್ಲಿದ್ದ ದಿಲ್​ಖುಷ್ ಕುಮಾರ್ ಬಳಿ ಇದೀಗ ಐಐಟಿ, ಐಐಎಂ ಇತ್ಯಾದಿ ಇನ್ಸ್​ಟಿಟ್ಯೂಷನ್​ಗಳ ಪದವೀಧರರು ಕೆಲಸ ಮಾಡುತ್ತಿದ್ದಾರೆ. ಗುವಾಹಟಿಯ ಐಐಟಿ ಪದವೀಧರರನ್ನು ತಮ್ಮ ಸ್ಟಾರ್ಟಪ್​ಗೆ ಸೇರಿಸಿಕೊಂಡಿರುವುದಾಗಿ ದಿಲ್​ಖುಷ್ ಹೇಳಿಕೊಂಡಿದ್ದಾರೆ. ಹಾಗೆಯೇ ಐಐಎಂನ ಕೆಲ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಅಗಿ ತಮ್ಮ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆಂದೂ ಮಾಧ್ಯಮಗಳಿಗೆ ದಿಲ್​ಖುಷ್ ಮಾಹಿತಿ ನೀಡಿದ್ದಾರೆ.

ಅದೇನೇ ಇರಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಒಂದು ಡೈಲಾಗ್ ನೆನಪಿಗೆ ಬರುತ್ತದೆ: ‘ಕನಸು ಕಾಣಲು ರಾತ್ರಿ ಮಲಗಬೇಕು. ಆ ಕನಸು ನನಸು ಮಾಡಲು ಬೆಳಗ್ಗೆ ಏಳಬೇಕು’. ದಿಲ್​ಖುಷ್ ರೀತಿಯ ನವೋದ್ದಿಮೆದಾರರು ದೇಶಾದ್ಯಂತ ಮೈಕೊಡವಿ ನಿಲ್ಲಬೇಕಾದ ಅವಶ್ಯಕತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:01 am, Fri, 7 April 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ