AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samudrayaan: ಚಂದ್ರಯಾನ ಅಲ್ಲ, ಇದು ಭಾರತದ ಸಮುದ್ರಯಾನ; ಆರ್ಥಿಕತೆಗೆ ಸಿಗಲಿದೆ ಲಕ್ಷ ಕೋಟಿ ರೂ ಪುಷ್ಟಿ

India's Samudrayaan, the deep sea mission: ಭಾರತವು 2026ರಲ್ಲಿ ಸಮುದ್ರಯಾನ ಎನ್ನುವ ಆಳ ಸಮುದ್ರ ಅನ್ವೇಷಣೆ ಯೋಜನೆ ಆರಂಭಿಸಲಿದೆ. ಟೈಟೇನಿಯಂನಿಂದ ನಿರ್ಮಿಸಲಾಗಿರುವ ಮತ್ಸ್ಯ ಎನ್ನುವ ನೌಕೆ ಸಿದ್ಧವಾಗಿದ್ದು ಇದು ಸಮುದ್ರದಿಂದ 6 ಕಿಮೀವರೆಗಿನ ಆಳದವರೆಗೂ ಹೋಗಲಿದೆ. ಈ ನೌಕೆಯೊಳಗೆ ಮೂವರು ವಿಜ್ಞಾನಿಗಳೂ ಇರಲಿದ್ದಾರೆ. ಈ ರೀತಿ ಮಾನವಸಹಿತ ಆಳ ಸಮುದ್ರ ಅನ್ವೇಷಣೆ ನಡೆಸಿದ ಆರನೇ ದೇಶವಾಗಲಿದೆ ಭಾರತ.

Samudrayaan: ಚಂದ್ರಯಾನ ಅಲ್ಲ, ಇದು ಭಾರತದ ಸಮುದ್ರಯಾನ; ಆರ್ಥಿಕತೆಗೆ ಸಿಗಲಿದೆ ಲಕ್ಷ ಕೋಟಿ ರೂ ಪುಷ್ಟಿ
ಆಳ ಸಮುದ್ರ ಅನ್ವೇಷಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2025 | 7:51 PM

Share

ನವದೆಹಲಿ, ಮೇ 15: ಗಗನಯಾನ, ಚಂದ್ರಯಾನ ಹೀಗೆ ಆಗಸದ ಶೋಧದಲ್ಲಿ ಪಳಗುತ್ತಿರುವ ಭಾರತ ಈಗ ಸಮುದ್ರಯಾನ (Samudrayaan) ಕೈಗೊಳ್ಳುತ್ತಿದೆ. ಸಾಗರದೊಳಗೆ 6,000 ಮೀಟರ್ (ಆರು ಕಿಲೋಮಿಟರ್) ಆಳಕ್ಕೆ ಮನುಷ್ಯರನ್ನೊಳಗೊಂಡ ನೌಕೆಯನ್ನು ಕಳುಹಿಸಲು ಹೊರಟಿದೆ. ಇದು ಭಾರತದ ಮೊದಲ ಮಾನವ ಸಹಿತ ಸಾಗರದಾಳ ಅನ್ವೇಷಣೆ ಯೋಜನೆ (Manned deep sea mission) ಎನಿಸಿದೆ. 2026ರ ಕೊನೆಯಲ್ಲಿ ಇದು ಆರಂಭವಾಗಬಹುದು ಎಂದು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಬಾಲಾಜಿ ರಾಮಕೃಷ್ಣನ್ ಹೇಳಿದ್ದಾರೆ.

ನೀರೊಳಗೆ ಸಾಗಬಲ್ಲ ಮತ್ಸ್ಯ ಹೆಸರಿನ ನೌಕೆಯು ಸಾಗರದ 6 ಕಿಮೀ ಆಳದವರೆಗೂ ಅನ್ವೇಷಿಸಲಿದೆ. ಇದರಲ್ಲಿ ಮೂವರು ವಿಜ್ಞಾನಿಗಳು ಇರಲಿದ್ದಾರೆ. ಹೊಸ ತಲೆಮಾರಿನ ಈ ನೌಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಇದು 25 ಟನ್ ಭಾರದ್ದಾಗಿದ್ದು ಹೆಚ್ಚಿನ ಭಾಗವನ್ನು ಟೈಟೇನಿಯಂ ಲೋಹದಿಂದ ಮಾಡಲಾಗಿದೆ. ಆರು ಕಿಮೀ ನೀರಿನಾಳದಲ್ಲಿ ವಿಪರೀತ ಒತ್ತಡ ಇರುತ್ತದೆ. ಸಿಕ್ಕಾಪಟ್ಟೆ ಶೀತ ಇರುತ್ತದೆ. ಇದನ್ನು ತಡೆದುಕೊಳ್ಳಬಲ್ಲಷ್ಟು ಶಕ್ತಿಯುತವಾಗಿರುವಂತೆ ನೌಕೆಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ… ಇಲ್ಲಿದೆ ಅನುಕೂಲಗಳ ವಿವರ

ಮನುಷ್ಯ ಸಮೀಪದ ಗ್ರಹಗಳವರೆಗೂ ಹೋಗಿ ಬಂದಿದ್ದಾನೆ. ದೂರ ದೂರದ ಗೆಲಾಕ್ಸಿಗಳನ್ನು ದುರ್ಬೀನು ಹಾಕಿಕೊಂಡು ನೋಡುತ್ತಾನೆ. ಆದರೆ, ಭೂಮಿಯ ಗರ್ಭದಲ್ಲಿ ಏನಿದೆ ಎಂದು ಸಂಪೂರ್ಣವಾಗಿ ತಿಳಿಯಲು ಆಗಿಲ್ಲ. ಈಗಲೂ ಕೂಡ ಅಲ್ಲಲ್ಲಿ ಆಳ ಸಮುದ್ರ ಅನ್ವೇಷಣೆ ನಡೆಯುತ್ತಲೇ ಇದೆ. ಭಾರತವು ಮಂಗಳಯಾನದಲ್ಲಿ ನೀರಿನ ಸುಳಿವು ಪತ್ತೆ ಮಾಡಿದಂತೆ ಸಮುದ್ರಯಾನದಲ್ಲೂ ಹೊಸ ಸಂಪನ್ಮೂಲಗಳನ್ನು ಪತ್ತೆ ಮಾಡಬಲ್ಲುದಾ ಎನ್ನುವ ಕುತೂಹಲ ಇದೆ.

6,000 ಮೀಟರ್ ಆಳಕ್ಕೆ ಒಮ್ಮೆಗೇ ಇಳಿಯಲಾಗುವುದಿಲ್ಲ. ಹಂತ ಹಂತವಾಗಿ ಆ ಮಟ್ಟಕ್ಕೆ ಹೋಗಲಿದೆ. ಮೊದಲಿಗೆ 500 ಮೀಟರ್ ಆಳಕ್ಕೆ ಇಳಿಯುವ ಪ್ರಯೋಗ ನಡೆಯಲಿದೆ ಎಂದು ರಾಮಕೃಷ್ಣನ್ ಹೇಳುತ್ತಾರೆ.

ಸಾಗರದಾಳದ ಮಿಷನ್ ನಡೆಸಿದ ಆರನೇ ದೇಶ ಎನಿಸಲಿದೆ ಭಾರತ

ಆಳ ಸಮುದ್ರಕ್ಕೆ ಮನುಷ್ಯರನ್ನು ಕಳುಹಿಸಿರುವ ದೇಶಗಳ ಸಂಖ್ಯೆ ಐದು ಮಾತ್ರ. ಇದು ಸಾಕಷ್ಟು ಪರಿಣಿತಿ ಬೇಡುತ್ತದೆ. ಸಾಗರದಾಳದಲ್ಲಿ ಇರುವ ಜೀವಿಗಳು ಮತ್ತು ನಿರ್ಜೀವಿ ಸಂಪನ್ಮೂಲಗಳು ಎಷ್ಟೆಂಬುದನ್ನು ತಿಳಿಯುವುದು ಈ ಮಿಷನ್​​ನ ಪ್ರಮುಖ ಉದ್ದೇಶ.

ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಕೆಗೆ ಕಲ್ಲು ಹಾಕುತ್ತಿದ್ದಾರಾ ಟ್ರಂಪ್; ಭಾರತದಿಂದ ಹೊರಬರುವಂತೆ ಆ್ಯಪಲ್​​ಗೆ ತಿಳಿಸಿದ ಅಮೆರಿಕ ಅಧ್ಯಕ್ಷ

110 ಬಿಲಿಯನ್ ಡಾಲರ್ ಮೌಲ್ಯದ ಸಂಪನ್ಮೂಲಗಳಿರುವ ಸಾಧ್ಯತೆ

ಸಿಐಒಬಿ ಅಥವಾ ಸೆಂಟ್ರಲ್ ಇಂಡಿಯನ್ ಓಷನ್ ಬೇಸ್​​ನಲ್ಲಿ ಭಾರತದ ಹಿಡಿತದಲ್ಲಿ 75,000 ಚದರ ಕಿಮೀ ಸಾಗರಪ್ರದೇಶ ಇದೆ. ಇಲ್ಲಿ ಸಾಕಷ್ಟು ಸರ್ವೇಕ್ಷಣೆ ನಡೆಸಲಾಗಿದೆ. ಕಾಪರ್, ನಿಕಲ್, ಕೊಬಾಲ್ಟ್, ಮ್ಯಾಂಗನೀಸ್ ಇತ್ಯಾದಿ ಒಳಗೊಂಡ ಪಾಲಿಮೆಟಾಲಿಕ್ ನೋಡ್ಯೂಲ್​​ಗಳು 380 ಮಿಲಿಯನ್ ಮೆಟ್ರಿಕ್ ಟನ್​​ಗಳಿರಬಹುದು. ಇವುಗಳ ಈಗಿನ ಮಾರುಕಟ್ಟೆ ಮೌಲ್ಯ 110 ಬಿಲಿಯನ್ ಡಾಲರ್ ಆಗುತ್ತದೆ. ಅಂದರೆ, ಸುಮಾರು ಒಂದು ಲಕ್ಷ ಕೋಟಿ ರೂನಷ್ಟು ಮೌಲ್ಯದ ಸಂಪತ್ತು ಈ ಸಮುದ್ರದಲ್ಲಿ ಇದೆ.

ಒಂದು ಅಂದಾಜು ಪ್ರಕಾರ, ಇಲ್ಲಿರುವ ಶೇ. 10ರಷ್ಟು ಸಂಪನ್ಮೂಲಗಳನ್ನು ಬಳಸಿಕೊಂಡರೂ ಭಾರತಕ್ಕೆ 100 ವರ್ಷಗಳಿಗೆ ಅಗತ್ಯವಾದ ಶಕ್ತಿ ಮೂಲ ಸಿಕ್ಕಂತಾಗಿ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ