AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Customers Alert: ಕೆವೈಸಿ ನೆಪ ಹೇಳಿಕೊಂಡು ವಂಚಿಸುವ ವಂಚಕರ ಬಗ್ಗೆ ಎಚ್ಚರಿಕೆ ಎಂದ ಎಸ್​ಬಿಐ

ನೋ ಯುವರ್ ಕಸ್ಟಮರ್ (ಕೆವೈಸಿ) ಹೆಸರಲ್ಲಿ ಭಾರತದಾದ್ಯಂತ ನಡೆಯುತ್ತಿರುವ ವಂಚನೆಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

SBI Customers Alert: ಕೆವೈಸಿ ನೆಪ ಹೇಳಿಕೊಂಡು ವಂಚಿಸುವ ವಂಚಕರ ಬಗ್ಗೆ ಎಚ್ಚರಿಕೆ ಎಂದ ಎಸ್​ಬಿಐ
ಸಿಟಿ ಬ್ಯಾಂಕ್ ಮಗುವು 15 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಖಾತೆಯು ಕನಿಷ್ಠ 2 ಖಾತೆದಾರರನ್ನು ಹೊಂದಿರಬೇಕು. ಇದರಲ್ಲಿ ಮೊದಲ ಖಾತೆದಾರ ಆಗಿ ಮಗು ಇರುತ್ತದೆ ಮತ್ತು ಎರಡನೆ ಖಾತೆದಾರರು ಪೋಷಕರು ಅಥವಾ ಪಾಲಕರು. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯನ್ನು ತೆರೆಯಲು ಪೋಷಕರು ಅಥವಾ ಪಾಲಕರು ಸಿಟಿ ಬ್ಯಾಂಕ್‌ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯನ್ನು ಹೊಂದಿರಬೇಕು. ನಗದು ವಿಥ್​ಡ್ರಾ ಎಲ್ಲ ಸಿಟಿ ಬ್ಯಾಂಕ್ ಎಟಿಎಂಗಳಲ್ಲಿ ಉಚಿತವಾಗಿರುತ್ತದೆ. ವಿಥ್​ಡ್ರಾಗೆ ಮಿತಿಯನ್ನು ನಿಗದಿ ಪಡಿಸುವಂಥ ಒಂದು ಆಯ್ಕೆ ಕೂಡ ಇದೆ. ಇದರಿಂದ ಖರ್ಚುಗಳನ್ನು ನಿಯಂತ್ರಿಸಲು ಸಹಾಯ ಆಗುತ್ತದೆ. ಸಿಟಿ ಬ್ಯಾಂಕ್ ಜೂನಿಯರ್ ಖಾತೆಯೊಂದಿಗೆ ಮಗುವಿಗೆ ಮತ್ತು ಪೋಷಕರು-ಪಾಲಕರಿಗಾಗಿ ಡ್ಯುಯಲ್ ವಿಮೆಯಿಂದ ಲಾಭ ಪಡೆಯಬಹುದು.
TV9 Web
| Updated By: Srinivas Mata|

Updated on: Jul 12, 2021 | 6:49 PM

Share

ನೋ ಯುವರ್ ಕಸ್ಟಮರ್ (ಕೆವೈಸಿ) ಹೆಸರಲ್ಲಿ ಭಾರತದಾದ್ಯಂತ ನಡೆಯುತ್ತಿರುವ ವಂಚನೆಗಳ ಬಗ್ಗೆ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸೋಮವಾರದಂದು ಗ್ರಾಹಕರಿಂದ ಎಚ್ಚರಿಕೆ ನೀಡಿದೆ. ವಂಚನೆಗಳು ನಿಜವಾಗಿಯೂ ನಡೆಯುತ್ತಿದ್ದು, ಭಾರತದಾದ್ಯಂತ ವ್ಯಾಪಿಸಿದೆ ಎಂದು ಹೇಳಿದೆ. ಟ್ವಿಟ್ಟರ್ ಮೂಲಕ ಎಸ್​ಬಿಐನಿಂದ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ಕೆವೈಸಿ ದೃಢೀಕರಣದ ಹೆಸರಿನಲ್ಲಿ ಗ್ರಾಹಕರಿಗೆ ವಂಚಕರು ಮೋಸ ಮಾಡುತ್ತಿದ್ದಾರೆ ಎಂದು ಎಸ್​ಬಿಐ ಎಚ್ಚರಿಕೆ ನೀಡಿದೆ. ಎಸ್​ಬಿಐ ಬ್ಯಾಂಕ್​ ಪರವಾಗಿ ಅಥವಾ ಬ್ಯಾಂಕ್​ನ ಪ್ರತಿನಿಧಿಯಾಗಿ ಕಂಪೆನಿಯೊಂದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದೆ.

ಇಂಥ ಆನ್​ಲೈನ್ ವಂಚನೆಯ ಪ್ರಕರಣಗಳು ಇದ್ದಲ್ಲಿ ಸೈಬರ್​ ಕ್ರೈಮ್ ಇಲಾಖೆಗೆ https://www.cybercrime.gov.in ಈ ವೆಬ್​ಸೈಟ್​ಗೆ ದೂರು ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗ್ರಾಹಕರಿಗೆ ತಿಳಿಸಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿಯಂತೆ ಪೋರ್ಟಲ್ ಗೃಹ ವ್ಯವಹಾರದ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಗ್ರಾಹಕರಿಗೆ ತಮ್ಮ ಖಾತೆಯ ಸುರಕ್ಷತೆಗಾಗಿ ಮೂರು ಸೇಫ್ಟಿ ಟಿಪ್ಸ್​ಗಳನ್ನು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ನೀಡಲಾಗಿದೆ.

* ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲಿಗೆ ಆಲೋಚನೆ ಮಾಡಿ. * ಕೆವೈಸಿ ಅಪ್​ಡೇಟ್​ ಮಾಡುವುದಕ್ಕೆ ಬ್ಯಾಂಕ್​ನಿಂದ ಯಾವುದೇ ಲಿಂಕ್ ಕಳಿಸುವುದಿಲ್ಲ. * ಮೊಬೈಲ್ ನಂಬರ್ ಮತ್ತು ಕ್ರೆಡೆನ್ಷಿಯಲ್ ಡೇಟಾವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

ವರದಿಯ ಪ್ರಕಾರ, ಚೀನೀ ಹ್ಯಾಕರ್​ಗಳು ಈಚೆಗೆ ಎಸ್​ಬಿಐ ಗ್ರಾಹಕರನ್ನು ಕೆವೈಸಿ ಪ್ರಕ್ರಿಯೆ ಅಪ್​ಡೇಟ್​ ಮಾಡುವುದಕ್ಕೆ ಟಾರ್ಗೆಟ್ ಮಾಡಿ, 50 ಲಕ್ಷ ಗಿಫ್ಟ್ ಪಡೆದಿದ್ದಾರೆ. 2020ರಲ್ಲಿ 67 ವರ್ಷದ ವೃದ್ಧರೊಬ್ಬರು 3 ಲಕ್ಷ ರೂಪಾಯಿಯನ್ನು ಸೈಬರ್​ ಕ್ರಿಮಿನಲ್ಸ್​ಗೆ ಕಳೆದುಕೊಂಡಿದ್ದಾರೆ. ದುಷ್ಕರ್ಮಿಗಳು ಕೆವೈಸಿ ಕಾರಣವನ್ನು ಹೇಳಿಕೊಂಡು, ಸಂತ್ರಸ್ತರ ಬಳಿ ಬ್ಯಾಂಕ್​ ಸೇರಿ ಇತರ ಪ್ರಮುಖ ಮಾಹಿತಿಯನ್ನು ಕೇಳಿ ಪಡೆಯಲು ಸಫಲರಾಗಿದ್ದಾರೆ.

ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್​ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್

ಇದನ್ನೂ ಓದಿ: Fixed Deposits: ಎಸ್​ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್​ಡಿಎಫ್​ಸಿ ಬ್ಯಾಂಕ್ Vs ಆಕ್ಸಿಸ್​ ಬ್ಯಾಂಕ್​ ಎಫ್​ಡಿ ಬಡ್ಡಿದರಗಳ ವಿವರ

(State Bank Of India alert customers about online fraud in the name of KYC. Here is the details)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ