AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.

RBI Governor Speech Today: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿವಿಧ ಘೋಷಣೆ ಮಾಡಿದ್ದಾರೆ.

Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.
ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್
Follow us
Srinivas Mata
| Updated By: Digi Tech Desk

Updated on:May 05, 2021 | 11:32 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ದಿಢೀರನೆ ಬಂದ ಮಾಹಿತಿ ಹಲವು ಕುತೂಹಲಗಳಿಗೆ ಬುಧವಾರ ಕಾರಣ ಆಯಿತು. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿವಿಧ ವಲಯಗಳಿಂದ ನಿರೀಕ್ಷೆಗಳು ಸಹ ಎತ್ತರಕ್ಕೇರಿದವು. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:

* ರಾಜ್ಯ ಸರ್ಕಾರಗಳಿಗೆ ಓವರ್​ಡ್ರಾಫ್ಟ್ ಪಡೆಯುವ ನಿಯಮವನ್ನು ಸೆಪ್ಟೆಂಬರ್ 30, 2021ರ ತನಕ ಸಡಿಲಿಸಿದ ಆರ್​ಬಿಐ.

* ಡಿಸೆಂಬರ್ 1, 2021ರ ತನಕ ಸೀಮಿತವಾದ ಕೆವೈಸಿ (ನೋ ಯುವರ್ ಕಸ್ಟಮರ್) ಬಳಸುವುದಕ್ಕೆ ಅನುಮತಿ.

* ಆರ್​ಬಿಐನಿಂದ ಮತ್ತೊಮ್ಮೆ ಒಂದು ಸಲದ ರೀಸ್ಟ್ರಕ್ಷರಿಂಗ್ (ಮರು ಹೊಂದಾಣಿಕೆ) ಆರಂಭ. ಎಂಎಸ್​ಎಂಇಗಳು ಹಾಗೂ ವೈಯಕ್ತಿಕ ಸಾಲಗಾರರಿಗೆ ಅವಕಾಶ. ವೈಯಕ್ತಿಕ, ಎಂಎಸ್​ಎಂಇಗಳಿಗೆ ಅವಕಾಶ. ಒಂದು ಸಲದ ಮರು ಹೊಂದಾಣಿಕೆಗೆ ಸೆಪ್ಟೆಂಬರ್ 30, 2021ರ ತನಕ ಅವಕಾಶ ಇದೆ. ರೀಸ್ಟ್ರಕ್ಚರಿಂಗ್ 1.0ದಲ್ಲಿ ಮರುಪಾವತಿ ವಿನಾಯಿ ಒಟ್ಟಾರೆ 2 ವರ್ಷದ ತನಕ ವಿಸ್ತರಣೆ.

* 500 ಕೋಟಿ ರೂಪಾಯಿಯೊಳಗೆ ಆಸ್ತಿ ಇರುವ ಕಿರುಸಾಲ ಹಣಕಾಸು ಬ್ಯಾಂಕ್​ಗಳಿಗೆ ಸಾಲ ನೀಡುವುದಕ್ಕೆ ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ ಅವಕಾಶ

* ದೀರ್ಘಾವಧಿಯ ರೆಪೋ ಕಾರ್ಯಾಚರಣೆಗೆ ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ 10,000 ಕೋಟಿ ತನಕ ಘೋಷಣೆ ಮಾಡಿದೆ. ಈ ಹಣವನ್ನು ಬಳಸಿಕೊಂಡು ಒಬ್ಬ ಸಾಲಗಾರರಿಗೆ 10 ಲಕ್ಷ ರೂಪಾಯಿ ತನಕ ಸಾಲ ನೀಡಬಹುದು.

* 50,000 ಕೋಟಿ ರೂಪಾಯಿ ನಗದು ಒದಗಿಸುತ್ತಿದ್ದು, ಅದರ ಮೂಲಕವಾಗಿ ಲಸಿಕೆ ತಯಾರಕರು, ವೈದ್ಯಕೀಯ ವ್ಯವಸ್ಥೆ, ಆಸ್ಪತ್ರೆಗಳು ಮತ್ತು ರೋಗಿಗಳಿಗೆ ಈ ಯೋಜನೆ ಅಡಿ ಬೆಂಬಲ ದೊರೆಯುತ್ತದೆ. ರೆಪೋ ದರವಯ ಮಾರ್ಚ್ 31, 2022ರ ತನಕ ಮುಕ್ತವಾಗಿರುತ್ತದೆ.

* ಹವಾಮಾನ ಇಲಾಖೆಯಿಂದ ಸಾಮಾನ್ಯ ಮುಂಗಾರು ಅಂದಾಜಿಸಿದ್ದು, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಮತ್ತು 2021-22ನೇ ಸಾಲಿನ ಒಟ್ಟಾರೆ ಉತ್ಪಾದನೆ ಹಾಗೇ ಉಳಿಯಲಿದೆ. ಇದರ ಅನುಕೂಲಕರ ಪರಿಣಾಮ ಹಣದುಬ್ಬರ ಒತ್ತಡದ ಮೇಲೆ ಆಗುತ್ತದೆ.

* ಪ್ರಬಲವಾದ ಆರ್ಥಿಕ ಚೇತರಿಕೆ ಹಂತದ ಸ್ಥಿತಿಯಲ್ಲಿದ್ದ ಪರಿಸ್ಥಿತಿ ಈಗ ಹೊಸದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ.

* ಎರಡನೇ ಹಂತದ ಸರ್ಕಾರಿ ಸೆಕ್ಯೂರಿಟಿಗಳ ಖರೀದಿ 35,000 ಕೋಟಿ ರೂಪಾಯಿ G-SAP 1.0 ಅಡಿಯಲ್ಲಿ ಮೇ 20ರಂದು ಕೈಗೊಳ್ಳಲಾಗುವುದು.

* ಅದ್ಯಾವ ವೇಗದಲ್ಲಿ ಹಬ್ಬುತ್ತಾ ಕೊರೊನಾ ವೈರಸ್ ಪರಿಣಾಮ ಬೀರುತ್ತಿದೆಯೋ ಅಷ್ಟೇ ವೇಗದಲ್ಲಿ ಮತ್ತು ವಿಶಾಲವಾಗಿ ಕ್ರಮ ಕೈಗೊಳ್ಳಬೇಕು, ಒಂದಾದ ನಂತರ ಒಂದು, ಹೊಂದಾಣಿಕೆ ಆಗುವಂತೆ ಹಾಗೂ ಸರಿಯಾದ ಸಮಯಕ್ಕೆ ಕೈಗೊಳ್ಳಬೇಕು. ದುರ್ಬಲವರ್ಗದವರೂ ಸೇರಿದಂತೆ ವಿವಿಧ ವರ್ಗದವರಿಗಾಗಿ ಕ್ರಮ ಕೈಗೊಳ್ಳಬೇಕು.

* ಆರ್​ಬಿಐನ ಏಪ್ರಿಲ್ ತಿಂಗಳ ಹಣಕಾಸು ನೀತಿ ಸಮಿತಿಯ ಅಂದಾಜಿಗಿಂತ ಹೆಚ್ಚು ವಿಚಲಿತ ಆಗುವುದಿಲ್ಲ.

* ಕೋವಿಡ್ ನಿರ್ಬಂಧ ಮತ್ತು ಕಂಟೇನ್​ಮೆಂಟ್​ಗಳ ಹೊರತಾಗಿಯೂ ಹೇಗೆ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬುದನ್ನು ಉದ್ಯಮಗಳು ಕಲಿತಿವೆ.

* ಉತ್ತಮ ಮುಂಗಾರು ನಿರೀಕ್ಷೆಯಿದ್ದು, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಪ್ರಬಲವಾಗಿರಲಿದೆ.

* ಸರಾಸರಿ ಪೂರೈಕೆ ಪರಿಸ್ಥಿತಿಯು ಕೃಷಿ ವಲಯದ ಮೇಲೆ ಆಧಾರವಾಗಿದೆ.

* ಕೋವಿಡ್- 19 ಬಿಕ್ಕಟ್ಟಿನಿಂದ ಆಚೆ ಬರುವ ಭಾರತದ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಿ. ಕೋವಿಡ್-19 ಸನ್ನಿವೇಶದ ಮೇಳೆ ನಿಗಾ ಇಡುವುದನ್ನು ಆರ್​ಬಿಐ ಮುಂದುವರಿಸಿದೆ. ತನ್ನ ಎಲ್ಲ ಸಂಪನ್ಮೂಲವನ್ನು ಇದಕ್ಕಾಗಿ ನಿಯೋಜಿಸಲಿದೆ.

ಇದನ್ನೂ ಓದಿ: RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ

( RBI Guv Shaktikanta Das announced various measures to support covid- 19 second wave situation)

Published On - 11:18 am, Wed, 5 May 21

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ