AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond Series VIII: ಸವರನ್ ಗೋಲ್ಡ್​ ಬಾಂಡ್​​ಗೆ ಪ್ರತಿ ಗ್ರಾಮ್​ ಚಿನ್ನ 4791 ರೂ.

ಸವರನ್ ಗೋಲ್ಡ್ ಬಾಂಡ್ 2021-22ನೇ ಸಾಲಿನ VIII ಸರಣಿಯ ಚಂದಾದಾರಿಕೆ ಸೋಮವಾರದಿಂದ ಆರಂಭವಾಗಲಿದೆ. ಪ್ರತಿ ಗ್ರಾಮ್​ಗೆ 4791 ರೂಪಾಯಿ ದರ ನಿಗದಿ ಮಾಡಲಾಗಿದೆ.

Sovereign Gold Bond Series VIII: ಸವರನ್ ಗೋಲ್ಡ್​ ಬಾಂಡ್​​ಗೆ ಪ್ರತಿ ಗ್ರಾಮ್​ ಚಿನ್ನ 4791 ರೂ.
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Nov 27, 2021 | 8:05 AM

Share

ಭಾರತ ಸರ್ಕಾರವು 2021-22ನೇ ಸಾಲಿನ (ಸರಣಿ VIII) ಚಂದಾದಾರಿಕೆಗಾಗಿ ಸವರನ್ ಗೋಲ್ಡ್ ಬಾಂಡ್‌ಗಳನ್ನು ತೆರೆಯುವ ದಿನಾಂಕಗಳನ್ನು ಪ್ರಕಟಿಸಿದೆ. ನವೆಂಬರ್ 29ರಿಂದ ಡಿಸೆಂಬರ್ 3ರ ಅವಧಿಯಲ್ಲಿ ಐದು ದಿನಗಳ ಚಂದಾದಾರಿಕೆಗಾಗಿ ಸರಣಿಯು ತೆರೆದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಭಾರತ ಸರ್ಕಾರದ ಪರವಾಗಿ ಬಾಂಡ್‌ಗಳನ್ನು ವಿತರಿಸುತ್ತದೆ. ಚಂದಾದಾರಿಕೆಯ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ ಆರ್​ಬಿಐನ ಸೂಚನೆಯಂತೆ ಪ್ರತಿ ಗ್ರಾಂಗೆ 4,791 ರೂಪಾಯಿಗೆ ನಿಗದಿಪಡಿಸಲಾಗಿದೆ. ಆರ್‌ಬಿಐ ಜೊತೆಗಿನ ಸಮಾಲೋಚನೆ ನಂತರ ಸರ್ಕಾರವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ವಿತರಿಸುವ ಬೆಲೆಯಿಂದ ಪ್ರತಿ ಗ್ರಾಂಗೆ 50 ರಿಯಾಯಿತಿ ನೀಡಲು ನಿರ್ಧರಿಸಿದೆ ಮತ್ತು ಪಾವತಿಯನ್ನು ಡಿಜಿಟಲ್ ವಿಧಾನದ ಮೂಲಕ ಮಾಡಬೇಕಾಗುತ್ತದೆ.

ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 4,741 ರೂಪಾಯಿ ಆಗಿರುತ್ತದೆ. ಚಿನ್ನದ ಬಾಂಡ್‌ಗಳು ಎಂಟು ವರ್ಷಗಳ ಅವಧಿಯನ್ನು ಹೊಂದಿದ್ದು, ಐದನೇ ವರ್ಷದ ನಂತರ ನಿರ್ಗಮನ ಆಯ್ಕೆಯನ್ನು ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಚಲಾಯಿಸಬಹುದು. ಹೂಡಿಕೆದಾರರಿಗೆ ನಾಮಿನಲ್ ಮೌಲ್ಯದ ಮೇಲೆ ಅರೆ-ವಾರ್ಷಿಕವಾಗಿ ಪಾವತಿಸಬಹುದಾದ ವಾರ್ಷಿಕ ಶೇ 2.50ರಷ್ಟು ನಿಗದಿತ ದರದಲ್ಲಿ ಪರಿಹಾರವನ್ನು ನೀಡಲಾಗುತ್ತದೆ ಮತ್ತು ಕನಿಷ್ಠ ಅನುಮತಿಸುವ ಹೂಡಿಕೆಯು 1 ಗ್ರಾಂ ಚಿನ್ನವಾಗಿರುತ್ತದೆ.

ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಚಿನ್ನದ ಖರೀದಿಗೆ ಬಳಸುವ ದೇಶೀಯ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯಕ್ಕೆ ಬದಲಾಯಿಸುವ ಉದ್ದೇಶದಿಂದ ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು 2015ರ ನವೆಂಬರ್​ನಲ್ಲಿ ಪ್ರಾರಂಭಿಸಲಾಯಿತು.

MCXನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ 10 ಗ್ರಾಂಗೆ ₹47,728 ಕ್ಕೆ ಏರಿದೆ. ಏರಿಕೆಯ ಹೊರತಾಗಿಯೂ, ಅಮೆರಿಕ ವಿತ್ತೀಯ ನೀತಿಯ ನಿರೀಕ್ಷೆಗಿಂತ ಮುಂಚೆಯೇ ಬಿಗಿಯಾಗುವ ಭಯವು ಬೆಲೆಬಾಳುವ ಲೋಹದ ಮೇಲೆ ತೂಗುವುದರಿಂದ ಈ ತಿಂಗಳ ಗರಿಷ್ಠ ಮಟ್ಟದಿಂದ ಪ್ರತಿ 10 ಗ್ರಾಂ ಚಿನ್ನ 1,000ಕ್ಕಿಂತ ಕಡಿಮೆಯಿದೆ.

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ