AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Companies: ಅತ್ಯುತ್ತಮ ಕೆಲಸದ ವಾತಾವರಣ: ಟಿಸಿಎಸ್ ಪ್ರಥಮ; ಬೆಂಗಳೂರಲ್ಲೇ ಹೆಚ್ಚಿವೆ ಬೆಸ್ಟ್ ಕಂಪನಿಗಳು; ಲಿಂಕ್ಡ್​ಇನ್ ರಿಪೋರ್ಟ್

TCS Is Best Work Place: ಭಾರತದಲ್ಲಿ ಅತ್ಯುತ್ತಮ ಕೆಲಸದ ವಾತಾವರಣ ಇರುವ 25 ಕಂಪನಿಗಳ ಪಟ್ಟಿಯಲ್ಲಿ ಲಿಂಕ್ಡ್​ಇನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಟಿಸಿಎಸ್ ಪ್ರಥಮ ಸ್ಥಾನ ಪಡೆದಿದೆ. ಈ 25 ಕಂಪನಿಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ.

Best Companies: ಅತ್ಯುತ್ತಮ ಕೆಲಸದ ವಾತಾವರಣ: ಟಿಸಿಎಸ್ ಪ್ರಥಮ; ಬೆಂಗಳೂರಲ್ಲೇ ಹೆಚ್ಚಿವೆ ಬೆಸ್ಟ್ ಕಂಪನಿಗಳು; ಲಿಂಕ್ಡ್​ಇನ್ ರಿಪೋರ್ಟ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2023 | 11:25 AM

Share

ನವದೆಹಲಿ: ಭಾರತದಲ್ಲಿ ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಐಟಿ ಕಂಪನಿ ಎನಿಸಿರುವ ಟಿಸಿಎಸ್​ನಲ್ಲಿ ಕೆಲಸದ ವಾತಾವರಣ ಕೂಡ ಉತ್ತಮ ಎಂದು ಬಹಳ ಮಂದಿ ಹೇಳುವುದಿದೆ. ಲಿಂಕ್ಡ್​ಇನ್ (LinkedIn) ವರದಿಯೊಂದರ ಪ್ರಕಾರ ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಇರುವ ಕಂಪನಿಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (TCS- Tata Consultancy Service) ಪ್ರಥಮ ಸ್ಥಾನ ಪಡೆದಿದೆ. ಲಿಂಕ್ಡ್​ಇನ್​ನ ‘2023 ಟಾಪ್ ಕಂಪನೀಸ್ ಇಂಡಿಯಾ’ ಪಟ್ಟಿಯಲ್ಲಿ ಟಿಸಿಎಸ್ ಅಗ್ರಜ ಎನಿಸಿದೆ. ಕೆಲಸ ಮಾಡಲು ಮತ್ತು ವೃತ್ತಿ ಬೆಳವಣಿಗೆ ಹೊಂದಲು ಅತ್ಯುತ್ತಮ ವಾತಾವರಣ ಇರುವ ಕಂಪನಿಗಳ ಈ ಪಟ್ಟಿಯಲ್ಲಿ ಟಿಸಿಎಸ್ ನಂತರದ ಸ್ಥಾನವನ್ನು ಅಮೇಜಾನ್ ಹಾಗೂ ಮಾರ್ಗನ್ ಸ್ಟಾನ್ಲೀ ಕಂಪನಿಗಳು ಪಡೆದಿವೆ.

ವೃತ್ತಿಪರರ ಸೋಷಿಯಲ್ ಮೀಡಿಯಾ ತಾಣವೆನಿಸಿರುವ ಲಿಂಕ್ಡ್​ಇನ್ ಪ್ರತೀ ವರ್ಷವೂ ಇಂಥ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಅತ್ಯುತ್ತಮ ಕೆಲಸದ ವಾತಾವರಣ ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿ ಕ್ಷೇತ್ರದವೇ ಹೆಚ್ಚಿರುತ್ತಿದ್ದವು. ಈ ಬಾರಿ ಬೇರೆ ಬೇರೆ ಕ್ಷೇತ್ರದ ಕಂಪನಿಗಳು ಪಟ್ಟಿಯಲ್ಲಿವೆ. ಟೆಕ್ ಕಂಪನಿಗಳ ಜೊತೆ ಹಣಕಾಸು ಸೇವೆ, ಆಯಿಲ್ ಅಂಡ್ ಗ್ಯಾಸ್, ವೃತ್ತಿಪರ ಸೇವೆ, ತಯಾರಕಾ ವಲಯ, ಗೇಮಿಂಗ್ ಕ್ಷೇತ್ರದ ಕಂಪನಿಗಳು ಈ ಪಟ್ಟಿಯಲ್ಲಿವೆ.

ಇದನ್ನೂ ಓದಿSalary Hike: 18 ತಿಂಗಳಲ್ಲಿ ಮೂರನೇ ವೇತನ ಹೆಚ್ಚಳ: ಈ ಐಟಿ ಕಂಪನಿಯು ಇತರರಿಗೆ ಮಾದರಿಯಾಗುತ್ತಿದೆ

ಲಿಂಕ್ಡ್​ಇನ್ ಪಟ್ಟಿ: ಟಾಪ್ ಕಂಪನಿಗಳು ಹೆಚ್ಚಾಗಿ ಇರುವುದು ಬೆಂಗಳೂರಿನಲ್ಲೇ

ಅತ್ಯುತ್ತಮ ಕೆಲಸದ ವಾತಾವರಣ ಇರುವ ಕಂಪನಿಗಳ ಪಟ್ಟಿಯಲ್ಲಿರುವ 25 ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿರುವಂಥವೇ ಆಗಿರುವುದು ವಿಶೇಷ. ಬೆಂಗಳೂರು ನಂತರ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಪುಣೆ ನಗರಗಳು ಬರುತ್ತವೆ.

ಅತ್ಯುತ್ತಮ ಕೆಲಸದ ವಾತಾರಣ ಇರುವ ಕಂಪನಿಗಳ ಪಟ್ಟಿಯಲ್ಲಿ 25 ಕಂಪನಿಗಳು ಸ್ಥಾನ ಪಡೆದಿವೆ. ಇವುಗಳಲ್ಲಿ 10 ಕಂಪನಿಗಳು ಬ್ಯಾಂಕಿಂಗ್ ಇತ್ಯಾದಿ ಹಣಕಾಸು ಕ್ಷೇತ್ರಕ್ಕೆ ಸೇರಿದವೇ ಆಗಿರುವುದು ಗಮನಾರ್ಹ. ಎಚ್​ಡಿಎಫ್​ಸಿ ಬ್ಯಾಂಕ್, ಮೆಕೇರೀ ಗ್ರೂಪ್, ಮಾಸ್ಟರ್​ಕಾರ್ಡ್, ಯುಬಿ ಇತ್ಯಾದಿ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಗೇಮಿಂಗ್ ಕ್ಷೇತ್ರದ ಕಂಪನಿಗಳು ಇದೇ ಮೊದಲ ಬಾರಿಗೆ ಸ್ಥಾನ ಪಡೆದಿವೆ. ಡ್ರೀಮ್11 ಮತ್ತು ಗೇಮ್ಸ್ 24X7 ಕಂಪನಿಗಳು ಈ ಪಟ್ಟಿಯಲ್ಲಿ ಕ್ರಮವಾಗಿ 20 ಮತ್ತು 24ನೇ ಸ್ಥಾನ ಪಡೆದಿವೆ. ಇನ್ನೂ ಕುತೂಹಲವೆಂದರೆ ಈ 25 ಕಂಪನಿಗಳಲ್ಲಿ 17 ಕಂಪನಿಗಳು ಇದೇ ಮೊದಲ ಬಾರಿಗೆ ಸ್ಥಾನ ಪಡೆದಿರುವುದು.

ಇದನ್ನೂ ಓದಿShare Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?

ಲಿಂಕ್ಡ್​ಇನ್​ನ ಎಂಟು ಪಿಲ್ಲರ್​ಗಳ ಮಾನದಂಡ

2023 ಟಾಪ್ ಕಂಪನೀಸ್ ಇಂಡಿಯಾ’ ಪಟ್ಟಿ ತಯಾರಿಸಲು ಲಿಂಕ್ಡ್​ಇನ್ 8 ಪಿಲ್ಲರ್​ಗಳ ಮಾನದಂಡದ ಆಧಾರದ ಮೇಲೆ ಕಂಪನಿಗಳನ್ನು ಆಯ್ಕೆ ಮಾಡಿದೆ. ಉದ್ಯೋಗಿಗಳಿಗೆ ವೃತ್ತಿಯಲ್ಲಿ ಪ್ರಗತಿ ಹೊಂದುವ ಅವಕಾಶಗಳು ಎಷ್ಟಿವೆ ಎಂಬುದು ಈ ಮಾನದಂಡಗಳ ಮೂಲಕ ಅಳೆಯಲಾಗುತ್ತದೆ. ಕೌಶಲ್ಯಗಳ ಮಟ್ಟ ಹೆಚ್ಚಿಸಿಕೊಳ್ಳುವುದು, ಕಂಪನಿಯ ಸ್ಥಿರತೆ, ಬಾಹ್ಯ ಅವಕಾಶ, ಲಿಂಗ ವೈವಿಧ್ಯತೆ, ಶಿಕ್ಷಣ ಹಿನ್ನೆಲೆ, ವೃತ್ತಿ ಅಭಿವೃದ್ಧಿ ಇತ್ಯಾದಿ ಪಿಲ್ಲರ್​ಗಳನ್ನು ಲಿಂಕ್ಡ್​ಇನ್ ತನ್ನ ಡಾಟಾ ಮೂಲಕ ಗ್ರಹಿಸಿ ವಿವಿಧ ಕಂಪನಿಗಳಿಗೆ ಶ್ರೇಯಾಂಕ ಕೊಟ್ಟಿರುವುದು ತಿಳಿದುಬಂದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ