AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

Bitcoin ಬಿಟ್​ಕಾಯಿನ್​ ಎಂದರೇನು? ಇದರ ಮೌಲ್ಯ ಹೆಚ್ಚುತ್ತಿರುವದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಯಿತು.

Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Feb 05, 2021 | 6:28 PM

Share

ಷೇರು ಮಾರುಕಟ್ಟೆ ಏರಿಕೆ ಜತೆಗೆ ಕ್ರಿಪ್ಟೊ ಕರೆನ್ಸಿಯಲ್ಲಿ ಒಂದಾದ ಬಿಟ್​ಕಾಯಿನ್ Bitcoin​ ಮೌಲ್ಯ ಕೂಡ ಹೆಚ್ಚುತ್ತಿದೆ ಎನ್ನುವ ಸುದ್ದಿಯನ್ನು ನೀವು ಓದಿರಬಹುದು. ಬಿಟ್​ ಕಾಯಿನ್​ ಎಂದರೇನು? ಇದರ ಮೌಲ್ಯ ಹೆಚ್ಚುತ್ತಿರುವುದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಟಿವಿ9 ಕನ್ನಡ ಡಿಜಿಟಲ್​ ಫೇಸ್​ಬುಕ್​ ಲೈವ್​ನಲ್ಲಿ ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಲಾಯಿತು. ಹೂಡಿಕೆ ತಜ್ಞ ರುದ್ರಮೂರ್ತಿ, ಇಂಡಿಯಾ ಮನಿ ಡಾಟ್ ಕಾಮ್ ಸ್ಥಾಪಕ ಸಿ.ಎಸ್.ಸುಧೀರ್,​ ಪತ್ರಕರ್ತ ಅರುಣ್​ ಸುಂದರಂ ಮಾಹಿತಿ ನೀಡಿದರೆ, ಆ್ಯಂಕರ್​ ಸೌಮ್ಯಾ ಹೆಗಡೆ ಸಂವಾದ ನಡೆಸಿಕೊಟ್ಟರು.

ಜಗತ್ತಿನಲ್ಲಿ ಅನೇಕ ಕ್ರಿಪ್ಟೋ ಕರೆನ್ಸಿ ಇದೆ. ಅದರಲ್ಲಿ ಬಿಟ್​ ಕಾಯಿನ್​ ಕೂಡ ಒಂದು. ಇದು ಡಿಜಿಟಲ್ ಕರೆನ್ಸಿ. ಭಾರತದ 500 ರೂಪಾಯಿ ನೋಟು ನಿಮ್ಮ ಕೈನಲ್ಲಿ ಇದ್ದರೆ ಅದಕ್ಕೆ ಒಂದು ಭೌತಿಕ ಆಕಾರ ಇರುತ್ತದೆ. ಅದಕ್ಕೆ ಆರ್​ಬಿಐನ ಖಾತ್ರಿ ಇರುತ್ತದೆ. ಆದರೆ, ಕ್ರಿಪ್ಟೋ ಅಂದರೆ ಅದು ವರ್ಚುವಲ್​ ಕರೆನ್ಸಿ. ಬ್ಲಾಕ್​ ಚೈನ್​ ಟೆಕ್ನಾಲಜಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇದನ್ನು ಸಿದ್ಧಪಡಿಸಲಾಗಿರುತ್ತದೆ. ಆದರೆ, ಕ್ರಿಪ್ಟೋ ಕರೆನ್ಸಿಗೆ ಯಾವುದೇ ಬ್ಯಾಕಪ್​ ಇಲ್ಲ, ನಿಮಗೆ ಖಾತ್ರಿ ಕೂಡ ಸಿಗುವುದಿಲ್ಲ ಎಂದು ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿ ನೀಡಿದರು ರುದ್ರಮೂರ್ತಿ.

ವಿಶ್ವದಲ್ಲಿ ಬಿಟ್​ ಕಾಯಿನ್​ ಅನ್ನು ಕೆಲ ದೇಶಗಳು ಒಪ್ಪಿದರೆ, ಭಾರತ ಸೇರಿ ಅನೇಕ ರಾಷ್ಟ್ರಗಳು ಒಪ್ಪುತ್ತಿಲ್ಲ. ಭಾರತದಲ್ಲಿ ಡಿಜಿಟಲ್​ ಕರೆನ್ಸಿ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಒಂದೊಮ್ಮೆ ಇದನ್ನು ತಂದರೆ, ಗ್ಯಾರಂಟಿಯೊಂದಿಗೆ ಡಿಜಿಟಲ್​ ಕರೆನ್ಸಿ ವ್ಯವಹಾರ ಮಾಡಬಹುದು. ಚೀನಾ ಕೂಡ ಇಂತಹ ಚಿಂತನೆ ನಡೆಸುತ್ತಾ ಇದೆ. ಸರ್ಕಾರವೇ ಡಿಜಿಟಲ್​ ಕರೆನ್ಸಿ ತಂದರೆ ನೋಟು ಪ್ರಿಂಟ್​ ಮಾಡುವ ಪ್ರಮೇಯ ತಪ್ಪುತ್ತದೆ. ಪೇಪರ್ ಉಳಿಯುತ್ತದೆ. ನಕಲಿ ನೋಟು ಹಾವಳಿ ಕೂಡ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೌಮ್ಯಾ ಹೆಗಡೆ, ಸುಧೀರ್, ರುದ್ರಮೂರ್ತಿ, ಅರುಣ್​ ಸುಂದರಂ

ಇದೊಂದು ಗ್ಯಾಂಬ್ಲಿಂಗ್​.. ಬಿಟ್​ ಕಾಯಿನ್​ ಎನ್ನುವುದು ಒಂದು ಗ್ಯಾಂಬ್ಲಿಂಗ್​ ಎಂದಿರುವ ರುದ್ರಮೂರ್ತಿ, ತಿರುಪತಿ ಹುಂಡಿಗೆ ದುಡ್ಡು​ ಹಾಕಿದರೆ ಸ್ವಲ್ಪ ಪುಣ್ಯ ಬರಬಹುದು. ಆದರೆ, ಬಿಟ್​ ಕಾಯಿನ್​ನಲ್ಲಿ ಹಣ ಹಾಕಿದರೆ ಏನೂ ಬುರುವುದಿಲ್ಲ. ಬಿಟ್​ ಕಾಯಿನ್​ ಜಗತ್ತಲ್ಲಿ ಒಂದು ದಿನಕ್ಕೆ ಶೇ 15ರಷ್ಟು ಏರಿಳಿತ ಇರುತ್ತದೆ. ಇದರಲ್ಲಿ ತುಂಬಾ ರಿಸ್ಕ್​ ಇದೆ ಎನ್ನುತ್ತಾರೆ ಅವರು.

ಭಾರತಕ್ಕೆ ಬರುತ್ತಾ ಬಿಟ್​ ಕಾಯಿನ್​? ಭಾರತದಲ್ಲಿ ಸರ್ಕಾರ ಬಿಟ್​ ಕಾಯಿನ್​ ಚಲಾವಣೆಗೆ ಒಪ್ಪಿಗೆ ಕೊಡುತ್ತೋ, ಇಲ್ಲವೋ ಎನ್ನುವ ವಿಚಾರದ ಬಗ್ಗೆ ಚರ್ಚೆ ಇದೆ. ಆದರೆ, ಭಾರತದಲ್ಲಿ ಬಿಟ್​ ಕಾಯಿನ್​ ಚಲಾವಣೆಗೆ ಅನುಮತಿ ಕೊಡುವ ಸಾಧ್ಯತೆ ತುಂಬಾ ಕಡಿಮೆ. ಸರ್ಕಾರವೇ ಡಿಜಿಟಲ್​ ಕರೆನ್ಸಿ ತರಬಹುದು ಎಂದು ವಿಶ್ಲೇಷಿಸಿದರು.

ಶ್ರೀಮಂತರ ಬಳಿ ಇದೆ ಬಿಟ್​ ಕಾಯಿನ್​.. ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸೇರಿ ಅನೇಕರ ಬಳಿ ಬಿಟ್​ ಕಾಯಿನ್​ ಇದೆ ಎನ್ನಲಾಗುತ್ತಿದೆ. ಇವರು ಇದಕ್ಕೆ ಹೂಡಿಕೆ​ ಮಾಡಿದ್ದು ಹೇಗೆ ಮತ್ತು ಏಕೆ ಎನ್ನುವ ಬಗ್ಗೆ ರುದ್ರಮೂರ್ತಿ ಮಾಹಿತಿ ಉತ್ತರ ನೀಡಿದ್ದಾರೆ. 2011ರಲ್ಲಿ ಒಂದು ಬಿಟ್​ ಕಾಯಿನ್​ ಬೆಲೆ ಕೇವಲ 1 ಡಾಲರ್ (72 ರೂಪಾಯಿ) ಇತ್ತು. ಈಗ ಇದರ ಬೆಲೆ 37,292 ಡಾಲರ್​ (27 ಲಕ್ಷ ರೂಪಾಯಿ) ಆಗಿದೆ. ಶ್ರೀಮಂತ ವ್ಯಕ್ತಿಗಳು ಎನಿಸಿಕೊಂಡವರು 2011ರಲ್ಲೇ ಸ್ವಲ್ಪ ಬಿಟ್​ ಕಾಯಿನ್​ ಪಡೆದಿರಬಹುದು. ಆದರೆ, ಈಗ ಬಿಟ್​ ಕಾಯಿನ್​ಗೆ ದುಡ್ಡು ಹಾಕಲು ಹೋದರೆ.. ಭಿಕ್ಷೆ ಪಾತ್ರೆ ಸಿಗುತ್ತೆ ಎಂದು ರುದ್ರಮೂರ್ತಿ ಕಠಿಣವಾಗಿ ಎಚ್ಚರಿಸಿದರು.

ನಿತ್ಯಾನಂದ ಒಂದು ದ್ವೀಪ ಖರೀದಿಸಿ ಅಲ್ಲಿ ಅವರದ್ದೇ ಆದ ಕರೆನ್ಸಿಯನ್ನು ಚಲಾವಣೆಗೆ ತಂದಿದ್ದಾರೆ. ಅದೇ ರೀತಿ ಬ್ಲಾಕ್​ ಚೈನ್​ ಟೆಕ್ನಾಲಜಿ ಬಳಸಿಕೊಂಡು ನೀವು ಕೂಡ ಕ್ರಿಪ್ಟೋ ಕರೆನ್ಸಿ ಸಿದ್ಧಪಡಿಸಬಹುದಾಗಿದೆ ಎಂದು ಮಾತು ಆರಂಭಿಸಿದರು ಇಂಡಿಯಾ ಮನಿ ಸ್ಥಾಪಕ ಸುಧೀರ್​.

ಬಿಟ್​ ಕಾಯಿನ್​​ ಇದು ಲಿಮಿಟೆಡ್​ ಕರೆನ್ಸಿ. ಡಿಮ್ಯಾಂಡ್​ ಕಡಿಮೆ ಇದ್ದು, ಬೇಡಿಕೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಇದರ ಬೆಲೆ ಹೆಚ್ಚಾಗುತ್ತಿದೆ. ಕೆಲ ನೀಚ ಬುದ್ಧಿಯವರು ಬಿಟ್​ ಕಾಯಿನ್​ ಹೆಸರಲ್ಲಿ ಅನೇಕ ಮುಗ್ಧರನ್ನು ಮೋಸ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಾದರೆ ಸಂಸ್ಥೆಯ ಮೌಲ್ಯ ಆಧರಿಸಿ ಷೇರು ಸೂಚ್ಯಂಕ ನಿರ್ಧಾರವಾಗುತ್ತದೆ. ಆದರೆ, ಬಿಟ್​ ಕಾಯಿನ್​ನಲ್ಲಿ ಆ ರೀತಿ ಇಲ್ಲ. ಇದೆಲ್ಲ ಮೂರ್ಖತನದ ಪರಮಾವಧಿ. ಈ ಚೈನ್​ ಒಂದು ದಿನ ಕಳಚಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳ್ಳ ಕೆಲಸಕ್ಕೆ ಬಳಕೆ ಇತ್ತೀಚೆಗೆ ಉಜಿರೆಯಲ್ಲಿ ಮಗುವನ್ನು ಕಿಡ್ನ್ಯಾಪ್​ ಮಾಡಿ ಬಿಟ್​ ಕಾಯಿನ್​ಗೆ ಬೇಡಿಕೆ ಇಡಲಾಗಿತ್ತು. ಹೀಗಾಗಿ, ಈ ಕರೆನ್ಸಿ ಕೇವಲ ಬೇರೆ ಕೆಲಸಗಳಿಗೆ ಹೆಚ್ಚು ಬಳಕೆ ಆಗುತ್ತಿದೆ. ಕಳೆದ 15 ವರ್ಷಗಳಲ್ಲಿ ನಾವು ಟೆಕ್ನಾಲಜಿಯಲ್ಲಿ ತುಂಬಾನೇ ಮುಂದುವರಿದಿದ್ದೇವೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೆಲವರು ಕೆಲವರನ್ನು ಮೋಸ ಮಾಡುತ್ತಿದ್ದಾರೆ. ಕೆಲವೇ ಕೆಲವರು ಪತ್ರಕರ್ತರು ಬಿಟ್​ ಕಾಯಿನ್​ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಆದರೆ, ಬಹುತೇಕರು ಇದನ್ನು ಕೊಂಡುಕೊಳ್ಳಿ, ನಿಮಗೆ ತುಂಬಾನೇ ಲಾಭ ಇದೆ ಎಂದು ಹೇಳುತ್ತಾರೆ. ಅದೇ ರೀತಿ ಸಾಕಷ್ಟು ಯೂಟ್ಯೂಬರ್​ಗಳು ಇದೇ ಕೆಲಸ ಮಾಡುತ್ತಿದ್ದಾರೆ. ದುಡ್ಡು ತೆಗೆದುಕೊಂಡು ಬಿಟ್​ ಕಾಯಿನ್​ ಪ್ರಮೋಟ್​ ಮಾಡುತ್ತಿದ್ದಾರೆ. ಇದು ದುರಾದೃಷ್ಟಕರ ಎಂದು ಸುಧೀರ್ ಬೇಸರ ಹೊರ ಹಾಕಿದರು.

ಪತ್ರಕರ್ತರಾದ ಅರುಣ್​ ಸುಂದರಂ ಮಾತನಾಡಿ, ಆದರೆ, 2015ರಲ್ಲೇ ಭಾರತದಲ್ಲಿ ಈ ಡಿಜಿಟಲ್​ ಕರೆನ್ಸಿ ಹಾವಳಿ ಆರಂಭವಾಗಿತ್ತು. 2017ರಲ್ಲಿ ​ಕ್ರಿಪ್ಟೋ ಕರೆನ್ಸಿಯನ್ನು ಬಳಕೆ ಮಾಡಲು ಭಾರತದಲ್ಲಿ ಒಪ್ಪಿಗೆ ಇಲ್ಲ ಎಂದು ಆರ್​ಬಿಐ ಅಧಿಸೂಚನೆ ಹೊರಡಿಸಿತ್ತು. ಈ ವಿಚಾರ ಸುಪ್ರೀಂಕೋರ್ಟ್​ ಮೆಟ್ಟಿಲು ಕೂಡ ಏರಿತ್ತು. ಮೊದಲ ಲಾಕ್​​ಡೌನ್​ಗೂ ಮೊದಲು ಕ್ರಿಪ್ಟೊ ಕರೆನ್ಸಿ ಅಕ್ರಮ ಅಲ್ಲ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಬಿಟ್​ ಕಾಯಿನ್​ ಕ್ಷೇತ್ರದಲ್ಲಿ ಯಾವುದೇ ತೇಜಿ ಕಂಡಿರಲಿಲ್ಲ. ಆದರೆ, ಕಳೆದ ನವೆಂಬರ್​ನಿಂದ ಬಿಟ್​ ಕಾಯಿನ್​ ದರ ಏರುತ್ತಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿ ಭಾರತದಲ್ಲಿ ಬ್ಯಾನ್​ ಮಾಡಬಹುದು. ಇದರ ಜತೆಗೆ ಭಾರತ ತನ್ನದೇ ಆದ ಡಿಜಿಟಲ್​ ಕರೆನ್ಸಿ ತರಬಹುದು. ಚಳಿಗಾಲದ ಅಧಿವೇಶನ ಅಥವಾ ಮಳೆಗಾಲದ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ವಿಧೇಯಕ ಮಂಡನೆ ಆಗುವ ಸಾಧ್ಯತೆ ಕೂಡ ಇದೆ ಎಂದು ಅವರು ಮುನ್ಸೂಚನೆ ನೀಡಿದರು.

Budget 2021 Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?

RBI ವಿತ್ತೀಯ ನೀತಿ ಪ್ರಕಟ: ರೆಪೊ ದರದಲ್ಲಿಲ್ಲ ಬದಲಾವಣೆ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ