AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್​ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿ ಇದೇ ವೇಗದಲ್ಲಿ ಸಾಗಿದರೆ ಮಾನವ ಸಂತತಿಗೆ ಉಳಿಗಾಲ ಇಲ್ಲವಾ? ಇಂಥ ಎಚ್ಚರಿಕೆಗಳನ್ನು ಹಲವು ನೀಡುತ್ತಿದ್ದಾರೆ. ಆದರೆ, ಎಐ ಚಿಪ್ ತಯಾರಿಸುವ ಎನ್​ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ದಾರೆ. ಎಐ ಆವಿಷ್ಕಾರಗಳಿಂದ ಯಾವ ಅಪಾಯವೂ ಆಗದು ಎಂದಿದ್ದಾರೆ. ಆದರೆ, ಟೆಕ್ನಾಲಜಿ ಕಂಪನಿಗಳು ಸುರಕ್ಷತೆ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್​ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್
ಜೆನ್ಸೆನ್ ಹುವಾಂಗ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2026 | 12:44 PM

Share

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 20: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕೆಲವೇ ವರ್ಷಗಳಲ್ಲಿ ಮನುಷ್ಯರ ಸಂತತಿಯೇ ಅಳಿದುಹೋಗಲಿದೆ ಎನ್ನುವಂತಹ ಭೀತಿ ಹುಟ್ಟಿಸಿರುವ ಅಭಿಪ್ರಾಯಗಳನ್ನು ಎನ್​ವಿಡಿಯಾ (Nvidia) ಸಿಇಒ ಜೆನ್ಸೆನ್ ಹುವಾಂಗ್ (Jensen Huang) ಅಲ್ಲಗಳೆದಿದ್ದಾರೆ. ತಂತ್ರಜ್ಞಾನವು 2030ರೊಳಗೆ ಜಗತ್ತನ್ನು ಅಳಿಸುವ ಸಾಧ್ಯತೆ ನೂರಕ್ಕೆ ಸೊನ್ನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿಬಿಎಸ್ ನ್ಯೂಸ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಎಐ ಚಿಪ್ ತಯಾರಕ ಕಂಪನಿಯ ಸಂಸ್ಥಾಪಕರಾದ ಅವರು, ಜಗತ್ತು ವಿನಾಶವಾಗುತ್ತದೆಂಬುದೆಲ್ಲಾ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.

‘ಎಐ ವಿಚಾರದಲ್ಲಿ ಭೀತಿ ಪ್ರಕಟಿಸುತ್ತಿರುವವರು ರಾಜಕೀಯ ಪ್ರೇರಿತವಾಗಿ ಮಾಡುತ್ತಿರಬಹುದು. ಅಥವಾ ಗಮನ ಸೆಳೆಯು ಪ್ರವೃತ್ತಿಯಿಂದ ಈ ಮಾತುಗಳನ್ನಾಡುತ್ತಿರಬಹುದು. ಅವರ ಹೇಳಿಕೆಗಳಿಗೆ ಯಾವುದೇ ತಂತ್ರಜ್ಞಾನ ಆಧಾರ ಇಲ್ಲ’ ಎಂದು ಜೆನ್ಸೆನ್ ಹುವಾಂಗ್ ಹೇಳಿದರು.

ಇದನ್ನೂ ಓದಿ: ಭಾರತ ಮುಂದಿನ 20 ವರ್ಷದಲ್ಲಿ 38 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ: ಅಜಿತ್ ದೋವಲ್

ತಂತ್ರಜ್ಞಾನ ಬೆಳವಣಿಗೆಯ ವೇಗ ಕುಂಠಿತಗೊಳ್ಳದಿರಲಿ: ಹುವಾಂಗ್

ಎಐ ವಿಪರೀತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇದನ್ನು ನಿಧಾನಗೊಳಿಸುವುದು ಅಗತ್ಯ ಎನ್ನುವ ಅಭಿಪ್ರಾಯವನ್ನು ಕೆಲ ತಂತ್ರಜ್ಞಾನ ಮುಖಂಡರು ಪದೇ ಪದೇ ಎಚ್ಚರಿಸುತ್ತಿರುವುದುಂಟು. ಆದರೆ, ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ಧಾರೆ. ಕಾನೂನು ನಿರ್ಬಂಧಗಳ ಮೂಲಕ ಎಐ ಬೆಳವಣಿಗೆಯ ವೇಗವನ್ನು ನಿಧಾನಗೊಳಿಸುವುದರ ಬದಲು ಎಐ ಆವಿಷ್ಕಾರಗಳ ವೇಗವನ್ನು ಕಾಯ್ದುಕೊಳ್ಳಬೇಕೆಂದು ಅವರು ವಾದಿಸಿದರು.

ತಂತ್ರಜ್ಞಾನ ಕಂಪನಿಗಳು ಆಂತರಿಕ ಗುಣಮಟ್ಟಗಳ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಾ, ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸಾಗಬೇಕು ಎಂದು ಜೆನ್ಸೆನ್ ಹುವಾಂಗ್ ತಿಳಿಹೇಳಿದರು.

ಇದನ್ನೂ ಓದಿ: 96ರ ವಯಸ್ಸಲ್ಲಿ ಅಧಿಕಾರ ಬಿಟ್ಟ ವಾರನ್ ಬಫೆಟ್; ಅಪ್ಪ ಶ್ರೀಮಂತನೆಂದು ತಿಳಿಯದೆ ಬೆಳೆದ ಮಕ್ಕಳಿಗೆ ಈಗ ದೊಡ್ಡ ಜವಾಬ್ದಾರಿ

ತಂತ್ರಜ್ಞಾನ ಅಭಿವೃದ್ಧಿಯನ್ನು ತ್ವರಿತವಾಗಿ ಪ್ರಸ್ತುತಪಡಿಸಬೇಕೆಂಬ ತರಾತುರಿಯಲ್ಲಿ ಸುರಕ್ಷತೆಯನ್ನು ಕೈಬಿಡುವುದು, ಅಸಮರ್ಪಕ ವ್ಯವಸ್ಥೆ ನಿರ್ಮಿಸುವುದರ ವಿರುದ್ಧ ಹುವಾಂಗ್ ಎಚ್ಚರಿಸಿದರು. ‘ಯಾವುದೇ ಜವಾಬ್ದಾರಿಯುತ ತಂತ್ರಜ್ಞಾನ ಕಂಪನಿಯು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮುನ್ನ ಅವು ಸಂಪೂರ್ಣ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಸುರಕ್ಷತೆ ಮತ್ತು ಆವಿಷ್ಕಾರದ ವೇಗ ಪರಿಸ್ಪರ ಪೂರಕವಾಗಿರಬೇಕು’ ಎಂದು ಎನ್​ವಿಡಿಯಾದ ಸಿಇಒ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್