AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

Aadit Palicha Poised to Be Youngest MD/CEO of a Publicly Listed Company: ಕ್ವಿಕ್ ಕಾಮರ್ಸ್ ದೈತ್ಯ ಝೆಪ್ಟೋದ ಸಹ-ಸ್ಥಾಪಕ ಆದಿತ್ ಪಲಿಚಾ, ತಮ್ಮ 23ನೇ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಕಂಪನಿಯ ಅತಿ ಕಿರಿಯ MD/CEO ಆಗಲು ಸಿದ್ಧರಾಗಿದ್ದಾರೆ. ಐದು ವರ್ಷಗಳ ಹಿಂದೆ ಸ್ಟ್ಯಾನ್‌ಫೋರ್ಡ್ ತೊರೆದು, 10 ನಿಮಿಷಗಳಲ್ಲಿ ದಿನಸಿ ವಿತರಣೆಯೊಂದಿಗೆ ಝೆಪ್ಟೋ ಆರಂಭಿಸಿದ ಆದಿತ್ ಮತ್ತು ಕೈವಲ್ಯ ವೋಹ್ರಾ, ಈಗ 9,000-10,000 ಕೋಟಿ ರೂ. IPOಗೆ ಮುಂದಾಗಿದ್ದು, ಭಾರತೀಯ ಸ್ಟಾರ್ಟ್‌ಅಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
ಝೆಪ್ಟೋ ಸಹ-ಸ್ಥಾಪಕ ಆದಿತ್ ಪಲಿಚಾImage Credit source: Moneycontrol
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2026 | 1:03 PM

Share

ನವದೆಹಲಿ, ಜೂನ್ 10: ಕ್ವಿಕ್ ಕಾಮರ್ಸ್ ಕ್ಷೇತ್ರದ ದೈತ್ಯನೆನಿರುವ ಝೆಪ್ಟೋ (Zepto) ಸಂಸ್ಥೆಯ ಸಹ-ಸ್ಥಾಪಕ ಆದಿತ್ ಪಲಿಚಾ (Aadit Palicha) ಅವರು ಷೇರುಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ (Publicly Listed) ಕಂಪನಿಯ ಅತಿ ಕಿರಿಯ ಎಂಡಿ (MD) ಮತ್ತು ಸಿಇಒ (CEO) ಎನಿಸಲಿದ್ದಾರೆ. 23 ವರ್ಷದ ಆದಿತ್ ಪಲಿಚಾ ಅವರು ಪ್ರಸಕ್ತ ಝೆಪ್ಟೋದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆ ಐಪಿಒಗೆ ಮುಂದಾಗಿದ್ದು, ಅದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಲಿಸ್ಟ್ ಆದಲ್ಲಿ ಆದಿತ್ ಪಲಿಚಾ ಅವರು ಲಿಸ್ಟೆಡ್ ಕಂಪನಿಯೊಂದರ ಅತ್ಯಂತ ಕಿರಿಯ ಸಿಇಒ ಮತ್ತು ಎಂಡಿ ಎನ್ನುವ ದಾಖಲೆಗೆ ಬಾಜನರಾಗಲಿದ್ದಾರೆ.

ಕೇವಲ ಐದು ವರ್ಷಗಳ ಹಿಂದೆ ಅಮೆರಿಕದ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ದಿನಸಿ ಸಾಮಾನುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸುವ ಒಂದು ಐಡಿಯಾದ ಪ್ರಯೋಗದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಕಾಲೇಜು ತೊರೆದು ಕಿರಾನಾಕಾರ್ಟ್ ಎನ್ನುವ ಕಂಪನಿ ಆರಂಭಿಸಿದರು. 2021ರಲ್ಲಿ ಝೆಪ್ಟೋ ಶುರುವಾಯಿತು. 10 ನಿಮಿಷದಲ್ಲಿ ಜನರ ಮನೆಗಳಿಗೆ ದಿನಸಿ ತಲುಪಿಸುವ ಇವರ ಬ್ಯುಸಿನೆಸ್ ಐಡಿಯಾ ಆಗ ಬಹಳ ಜನರಿಗೆ ಅಚ್ಚರಿ ತಂದಿತ್ತು. ಆದರೆ, ಸಾವಿರಾರು ಕೋಟಿ ರೂ ಬ್ಯುಸಿನೆಸ್ ಇರುವ ಕ್ವಿಕ್ ಕಾಮರ್ಸ್ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆಗೆ ಆದಿತ್ ಪಲಚಾ ಹಾಗೂ ಅವರ ಬಾಲ್ಯಮಿತ್ರ ಮತ್ತು ಸಿಟಿಒ ಆಗಿರುವ ಕೈವಲ್ಯ ವೋಹ್ರಾ ನಾಂದಿ ಹಾಡಿದ್ದರು.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ತೊರೆದಿದ್ದ ಆದಿತ್ ಪಲಿಚಾ ಮತ್ತು ಅವರ ಬಾಲ್ಯದ ಸ್ನೇಹಿತ ಕೈವಲ್ಯ ವೋಹ್ರಾ ಅವರು, ಕೇವಲ 5 ವರ್ಷಗಳ ಅಂತರದಲ್ಲಿ ತಮ್ಮ ಸ್ಟಾರ್ಟ್‌ಅಪ್ ಅನ್ನು ದಲಾಲ್ ಸ್ಟ್ರೀಟ್‌ಗೆ (ಷೇರು ಮಾರುಕಟ್ಟೆ) ಕೊಂಡೊಯ್ಯುವ ಹಂತಕ್ಕೆ ತಲುಪಿಸಿದ್ದಾರೆ.

ಆದಿತ್ ಪಲಿಚಾ ಅವರದ್ದು ವಿಶ್ವದಾಖಲೆಯಾ?

ಕೆನಡಾದ ಎಂಬಾರ್ಕ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದಾಗ ಅದರ ಸಿಇಒ ಹಾಗೂ ಸಂಸ್ಥಾಪಕ ಅಲೆಕ್ಸ್ ರೋಡ್ರಿಗೆಸ್ ಅವರ ವಯಸ್ಸು 26 ಮಾತ್ರ. 19ನೇ ವಯಸ್ಸಿನಲ್ಲಿ ಫೇಸ್​ಬುಕ್ ಸ್ಥಾಪಿಸಿದ ಮಾರ್ಕ್ ಜುಕರ್​ಬರ್ಗ್ ಅವರು 28ನೇ ವಯಸ್ಸಿನಲ್ಲಿದ್ದಾಗ ಅವರ ಕಂಪನಿಯು ಪಬ್ಲಿಕ್ ಲಿಸ್ಟೆಡ್ ಕಂಪನಿ ಎನಿಸಿತು. ಆದರೆ, ಝೆಪ್ಟೋ ಸಿಇಒ ಆದಿತ್ ಪಲಿಚಾ ಅವರು ಅವರೆಲ್ಲರನ್ನೂ ಮೀರಿಸುವ ಕಿರಿಯ ಎನಿಸಿದ್ದಾರೆ.

ಝೆಪ್ಟೋ ಐಪಿಒ (IPO) ವಿವರಗಳು

ಝೆಪ್ಟೋ ತನ್ನ ಐಪಿಒಗಾಗಿ ಸೆಬಿಗೆ (SEBI) ಕರಡು ಪತ್ರಗಳನ್ನು ಸಲ್ಲಿಸಿದೆ. ಈ ಐಪಿಒ ಗಾತ್ರವು ಸುಮಾರು 9,000 ಕೋಟಿ ರೂ. ನಿಂದ 10,000 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ 8,010 ಕೋಟಿ ರೂ.ಗಳ ಹೊಸ ಷೇರುಗಳ ವಿತರಣೆ ಸೇರಿದೆ.

ಝೆಪ್ಟೋ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವ ಮೂಲಕ ಆರಂಭವಾಗಿ, ಇಂದು ಭಾರತದ ಅತಿದೊಡ್ಡ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಬೆಳೆದಿದೆ. ಪ್ರಸ್ತುತ ಕಂಪನಿಯು 66 ನಗರಗಳಲ್ಲಿ 1,139 ಡಾರ್ಕ್ ಸ್ಟೋರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

FY26 ರಲ್ಲಿ ಕಂಪನಿಯು 22,624 ಕೋಟಿ ರೂಪಾಯಿಗಳ ಕಾರ್ಯಾಚರಣೆಯ ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಂಪನಿಯು ಇನ್ನೂ ನಷ್ಟದಲ್ಲಿದ್ದು, FY26 ರಲ್ಲಿ 5,905 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.

ಐಪಿಒ ಪ್ರಕ್ರಿಯೆಯಲ್ಲಿ ಆದಿತ್ ಪಲಿಚಾ ಅಥವಾ ಕೈವಲ್ಯ ವೋಹ್ರಾ ತಮ್ಮ ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ. ಈ ಐಪಿಒ ಸಂಪೂರ್ಣವಾಗಿ ಹೂಡಿಕೆದಾರರ ಒಡೆತನದ ಷೇರುಗಳ ಮಾರಾಟವನ್ನು ಒಳಗೊಂಡಿದೆ.

ಈ ಸಾಧನೆಯು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಅತಿ ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ಮೊದಲ ನಿದರ್ಶನಗಳಲ್ಲಿ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ಮೋದಿ
ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ಮೋದಿ
ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಹರಿಪ್ರಸಾದ್ ಭೇಟಿ
ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಹರಿಪ್ರಸಾದ್ ಭೇಟಿ
ಪ್ರಧಾನಿ ಮೋದಿ ಒಳಿತಿಗಾಗಿ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಶೋಕ್​
ಪ್ರಧಾನಿ ಮೋದಿ ಒಳಿತಿಗಾಗಿ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಶೋಕ್​
ಮೋದಿ ಪ್ರಧಾನಿಯಾಗಿ 12 ವರ್ಷ: ಬೆಂಗಳೂರಿನಲ್ಲಿ ಸೋಮಣ್ಣ ವಿಶೇಷ ಪೂಜೆ
ಮೋದಿ ಪ್ರಧಾನಿಯಾಗಿ 12 ವರ್ಷ: ಬೆಂಗಳೂರಿನಲ್ಲಿ ಸೋಮಣ್ಣ ವಿಶೇಷ ಪೂಜೆ
ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆಗೆತ್ನಿಸಿದ ಖದೀಮರು! ಆಮೇಲಾಗಿದ್ದೇ ಬೇರೆ
ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆಗೆತ್ನಿಸಿದ ಖದೀಮರು! ಆಮೇಲಾಗಿದ್ದೇ ಬೇರೆ
ಒಂದೇ ಓವರ್​ನಲ್ಲಿ 3 ವಿಕೆಟ್​: ಟೀಮ್ ಇಂಡಿಯಾಗೆ ರೋಚಕ ಜಯ
ಒಂದೇ ಓವರ್​ನಲ್ಲಿ 3 ವಿಕೆಟ್​: ಟೀಮ್ ಇಂಡಿಯಾಗೆ ರೋಚಕ ಜಯ
ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಗೊತ್ತಾ?
ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಗೊತ್ತಾ?
ಇಂದು ಈ ರಾಶಿಯವರು ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ
ಇಂದು ಈ ರಾಶಿಯವರು ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ
'ನಮ್ಮ ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ' ಎಂದು ಜನಾಕ್ರೋಶ!
'ನಮ್ಮ ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ' ಎಂದು ಜನಾಕ್ರೋಶ!
‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್
‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್