AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ

ಹೀನಾ ಮೆಹಬೂಬ್ (19) ಹಾಗೂ ಕೊಕಟನೂರ ಗ್ರಾಮದ ತೌಫಿಕ್ ಶೌಕತ್ (24) ಜೋಡಿಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ವಿವಾಹದ ಬಳಿಕ ಇಬ್ಬರೂ ಬಾಡಿಗೆ ಕಾರಿನಲ್ಲಿ ದರ್ಗಾಕ್ಕೆ ಹೋಗಿದ್ದರು. ಆಗ ವಧುವಿಗೆ ಚಾಲಕನ ಮೇಲೆಯೇ ಆಯ್ತು ಲವ್! ಆಮೇಲೆ ನಡೆದಿದ್ದು ಭಯಾನಕ, ಏನದು? ಇಲ್ಲಿದೆ ವಿವರ

ಬೆಳಗಾವಿ: ಪತಿಯ ಬಿಟ್ಟು ಓಡಿಹೋಗಿದ್ದ ಮಹಿಳೆ, ಆಕೆಯ ಪ್ರಿಯಕರನ ಬರ್ಬರ ಕೊಲೆ
ಕೊಲೆ ಆರೋಪಿ ತೌಫಿಕ್ ಶೌಕತ್ ಮತ್ತು ಹೀನಾ ಮೆಹಬೂಬ್
Sahadev Mane
| Edited By: |

Updated on: Jan 31, 2024 | 9:20 AM

Share

ಬೆಳಗಾವಿ, ಜನವರಿ 31: ಆ ಜೋಡಿಗೆ ಆಗಷ್ಟೇ ಮದುವೆಯಾಗಿತ್ತು. ವಿವಾಹದ (Marriage) ಸಂಭ್ರಮದಲ್ಲಿ ಇಬ್ಬರೂ ದರ್ಗಾಕ್ಕೆ ಹೋಗಲು ತೀರ್ಮಾನಿಸಿದ್ದಾರೆ. ಬಾಡಿಗೆ ಕಾರೊಂದನ್ನು ಗೊತ್ತುಮಾಡಿಕೊಂಡು ದರ್ಗಾಕ್ಕೆ ಹೋಗಿದ್ದಾರೆ. ಈ ಸಣ್ಣ ಪ್ರಯಾಣದ ಅವಧಿಯಲ್ಲೇ ವಧುವಿಗೆ ಕಾರಿನ ಚಾಲಕನ ಜತೆ ಪ್ರೇಮಾಂಕುರವಾಗಿದೆ. ಕೆಲವೇ ದಿನಗಳಲ್ಲಿ ಆತನ ಜತೆ ಆಕೆ ಓಡಿಹೋಗಿದ್ದಾಳೆ. ಆದರೆ, ನಂತರ ನಡೆದಿದ್ದು ಮಾತ್ರ ಭಯಾನಕ ಘಟನೆ. ಕಾರು ಚಾಲಕನ ಜತೆಗಿನ ಪ್ರೇಮ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಅಂದಹಾಗೆ ಈ ಘಟನೆ ನಡೆದಿದ್ದು, ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಕೊಕಟನೂರ ಗ್ರಾಮದಲ್ಲಿ.

ಹೀನಾ ಮೆಹಬೂಬ್ (19) ಹಾಗೂ ಕೊಕಟನೂರ ಗ್ರಾಮದ ತೌಫಿಕ್ ಶೌಕತ್ (24) ಜೋಡಿಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ವಿವಾಹದ ಬಳಿಕ ಇಬ್ಬರೂ ಬಾಡಿಗೆ ಕಾರಿನಲ್ಲಿ ದರ್ಗಾಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕ ಯಾಸಿನ್​ ಅದಮ್ ​(21) ಮೇಲೆ ಹೀನಾಗೆ ಪ್ರೇಮಾಂಕುರವಾಗಿದೆ. ಇದಾದ ಒಂದೇ ತಿಂಗಳಲ್ಲಿ ಗಂಡನ ಬಿಟ್ಟು ಪ್ರಿಯಕರ ಯಾಸಿನ್​ ಜೊತೆ ಹೀನಾ ಓಡಿಹೋಗಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ತೌಫಿಕ್ ಶೌಕತ್ ಹತ್ಯೆಗೆ ಸಂಚು ಹೂಡಿದ್ದ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಯಾಸಿನ್, ಹೀನಾ ಜೋಡಿ ಮೇಲೆ ಮಂಗಳವಾರ ಸಂಜೆ ತೌಫಿಕ್​ ದಾಳಿ ನಡೆಸಿದ್ದ. ಲಾಂಗ್​​ನಿಂದ ಹಲ್ಲೆ ನಡೆಸಿ ಪತ್ನಿ ಹೀನಾಳನ್ನು ಹತ್ಯೆ ಮಾಡಿ, ನಂತರ ಆಕೆಯ ಪ್ರಿಯಕರ ಯಾಸಿನ್​ನನ್ನೂ ಕೊಲೆ ಮಾಡಿದ್ದಾನೆ. ಇದೇ ವೇಳೆ, ಜಗಳ ಬಿಡಿಸಲು ಬಂದ ಅತ್ತೆ, ಮಾವನ ಮೇಲೂ ತೌಫಿಕ್ ಲಾಂಗ್​ನಿಂದ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳುಗಳಿಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಗೆಳತಿಯ ಆಕ್ಷೇಪಾರ್ಹ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ ಗೆಳೆಯ

ಚಿತ್ರದುರ್ಗ: ಜಾಗದ ವಿಚಾರಕ್ಕೆ ಗುಂಪು ಘರ್ಷಣೆ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ಗುಂಪು ಘರ್ಷಣೆ ಸಂಭವಿಸಿದೆ. ಕಟ್ಟಿಗೆ, ದೊಣ್ಣೆಗಳನ್ನು ಹಿಡಿದು ಗಲಾಟೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಒಂದು ಗುಂಪು ಕುರಿ ಶೆಡ್ ಕಿತ್ತು ಹಾಕಿ ದೌರ್ಜನ್ಯಕ್ಕೆ ಯತ್ನಿಸಿದೆ. ಗಲಾಟೆಯಲ್ಲಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಹೊಳಲ್ಕೆರೆ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ