AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ.ಸಾಲ ಪಡೆದು ವಂಚಿಸಿದ ಉದ್ಯಮಿಗಳಿಗೆ ಬಲೆ ಬೀಸಿದ ಸಿಬಿಐ; ಎಫ್​ಐಆರ್ ದಾಖಲು

ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ, ಬೇಲೂರಿನಲ್ಲಿ ಒಟ್ಟು 65 ಎಕರೆ ವಿಸ್ತೀರ್ಣದಲ್ಲಿ ಔಷಧೀಯ ಸಸ್ಯ ಬೆಳೆದು ನಮ್ಮ ಕಂಪನಿಯಿಂದಲೇ ವಿದೇಶಕ್ಕೆ ರಫ್ತು ಮಾಡುತ್ತೇವೆ. ಹಾಗಾಗಿ ಸಾಲ ಬೇಕು ಎಂದು ಹೇಳಿ 2009ರಲ್ಲಿ ಬ್ಯಾಂಕ್​ನ ಕೃಷಿಸಾಲ ವಿಭಾಗದ ಅಧಿಕಾರಿಯನ್ನು ಸಂಪರ್ಕ ಮಾಡಿದ್ದರು.

ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ.ಸಾಲ ಪಡೆದು ವಂಚಿಸಿದ ಉದ್ಯಮಿಗಳಿಗೆ ಬಲೆ ಬೀಸಿದ ಸಿಬಿಐ; ಎಫ್​ಐಆರ್ ದಾಖಲು
ಸಿಬಿಐ ಕಚೇರಿ
Lakshmi Hegde
|

Updated on: Dec 05, 2020 | 6:44 PM

Share

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಐಡಿಬಿಐ ಬ್ಯಾಂಕ್​ನಿಂದ 65.33ಕೋಟಿ ರೂ. ಸಾಲ ಪಡೆದು ವಂಚಿಸಿದ ಉದ್ಯಮಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

ಗ್ರೀನ್​ ಆರ್ಗ್ಯಾನಿಕ್ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕರಾದ ರಮೇಶ್​ ಬಿ.ಗೌಡ, ಜೆ.ಸಿ ರಮ್ಯಾ, ಚಂದ್ರಶೇಖರ್​ ಬಾಲಸುಬ್ರಹ್ಮಣ್ಯ ವಿರುದ್ಧ ಸಂಚು, ನಂಬಿಕೆ ದ್ರೋಹ, ವಂಚನೆ ಪ್ರಕರಣದಡಿ ಎಫ್​ಐಆರ್ ದಾಖಲಾಗಿದೆ. ಇವರಲ್ಲಿ ರಮೇಶ್ ಮತ್ತು ರಮ್ಯಾ ದಂಪತಿ. ಈ ಎಲ್ಲರ ವಿರುದ್ಧ ಐಡಿಬಿಐ ಬ್ಯಾಂಕ್​ನ ಉಪಪ್ರಬಂಧಕ ಜಿ.ಬಸಂತ್ ಚಕ್ರವರ್ತಿ ದೂರು ನೀಡಿದ್ದರು.

ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ, ಬೇಲೂರಿನಲ್ಲಿ ಒಟ್ಟು 65 ಎಕರೆ ವಿಸ್ತೀರ್ಣದಲ್ಲಿ ಔಷಧೀಯ ಸಸ್ಯ ಬೆಳೆದು ನಮ್ಮ ಕಂಪನಿಯಿಂದಲೇ ವಿದೇಶಕ್ಕೆ ರಫ್ತು ಮಾಡುತ್ತೇವೆ. ಹಾಗಾಗಿ ಸಾಲ ಬೇಕು ಎಂದು ಹೇಳಿ 2009ರಲ್ಲಿ ಬ್ಯಾಂಕ್​ನ ಕೃಷಿಸಾಲ ವಿಭಾಗದ ಅಧಿಕಾರಿಯನ್ನು ಸಂಪರ್ಕ ಮಾಡಿದ್ದರು. ಕೆನರಾ ಬ್ಯಾಂಕ್​ನಲ್ಲಿ 41.07 ಕೋಟಿ ರೂ. ಸಾಲ ವರ್ಗಾಯಿಸಿಕೊಂಡು, ಹೆಚ್ಚುವರಿ ಸಾಲ ನೀಡುವಂತೆ ರಮೇಶ್​ ಮತ್ತು ಟೀಂ ಮನವಿ ಮಾಡಿತ್ತು. 2015ರಲ್ಲಿ ವಿವಿಧ ಹಂತದಲ್ಲಿ ಐಡಿಬಿಐ ಬ್ಯಾಂಕ್​ನಿಂದ 65.33 ಕೋಟಿ ರೂ.ಸಾಲ ಪಡೆದಿದ್ದರು. ಆದರೆ ಹಣ ಪಾವತಿಸಿರಲಿಲ್ಲ..125.63 ಕೋಟಿ ರೂ. ಬಾಕಿ ನೀಡದ ಹಿನ್ನೆಲೆಯಲ್ಲಿ ತನಿಖೆಯೂ ಪ್ರಾರಂಭವಾಗಿತ್ತು.

ಬೇರೆ ಬೇರೆ ಕಂಪನಿಗಳ ಮೇಲಿದ್ದ ಸಾಲವನ್ನು ಜಿಒಐಪಿಎಲ್ ಸಾಲ ಎಂದು ಸುಳ್ಳು ದಾಖಲೆ‌ ಸೃಷ್ಟಿಸಿ ಐಡಿಬಿಐ ಬ್ಯಾಂಕ್​​ಗೆ ಹಣ ರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಬ್ಯಾಂಕ್‌ ನೀಡಿದ ಸಾಲದ ಪೈಕಿ 15 ಕೋಟಿ ರೂ.ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮತ್ತೆ ಇದೇ ಕಂಪನಿಯ ಹೆಸರಿನಲ್ಲಿ ಕೆನರಾಬ್ಯಾಂಕ್ ಸೇರಿ, ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಪಡೆದು, ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.

ಕೇಂದ್ರ ಸಚಿವರ ಜೊತೆ ರೈತರ 5ನೇ ಸುತ್ತಿನ ಮಾತುಕತೆ ಆರಂಭ: ಬಸ್​ನಲ್ಲೇ ಸಭೆಗೆ ಆಗಮಿಸಿದ ಕೃಷಿಕರು

ಮಗಳ ಮೇಲೆ ಅಪ್ಪ-ಅಣ್ಣನಿಂದ ತೀವ್ರ ಹಲ್ಲೆ.. ಯುವತಿಯ ಕೈ ಬೆರಳು ಕಟ್!

Follow Us
Lakshmi Hegde
Lakshmi Hegde
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ