AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ; ಸ್ಟಾರ್ ಹೋಟೆಲ್ ಹೆಸರು ಬಳಸಿ ಹಣ ಪೀಕಿದ ಖದೀಮರು

ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಬೇಕು ಎಂದು ಹೇಮ ಅವರು ಸ್ಟಾರ್ ಹೋಟೆಲ್ JW ಮ್ಯಾರಿಯೇಟ್​ಗೆ ಕರೆ ಮಾಡಿ ಪಾರ್ಟಿ ಟಿಕೆಟ್ ಬೇಕೆಂದಿದ್ದರು. ಕರೆ ಮಾಡಿದಾಗ ಹೇಮಾ ಅವರ ಸಂಪರ್ಗಕ್ಕೆ ಬಂದ ಸುರೇಂದರ್ ಕುಮಾರ್ ಎಂಬಾತ ಬರೋಬ್ಬರಿ‌ 19,500 ರೂ, ಗೂಗಲ್ ಪೇ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ.

ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ; ಸ್ಟಾರ್ ಹೋಟೆಲ್ ಹೆಸರು ಬಳಸಿ ಹಣ ಪೀಕಿದ ಖದೀಮರು
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ಆಯೇಷಾ ಬಾನು

Updated on: Jan 04, 2024 | 8:29 AM

ಬೆಂಗಳೂರು, ಜ.04: ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ (Cheating) ನಡೆದಿದೆ. ಪ್ರತಿಷ್ಠಿತ ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ ಹೆಸರಲ್ಲಿ ಕಿಡಿಗೇಡಿಗಳು ಮಹಿಳೆಗೆ ವಂಚಿಸಿದ್ದಾರೆ. ಹೊಸ ವರ್ಷಕ್ಕೆ (New Year Party) ಫುಲ್ ಪಾರ್ಟಿ ಮಾಡೋಣ ಎಂದು ಹೇಮ ಮಾಲಿನಿ ಎಂಬ ಮಹಿಳೆ ಪಾರ್ಟಿ ಟಿಕೆಟ್​ಗಾಗಿ ಹೋಟೆಲನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಸುರೇಂದರ್ ಕುಮಾರ್ ಎಂಬಾತ ಸಂಪರ್ಕಕ್ಕೆ ಬಂದಿದ್ದು ಟಿಕೆಟ್ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದಾನೆ.

ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಬೇಕು ಎಂದು ಹೇಮ ಅವರು ಸ್ಟಾರ್ ಹೋಟೆಲ್ JW ಮ್ಯಾರಿಯೇಟ್​ಗೆ ಕರೆ ಮಾಡಿ ಪಾರ್ಟಿ ಟಿಕೆಟ್ ಬೇಕೆಂದಿದ್ದರು. ಕರೆ ಮಾಡಿದಾಗ ಹೇಮಾ ಅವರ ಸಂಪರ್ಗಕ್ಕೆ ಬಂದ ಸುರೇಂದರ್ ಕುಮಾರ್ ಎಂಬಾತ ಒಂದು ಟಿಕೆಟ್​ಗೆ ಬರೋಬ್ಬರಿ‌ 19,500 ರೂ, ಇದೆ. ಈಗಲೇ ಪೇ ಮಾಡಿ ಎಂದಿದ್ದ. ಇದನ್ನು ಒಪ್ಪಿದ ಹೇಮ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚಿಸಿದ್ದ. ಸರಿ ಎಂದು ಹೇಮ ಅವರು ಹೋಟೆಲ್ ಬಳಿ ಹೋಗಿ ಮ್ಯಾನೇಜರ್ ಹೆಸರು ಹೇಳಿದಾಗ ಆ ಹೆಸರಿನ ಸಿಬ್ಬಂದಿಯೇ ಇಲ್ಲ ಎನ್ನುವುದು ಪತ್ತೆಯಾಗಿದೆ. ನಂತರ ವಂಚನೆಯಾಗಿರುವುದು ಪತ್ತೆಯಾಗಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಗೂಸಾ

ದುರ್ವರ್ತನೆ ತೋರಿದ ಯುವಕನಿಗೆ ಯುವತಿಯೊಬ್ಬಳು ಕಪಾಳಮೋಕ್ಷ ಮಾಡಿದ್ದಾಳೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ನೇಹಿತರ ಜೊತೆಗಿದ್ದ ಯುವತಿ ಬಳಿ ಬಂದ ಯುವಕ ಏಕಾಏಕಿ ಅಸಭ್ಯವಾಗಿ ಮಾತನಾಡಿದ್ದಾನೆ. ಇದ್ರಿಂದ ಸಿಟ್ಟಾದ ಯುವತಿ, ಪೊಲೀಸರ ಎದುರೇ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ತಕ್ಷಣವೇ ಯುವತಿ ಸ್ನೇಹಿತರು ಪುಂಡ ಯೋಗೇಶ್​ಗೆ ಗೂಸಾ ನೀಡಿದ್ರು. ಬಳಿಕ ಅತ್ತಿಬೆಲೆ ಠಾಣೆ ಪೊಲೀಸರು ಪುಂಡನನ್ನು ವಶಕ್ಕೆ ಪಡೆದು ಕರೆದೊಯ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ಪೊಲೀಸ್​ ವಾಹನದಿಂದ ಜಿಗಿದ ಆರೋಪಿ, ಗಂಭೀರ ಗಾಯ, ಚಿಕಿತ್ಸೆ ಫಲಕಾರಿಯಾಗದೆ ಸಾವು

2023 ವರ್ಷದಲ್ಲಿ 207 ಕೊಲೆ ಪ್ರಕರಣಗಳು

2023ರ ಅಪರಾಧ ಕೃತ್ಯಗಳ ಅಂಕಿ ಅಂಶಗಳನ್ನ ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ರು. 2022ಕ್ಕೆ ಹೋಲಿಸಿದ್ರೆ 2023ರಲ್ಲಿ ಹೆಚ್ಚು ಕೊಲೆಗಳು ವರದಿಯಾಗಿವೆ. 2022ರಲ್ಲಿ 156 ಕೊಲೆಗಳಾಗಿದ್ರೆ, 2023ರಲ್ಲಿ 207 ಕೊಲೆಗಳಾಗಿವೆ. ಇದ್ರಲ್ಲಿ 202 ಪ್ರಕರಣ ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ರು. ಇನ್ನೂ ಕ್ಷುಲ್ಲಕ ವಿಚಾರಕ್ಕೆ 49ಮತ್ತು ಅಕ್ರಮ ಸಂಬಂಧಕ್ಕೆ 32 ಕೊಲೆ ಕೇಸ್ ದಾಖಲಾಗಿವೆ. ಅಲ್ದೇ, 2023ರಲ್ಲಿ ಬೆಂಗಳೂರಿನಲ್ಲಿ 7 ರೌಡಿಶೀಟರ್‌ಗಳ ಕೊಲೆಗಳು ನಡೆದಿವೆ ಎಂದು ಮಾಹಿತಿ ನೀಡಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?