AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಮದುವೆಗಾಗಿ.. 2ನೇ ಪತ್ನಿ ಮತ್ತು 2 ಮಕ್ಕಳ ಸಾಯಿಸಿದ್ದವನಿಗೆ ನೇಣು

ಗದಗ: ಮೂರನೆಯ ಮದುವೆ ಮಾಡಿಕೊಳ್ಳಲು 2ನೇ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದ ಪಾಪಿ ಪತಿರಾಯನಿಗೆ ಗಲ್ಲು ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ಐತಿಹಾಸಿಕ ಜಡ್ಜಮೆಂಟ್ ನೀಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಅರುಣಕುಮಾರ ಲಮಾಣಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಮಹತ್ದದ ತೀರ್ಪು ನೀಡಿದ್ದಾರೆ. 2016ರ ಮಾರ್ಚ್ 29ರಂದು ಗದಗ ಜಿಲ್ಲೆಯ ಹಮ್ಮಗಿ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿತ್ತು. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 […]

3ನೇ ಮದುವೆಗಾಗಿ.. 2ನೇ ಪತ್ನಿ ಮತ್ತು 2 ಮಕ್ಕಳ ಸಾಯಿಸಿದ್ದವನಿಗೆ ನೇಣು
ಸಾಧು ಶ್ರೀನಾಥ್​
|

Updated on:Dec 04, 2019 | 6:52 PM

Share

ಗದಗ: ಮೂರನೆಯ ಮದುವೆ ಮಾಡಿಕೊಳ್ಳಲು 2ನೇ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದ ಪಾಪಿ ಪತಿರಾಯನಿಗೆ ಗಲ್ಲು ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ಐತಿಹಾಸಿಕ ಜಡ್ಜಮೆಂಟ್ ನೀಡಿದೆ.

ಪ್ರಕರಣದಲ್ಲಿ ಆರೋಪಿಯಾಗಿದ್ದ ಅರುಣಕುಮಾರ ಲಮಾಣಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಮಹತ್ದದ ತೀರ್ಪು ನೀಡಿದ್ದಾರೆ. 2016ರ ಮಾರ್ಚ್ 29ರಂದು ಗದಗ ಜಿಲ್ಲೆಯ ಹಮ್ಮಗಿ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿತ್ತು. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 3 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿತ್ತು. ಮೊದಲ ಪತ್ನಿ ಮಂಜುಳಾ, ಅರುಣ್​ನ ಅಣ್ಣ ಸಾಕ್ಷ್ಯ ಹೇಳಿದ್ದರು.

Published On - 6:12 pm, Wed, 4 December 19