AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಲ್ಲದ ನಿನಗೆ ಯಾಕೆ ಆಸ್ತಿಯಲ್ಲಿ ಪಾಲು? -ಪತಿ ತೊರೆದ ಮಹಿಳೆಗೆ ತಮ್ಮನಿಂದ ಹಲ್ಲೆ

ಬೆಂಗಳೂರು: ಪತಿಯನ್ನು ತೊರೆದು ತವರು ಮನೆ ಸೇರಿದ್ದ ಅಕ್ಕನಿಗೆ ಆಕೆಯ ತಮ್ಮನೇ ಕಿರುಕುಳ ನೀಡಿರುವ ಘಟನೆ ನಗರದ ಬೆಟ್ಟಹಳ್ಳಿಯಲ್ಲಿ ನಡೆದಿದೆ. ತಮ್ಮನಿಂದಲೇ ಸಂತ್ರಸ್ತೆ ಗಂಗರುದ್ರಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಪತಿಯನ್ನ ತೊರೆದು ತವರು ಸೇರಿದ್ದ ಗಂಗರುದ್ರಮ್ಮಳಿಗೆ ಆಕೆಯ ಸಹೋದರ ಅಶೋಕ್ ಕುಮಾರ್ ದಿನನಿತ್ಯ ಕಿರುಕುಳ ಕೊಡುತ್ತಿದ್ದನಂತೆ. ಮಕ್ಕಳಿಲ್ಲದ ನಿನಗೇಕೆ ಆಸ್ತಿಯಲ್ಲಿ ಪಾಲು ಎಂದು ಕಿರುಕುಳದ ಜೊತೆ ಹಲ್ಲೆ ಸಹ ನಡೆಸಿದ್ದನಂತೆ. ತಮ್ಮನಿಂದ ಹಲ್ಲೆಗೊಳಗಾದ ಗಂಗರುದ್ರಮ್ಮನನ್ನು ಸದ್ಯ ಮಾದನಾಯಕನಹಳ್ಳಿ ಪೊಲೀಸರು ರಕ್ಷಿಸಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ […]

ಮಕ್ಕಳಿಲ್ಲದ ನಿನಗೆ ಯಾಕೆ ಆಸ್ತಿಯಲ್ಲಿ ಪಾಲು? -ಪತಿ ತೊರೆದ ಮಹಿಳೆಗೆ ತಮ್ಮನಿಂದ ಹಲ್ಲೆ
KUSHAL V
|

Updated on: Nov 07, 2020 | 2:24 PM

Share

ಬೆಂಗಳೂರು: ಪತಿಯನ್ನು ತೊರೆದು ತವರು ಮನೆ ಸೇರಿದ್ದ ಅಕ್ಕನಿಗೆ ಆಕೆಯ ತಮ್ಮನೇ ಕಿರುಕುಳ ನೀಡಿರುವ ಘಟನೆ ನಗರದ ಬೆಟ್ಟಹಳ್ಳಿಯಲ್ಲಿ ನಡೆದಿದೆ. ತಮ್ಮನಿಂದಲೇ ಸಂತ್ರಸ್ತೆ ಗಂಗರುದ್ರಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಪತಿಯನ್ನ ತೊರೆದು ತವರು ಸೇರಿದ್ದ ಗಂಗರುದ್ರಮ್ಮಳಿಗೆ ಆಕೆಯ ಸಹೋದರ ಅಶೋಕ್ ಕುಮಾರ್ ದಿನನಿತ್ಯ ಕಿರುಕುಳ ಕೊಡುತ್ತಿದ್ದನಂತೆ. ಮಕ್ಕಳಿಲ್ಲದ ನಿನಗೇಕೆ ಆಸ್ತಿಯಲ್ಲಿ ಪಾಲು ಎಂದು ಕಿರುಕುಳದ ಜೊತೆ ಹಲ್ಲೆ ಸಹ ನಡೆಸಿದ್ದನಂತೆ. ತಮ್ಮನಿಂದ ಹಲ್ಲೆಗೊಳಗಾದ ಗಂಗರುದ್ರಮ್ಮನನ್ನು ಸದ್ಯ ಮಾದನಾಯಕನಹಳ್ಳಿ ಪೊಲೀಸರು ರಕ್ಷಿಸಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ.

ಅಂದ ಹಾಗೆ, ಅಶೋಕ್ ಕುಮಾರ್ ವಿರುದ್ಧ ಗಂಗರುದ್ರಮ್ಮ ಈ ಹಿಂದೆ ಠಾಣೆಗೆ ದೂರು ಸಹ ದಾಖಲಿಸಿದ್ದರು. ಆದರೆ, ಹಲವು ಬಾರಿ ದೂರು ನೀಡಿದ್ರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಗಾಯಾಳು ಗಂಗರುದ್ರಮ್ಮ ಆರೋಪಿಸಿದ್ದಾರೆ.