
ಅಸ್ಸಾಂನಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಅತ್ಯಧಿಕ ಮತದಾನವಾಗಿದೆ. ಮತ್ತೊಂದೆಡೆ, ಕೇರಳ-ಪುದುಚೇರಿಯಲ್ಲಿ ಶೇ 17 ಕ್ಕಿಂತ ಹೆಚ್ಚು ವೋಟಿಂಗ್ ಆಗಿದೆ.
ಬೆಳಿಗ್ಗೆ 9 ಗಂಟೆಯ ಹೊತ್ತಿಗೆ, ಕೇರಳದಲ್ಲಿ 16.23% ಮತ್ತು ಪುದುಚೇರಿಯಲ್ಲಿ 17.41% ಮತದಾನವಾಗಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 11.89ರಷ್ಟು ಮತದಾನವಾಗಿದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಬೆಳಗ್ಗೆಯೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಮತದಾನ ಚುರುಕು ಪಡೆದುಕೊಂಡಿದೆ.
ಈ ಅವಧಿಯಲ್ಲಿ ಸರ್ಕಾರ ಕೈಗೊಂಡ ಎಲ್ಲಾ ಅಭಿವೃದ್ಧಿ ಯೋಜನೆಗಳಿಂದಾಗಿ ಎಲ್ಡಿಎಫ್ಗೆ ಖಂಡಿತವಾಗಿಯೂ ಮೂರನೇ ಅವಕಾಶ ಸಿಗಲಿದೆ. ಉದಾಹರಣೆಗೆ ನೀವು ಪಟ್ಟಣಂತಿಟ್ಟವನ್ನೇ ನೋಡಿ, ಪಟ್ಟಣದಲ್ಲಿ ಎಂತಹ ಅದ್ಭುತ ಬದಲಾವಣೆಗಳು ಸಂಭವಿಸಿವೆ, ಕ್ರೀಡಾಂಗಣಗಳು, ನೋಡಬಹುದು, ಆಸ್ಪತ್ರೆಗಳು, ಹೊಸ ಕಚೇರಿಗಳುಮತ್ತು ಹೊಸ ರಸ್ತೆಗಳನ್ನು ನೋಡಬಹುದು. ಜನರು ಎಲ್ಡಿಎಫ್ಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
#WATCH | Pathanamthitta: Keralam Health Minister Veena George says, “LDF definitely will get the third chance because all the developmental projects the government has carried out during this time. Take the case of Pathanamthitta; if you look around, you can see what fantastic… https://t.co/pBZxrOgJRu pic.twitter.com/sKZFUDJ1qT
— ANI (@ANI) April 9, 2026
ಕೇರಳ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರು, ಮಾಲಿವುಡ್ ಪ್ರಮುಖ ನಟರು ಬೆಳಗ್ಗೆಯೇ ಮತದಾನ ಮಾಡಿದರು. ಮಾಲಿವುಡ್ ನಟ ಮೋಹನ್ ಲಾಲ್, ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಮತದಾನ ಮಾಡಿದರು.
ಪುದುಚೇರಿ ಚುನಾವಣೆ 2026: ಮತ ಚಲಾಯಿಸಲು ಪುದುಚೇರಿಯ ವಿಒಸಿ ಸರ್ಕಾರಿ ಶಾಲೆಗೆ ಆಗಮಿಸುವ ಮತದಾರರನ್ನು ರೋಬೋಟ್ ನೀಲಾ ಸ್ವಾಗತಿಸಿದ ವಿಡಿಯೋ ಇಲ್ಲಿದೆ ನೋಡಿ.
#WATCH | Puducherry Elections 2026 | A robot, Nila welcomes voters arriving at VOC Govt School to exercise their franchise. https://t.co/0nisPCPdhr pic.twitter.com/HMZoKuQJnf
— ANI (@ANI) April 9, 2026
ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪುತ್ರ ನವೀನ ಚರಂತಿಮಠ ಬೆಳಗ್ಗೆಯೇ ಮತದಾನ ಮಾಡಿದರು.
ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಜಾಲಿನಗರದ ಮತಗಟ್ಟೆ ಸಂಖ್ಯೆ 60,61,62,63 ಬಳಿ ನೂರಾರು ಜನ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.
ಕೇರಳದ 140, ಅಸ್ಸಾಂನ 126 ಹಾಗೂ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಮೂರೂ ರಾಜ್ಯಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಕೇಂದ್ರಗಳ ಬಳಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಸುಗಮ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಗಿದೆ.
ಕೇರಳಂ ಸಚಿವ ಮತ್ತು ನೇಮಮ್ನ ಎಲ್ಡಿಎಫ್ ಅಭ್ಯರ್ಥಿ ವಿ. ಶಿವನ್ಕುಟ್ಟಿ ಮತ್ತು ನಟ ಮೋಹನ್ ಲಾಲ್ ತಿರುವನಂತಪುರದ ಮುದವನ್ಮುಗಲ್ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
2026 ರ ಅಸ್ಸಾಂ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ, ಅಸ್ಸಾಂನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಬೇಕು. ರಾಜ್ಯದ ಯುವಕರು, ಮಹಿಳೆಯರು ಮತ್ತು ಮತದಾರರು ಉತ್ಸಾಹದಿಂದ ಭಾಗವಹಿಸಿ ಈ ಚುನಾವಣೆಯನ್ನು ಪ್ರಜಾಪ್ರಭುತ್ವ ಮತ್ತು ನಾಗರಿಕ ಕರ್ತವ್ಯದ ಹಬ್ಬವಾಗಿ ಪರಿವರ್ತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಂದು ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
২০২৬ চনৰ অসম বিধানসভা নিৰ্বাচনৰ ভোটদান প্ৰক্ৰিয়া আৰম্ভ হোৱাৰ পৰিপ্ৰেক্ষিতত, মই অসমৰ জনসাধাৰণক বিপুল সংখ্যাত নিজৰ ভোটাধিকাৰ সাব্যস্ত কৰিবলৈ আহ্বান জনাইছো। মই আশা কৰো যে ৰাজ্যখনৰ যুৱক-যুৱতী আৰু মহিলা ভোটাৰসকলে উৎসাহেৰে অংশগ্ৰহণ কৰি এই নিৰ্বাচনক গণতন্ত্ৰ আৰু নাগৰিক কৰ্তব্যৰ এক উৎসৱ…
— Narendra Modi (@narendramodi) April 9, 2026
ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಇಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮೂಲಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಅವರು ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ಪೋಸ್ಟ್ಗಳನ್ನು ಮಾಡಿದ್ದಾರೆ. ಅವರ ಒಂದು ಪೋಸ್ಟ್ನಲ್ಲಿ, ‘2026 ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೇರಳದ ಜನರಿಗೆ ನಾನು ಮನವಿ ಮಾಡುತ್ತೇನೆ. ದಾಖಲೆಯ ಭಾಗವಹಿಸುವಿಕೆಯು ಕೇರಳದ ಪ್ರಜಾಪ್ರಭುತ್ವ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ. ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರು ಮುಂದೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.
2026 ലെ നിയമസഭാ തെരഞ്ഞെടുപ്പിൽ വോട്ട് ചെയ്യുന്നതിൽ വൻ പങ്കാളിത്തം ഉറപ്പാക്കാൻ കേരളത്തിലെ ജനങ്ങളോട് ആഹ്വാനം ചെയ്യുന്നു. റെക്കോർഡ് പങ്കാളിത്തം കേരളത്തിന്റെ ജനാധിപത്യ മനോഭാവത്തിന് ഊർജ്ജം പകരും. പ്രത്യേകിച്ച് സംസ്ഥാനത്തിലെ യുവജനങ്ങളും സ്ത്രീകളും വോട്ട് രേഖപ്പെടുത്താൻ മുന്നോട്ട്…
— Narendra Modi (@narendramodi) April 9, 2026
ದಾವಣಗೆರೆಯ ಶಿರಮಗೊಂಡನಹಳ್ಳಿಯ 242 ರ ಮತಘಟ್ಟೆಯಲ್ಲಿ ವಿವಿ ಪ್ಯಾಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಏಳು ಗಂಟೆಗೆ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಮತದಾರರು ಕಾದು ನಿಂತಿದ್ದಾರೆ. ಸದ್ಯ, ಸಿಬ್ಬಂದಿ ವಿವಿ ಪ್ಯಾಟ್ ಸರಿಪಡಿಸುತ್ತಿದ್ದಾರೆ.
ಅಸ್ಸಾಂನ 126 ಸ್ಥಾನಗಳು, ಕೇರಳದ 140 ಸ್ಥಾನಗಳು ಮತ್ತು ಪುದುಚೇರಿಯ ಎಲ್ಲಾ 30 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದೆ. ಈ ಚುನಾವಣೆಯಲ್ಲಿ, ಅಸ್ಸಾಂನಲ್ಲಿ 722 ಅಭ್ಯರ್ಥಿಗಳು ಮತ್ತು ಕೇರಳದಲ್ಲಿ 883 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗೆ ಮತದಾನ ಶುರುವಾಗಿದೆ. ಬಾಗಲಕೋಟೆ ಕ್ಷೇತ್ರದ 322 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, ಸರದಿ ಸಾಲಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿದ್ದಾರೆ.
Davangere South, Bagalkot By Elections 2026 Voting Live News Updates:
ಬೆಂಗಳೂರು/ನವದೆಹಲಿ, ಏಪ್ರಿಲ್ 9: ಕರ್ನಾಟಕದ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ (Karnataka By-Election) ನಡೆಯುತ್ತಿದೆ. ಮತ್ತೊಂದೆಡೆ, ಕೇರಳದ 140 ಕ್ಷೇತ್ರ, ಅಸ್ಸಾಂನ 126 ಕ್ಷೇತ್ರ, ಪುದುಚೇರಿಯ 30 ಕ್ಷೇತ್ರಗಳಿಗೆ (Assembly Elections) ವೋಟಿಂಗ್ ನಡೆಯುತ್ತಿದೆ. ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದ್ದು, ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳಿವೆ. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನ ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಗಲಕೋಟೆ ಕಣದಲ್ಲಿ ಒಟ್ಟು 9 ಅಬ್ಯರ್ಥಿಗಳಿದ್ರೆ, ದಾವಣಗೆರೆ ದಕ್ಷಿಣದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ ಒಟ್ಟು 2ಲಕ್ಷದ 59 ಸಾವಿರದ 797 ಮತದಾರರಿದ್ರೆ, ದಾವಣಗೆರೆಯಲ್ಲಿ 2ಲಕ್ಷದ 31 ಸಾವಿರದ 72 ಮತದಾರರಿದ್ದಾರೆ. ಬಾಗಲೋಟೆಯಲ್ಲಿ 1ಲಕ್ಷದ 26ಸಾವಿರದ 999 ಪುರುಷ ಮತದಾರರಿದ್ರೆ, ದಾವಣಗೆರೆಯಲ್ಲಿ 1ಲಕ್ಷದ 13 ಸಾವಿರದ 399 ಮತದಾರರಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ 1ಲಕ್ಷದ 32ಸಾವಿರದ 775 ಮಹಿಳಾ ಮತದಾರರಿದ್ದು, ದಾವಣಗೆರೆಯಲ್ಲಿ 1ಲಕ್ಷದ 17 ಸಾವಿರದ 690 ಮಹಿಳಾ ಮತದಾರರಿದ್ದಾರೆ.
ಇನ್ನು ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಕೇರಳದ 140 ವಿಧಾನಸಭಾ ಸ್ಥಾನಗಳು, ಅಸ್ಸಾಂನಲ್ಲಿ 126 ಮತ್ತು ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಕೇರಳದಲ್ಲಿ, 2.71 ಕೋಟಿ ಮತದಾರರು 883 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ 1.32 ಕೋಟಿ ಪುರುಷರು, 1.39 ಕೋಟಿ ಮಹಿಳೆಯರು ಮತ್ತು 273 ಟ್ರಾನ್ಸ್ಜೆಂಡರ್ ಮತದಾರರು ಸೇರಿದ್ದಾರೆ. ಅಸ್ಸಾಂನಲ್ಲಿ ಒಟ್ಟು 2.50 ಕೋಟಿ ಮತದಾರರಿದ್ದು, ಅವರು 31,490 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 am, Thu, 9 April 26