AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಜುನೈದ್ ಸರಳ ಜೀವನ ನಡೆಸುತ್ತಿದ್ದು, ಐಷಾರಾಮಿ ಕಾರು ಬದಲು ಬಸ್, ಓಲಾ ಬಳಸುತ್ತಾರೆ ಎಂದಿದ್ದಾರೆ. ಕೇವಲ ಎರಡು ಸಿನಿಮಾಗಳನ್ನು ಮಾಡಿರುವ ಜುನೈದ್, ಸಾಮಾನ್ಯ ಜನರಂತೆ ರಾಜ್ಯ ಸಾರಿಗೆ ಬಸ್‌ನಲ್ಲಿಯೂ ಪ್ರಯಾಣಿಸುತ್ತಾರೆ.

ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ
ಆಮಿರ್-ಜುನೈದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 24, 2026 | 8:12 AM

Share

ಆಮಿರ್ ಖಾನ್ ಅವರು ಬಾಲಿವುಡ್​​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಸಿನಿಮಾ ಮಾಡುವುದರಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಈಗ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಮಗ ಯಾವ ರೀತಿ ಎಂದು ಹೇಳಿದ್ದಾರೆ. ಕಾರಿನಲ್ಲಿ ಓಡಾಡುವುದೇ ಇಲ್ಲ ಎಂದು ಹೇಳಿದ್ದಾರೆ. ಅವರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರಂತೆ.

‘ನನ್ನ ಮೂವರು ಮಕ್ಕಳೂ ತುಂಬಾ ಸೂಕ್ಷ್ಮ. ಕೊವಿಡ್ ಸಮಯದಲ್ಲಿ ರೀನಾಳ ಹೆತ್ತವರಿಬ್ಬರಿಗೂ ವೈರಸ್ ತಗುಲಿತು. ಆಗ ಜುನೈದ್ ತಕ್ಷಣ ಅವರೊಂದಿಗೆ ವಾಸಿಸಲು ಮುಂದಾದ. ಎರಡು ವಾರಗಳ ಕಾಲ ಅವನು ಚೆನ್ನಾಗಿರುವಂತೆ ನೋಡಿಕೊಂಡ. ಇದು ಜುನೈದ್ ಖಾನ್’ ಎಂದು ಹೇಳಿದ್ದಾರೆ ಆಮಿರ್ ಖಾನ್.

‘ಜುನೈದ್ ಖಾನ್​​ ಬಳಿ ಕಾರು ತೆಗೆದುಕೊಳ್ಳುವಂತೆ ನಾನು ಹೇಳಿ ಹೇಳಿ ಸಾಕಾಗಿದೆ. ಅವನು ಈವರೆಗೆ ಕಾರು ಖರೀದಿಸಿಲ್ಲ. ಎರಡು ಸಿನಿಮಾ ಮಾಡಿದ್ದಾನೆ. ಅವನು ಓಲಾದಲ್ಲಿ ಹೋಗುತ್ತಾನೆ ಅಥವಾ ಬಸ್​​ನಲ್ಲಿ ಓಡಾಡುತ್ತಾನೆ’ ಎಂದು ಆಮಿರ್ ಖಾನ್ ಅವರು ಎಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿ, ಹೊಸ ಪ್ರೇಯಸಿ ಜತೆ ಆಮಿರ್ ಖಾನ್ ಹುಟ್ಟುಹಬ್ಬ 

‘ಅವನು ಒಮ್ಮೆ ಕೇರಳದಲ್ಲಿದ್ದ.ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಹಾಜರಾಗಬೇಕಾಯಿತು. ನಾನು ಅವನ ಬಳಿ ಯಾವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಕೇಳಿದೆ. ಅವನು ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ. ಅವನು ಅಸಾಮಾನ್ಯ ರೀತಿಯ ವ್ಯಕ್ತಿ. ಆದರೆ ಅವರನ್ನು ಎಂದಿಗೂ ಭೌತಿಕವಾದಿಗಳಾಗಿ ಬೆಳೆಸಲಾಗಿಲ್ಲ. ನನಗೆ ಹಣದ ಬಗ್ಗೆ ಹೆಚ್ಚು ಕಾಳಜಿ ಇಲ್ಲ’ ಎಂದಿದ್ದಾನೆ ಆಮಿರ್ ಖಾನ್. ಆಮಿರ್ ಖಾನ್ ಅವರು ಸದ್ಯ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಅವರು ನಟನೆಯಲ್ಲಿ ಹೆಚ್ಚು ಬ್ಯುಸಿ ಆಗಿಲ್ಲ. ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿರೋ ಅವರು ಗೌರಿ ಹೆಸರಿನ ಯುವತಿ ಜೊತೆ ಓಡಾಡುತ್ತಿದ್ದಾರೆ. ಅವರು ಸದ್ಯಕ್ಕೆ ಮದುವೆ ಆಗುವ ಆಲೋಚನೆ ಹೊಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು