Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು

Poikkal Kuthirai First Look: ಮೊಣಕಾಲಿನವರೆಗೆ ಕಾಲು ಕಳೆದುಕೊಂಡು, ಮರದ ಕಾಲು ಅಳವಡಿಸಿಕೊಂಡಿರುವ ವ್ಯಕ್ತಿಯ ಗೆಟಪ್​ನಲ್ಲಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಲುಕ್​ ನೋಡಿದ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು
Follow us
| Updated By: ಮದನ್​ ಕುಮಾರ್​

Updated on: Aug 05, 2021 | 11:36 AM

ಪ್ರಭುದೇವ (Prabhudheva) ಎಂದರೆ ಮೊದಲು ನೆನಪಾಗುವುದು ಡ್ಯಾನ್ಸ್​. ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಅವರು ಡ್ಯಾನ್ಸ್​ ಮಾಡುತ್ತಾರೆ. ಪ್ರಭುದೇವ (Prabhudeva) ನಟಿಸುವ ಪ್ರತಿ ಸಿನಿಮಾದಲ್ಲಿಯೂ ಅಭಿಮಾನಿಗಳು ಇಂಥ ಡ್ಯಾನ್ಸ್​ ಬಯಸುವುದು ಸಹಜ. ಆದರೆ ಅವರ ಮುಂದಿನ ಸಿನಿಮಾದಲ್ಲಿ ಅದ್ಭುತ ನೃತ್ಯವನ್ನು ನಿರೀಕ್ಷಿಸುವುದು ಸ್ವಲ್ಪ ಕಷ್ಟ ಎನಿಸುತ್ತಿದೆ. ಅವರ ಹೊಸ ಸಿನಿಮಾ ‘ಪೊಯ್​ಕ್ಕಾಲ್​ ಕುದುರೈ’ (Poikkal Kuthirai) ಚಿತ್ರದ ಫಸ್ಟ್​ ಲುಕ್​ ನೋಡಿದ ಬಳಿಕ ಇಂಥ ಅಭಿಪ್ರಾಯ ಮೂಡುತ್ತಿದೆ. ಯಾಕೆಂದರೆ, ಈ ಸಿನಿಮಾದಲ್ಲಿ ಅವರು ಒಂದು ಕಾಲು ಇಲ್ಲದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ!

‘ಪೊಯ್​ಕ್ಕಾಲ್​ ಕುದುರೈ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಆಗಿದೆ. ಅದನ್ನು ಕಂಡು ಪ್ರಭುದೇವ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊಣಕಾಲಿನವರೆಗೆ ಕಾಲು ಕಳೆದುಕೊಂಡು, ಮರದ ಕಾಲು ಅಳವಡಿಸಿಕೊಂಡಿರುವ ವ್ಯಕ್ತಿಯ ಗೆಟಪ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಮಗು ಎತ್ತಿಕೊಂಡು, ಇನ್ನೊಂದು ಕೈಯಲ್ಲಿ ದೊಡ್ಡ ಸ್ಪ್ಯಾನರ್​ ಹಿಡಿದು ಫೈಟ್​ ಮಾಡಲು ಸಿದ್ಧವಾಗಿರುವ ಭಂಗಿಯಲ್ಲಿ ಅವರ ಫಸ್ಟ್​​ಲುಕ್​ ಮೂಡಿಬಂದಿದೆ.

ಈ ಚಿತ್ರಕ್ಕೆ ಸಂತೋಷ್​ ಪಿ. ಜಯಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೇ.40ರಷ್ಟು ಶೂಟಿಂಗ್​ ಮುಕ್ತಾಯ ಆಗಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿಕೊಂಡು ಈ ವರ್ಷ ಡಿಸೆಂಬರ್​ ವೇಳೆಗೆ ಚಿತ್ರವನ್ನು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವರಲಕ್ಷ್ಮೀ ಶರತ್​ಕುಮಾರ್​ ಮತ್ತು ರೈಸಾ ವಿಲ್ಸನ್​ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಆದರೆ ಇಬ್ಬರೂ ಕೂಡ ಪ್ರಭುದೇವಗೆ ಜೋಡಿ ಅಲ್ಲ ಎನ್ನಲಾಗುತ್ತಿದೆ. ಪ್ರಕಾಶ್​ ರೈ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

‘ಒಂದು ಕಾಲು ಇಲ್ಲದ ವ್ಯಕ್ತಿ ತನ್ನ ಮಗಳನ್ನು ಹೇಗೆ ಕಾಪಾಡುತ್ತಾನೆ ಎಂಬುದು ಚಿತ್ರದ ಕಥೆ. ಪ್ರಭುದೇವ ಅವರು ಶೂಟಿಂಗ್​ ವೇಳೆ ಒಂದು ಕಾಲು ಮಡಚಿಕೊಂಡೇ ಇರಬೇಕಿತ್ತು. ದೇಹವನ್ನು ಬ್ಯಾಲೆನ್ಸ್​ ಮಾಡುತ್ತ ನಟಿಸುವುದು ಸುಲಭ ಅಲ್ಲ. ಅದಕ್ಕಾಗಿ ಅವರು ತುಂಬ ಪ್ರಾಕ್ಟೀಸ್​ ಮಾಡಬೇಕಾಯಿತು’ ಎಂದು ನಿರ್ದೇಶಕ ಸಂತೋಷ್​ ಜಯಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಡ್ರಗ್ಸ್ ಸಾಗಾಟ: ಡ್ಯಾನ್ಸರ್ ಪ್ರಭುದೇವ ಶಿಷ್ಯ ಕಿಶೋರ್ ಶೆಟ್ಟಿ ಅರೆಸ್ಟ್

ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್