‘ರಸ್ತೆಯಲ್ಲಿ ಓರ್ವ ಮಹಿಳೆಯೂ RCB ಗೆಲುವನ್ನು ಸಂಭ್ರಮಿಸಿಲ್ಲ’: ಸಿದ್ದಾರ್ಥ್​ ಮಾತಿನ ಅರ್ಥವೇನು?

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಪ್​ ಗೆದ್ದಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಈ ಬಗ್ಗೆ ನಟ ಸಿದ್ದಾರ್ಥ್​ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ಗೆಲುವನ್ನು ಸಂಭ್ರಮಿಸಲು ಮಹಿಳೆಯರಿಗೇ ಸಾಧ್ಯವಾಗುತ್ತಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ರಸ್ತೆಯಲ್ಲಿ ಓರ್ವ ಮಹಿಳೆಯೂ RCB ಗೆಲುವನ್ನು ಸಂಭ್ರಮಿಸಿಲ್ಲ’: ಸಿದ್ದಾರ್ಥ್​ ಮಾತಿನ ಅರ್ಥವೇನು?
ಸಿದ್ದಾರ್ಥ್​, ಆರ್​ಸಿಬಿ
Follow us
|

Updated on: Mar 18, 2024 | 4:40 PM

‘ಈ ಸಲ ಕಪ್​ ನಮ್ದೇ’ ಎನ್ನುತ್ತ ಆರ್​ಸಿಬಿ (RCB) ಅಭಿಮಾನಿಗಳು ಇಷ್ಟ ವರ್ಷಗಳಿಂದ ಕಂಡಿದ್ದ ಕನಸು ಇದೇ ಮೊದಲ ಬಾರಿಗೆ ನನಸಾಗಿದೆ. ಮಹಿಳಾ ಪ್ರೀಮಿಯರ್​ ಲೀಗ್​ನ (Women’s Premier League) ಫೈನಲ್​ ಪಂದ್ಯ ಭಾನುವಾರ (ಮಾರ್ಚ್​ 17) ರಾತ್ರಿ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಯ ಗಳಿಸಿತು. ಆರ್​ಸಿಬಿ ವನಿತೆಯರು ಕಪ್​ ಎತ್ತುತ್ತಿದ್ದಂತೆಯೇ ಬೆಂಗಳೂರಿನ ಬೀದಿಗಳಲ್ಲಿ ಸಂಭ್ರಮಾಚರಣೆ ಶುರುವಾಯಿತು. ಈ ಕುರಿತು ನಟ ಸಿದ್ದಾರ್ಥ್​(Siddharth) ಟ್ವೀಟ್​ ಮಾಡಿದ್ದಾರೆ. ನಡುರಾತ್ರಿ ಕೇವಲ ಪುರುಷರು ಮಾತ್ರ ಸೆಲೆಬ್ರೇಟ್​ ಮಾಡುತ್ತಿದ್ದಾರೆ, ಆದರೆ ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಪುರುಷರು ‘ಆರ್​ಸಿಬಿ’ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ಸಿದ್ದಾರ್ಥ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ‘ಒಂದು ಟೂರ್ನಿಯಲ್ಲಿ ಮಹಿಳೆಯರ ತಂಡ ಟ್ರೋಫಿ ಗೆದ್ದಿದೆ. ಆದರೆ ರಸ್ತೆಯಲ್ಲಿ ಸೆಲೆಬ್ರೇಟ್​ ಮಾಡಲು ಓರ್ವ ಮಹಿಳೆ ಕೂಡ ಇಲ್ಲ. ಭಾರತದ ಪುರುಷಪ್ರಧಾನ ವ್ಯವಸ್ಥೆಗೆ ಇದು ಸೂಕ್ತ ಉದಾಹರಣೆ’ ಎಂದು ಸಿದ್ದಾರ್ಥ್​ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಿದ್ದಾರ್ಥ್​ ಅವರ ಎಕ್ಸ್​ (ಟ್ವಿಟರ್​) ಪೋಸ್ಟ್​:

ಸಿದ್ದಾರ್ಥ್​ ಮಾಡಿದ ಈ ಪೋಸ್ಟ್​ಗೆ ಅನೇಕರು ಗರಂ ಆಗಿದ್ದಾರೆ. ‘ಮಹಿಳೆಯರ ಗೆಲುವನ್ನು ನಾವೇಕೆ ಸೆಲೆಬ್ರೇಟ್​ ಮಾಡಬಾರದು’ ಎಂದು ಕೆಲವು ಪುರುಷರು ಪ್ರಶ್ನೆ ಎಸೆದಿದ್ದಾರೆ. ತಮ್ಮ ಮಾತನ್ನು ನೆಟ್ಟಿಗರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದು ಸಿದ್ದಾರ್ಥ್​ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬರಲು ಭಾರತದ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್​ ಮಾಡಿದ್ದೇನೆ. ಸ್ತ್ರೀಯರ ದೊಡ್ಡ ಗೆಲುವನ್ನು ಬೀದಿಯಲ್ಲಿ ಸಂಭ್ರಮಿಸಲು ಪುರುಷರ ರೀತಿ ಮಹಿಳೆಯರಿಗೆ ಸಾಧ್ಯವಾಗಿಲ್ಲ ಎಂಬ ವ್ಯಂಗ್ಯ ಇದರಲ್ಲಿದೆ’ ಎಂದು ಸಿದ್ದಾರ್ಥ್​ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: WPL 2024: ರಾಯಲ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ RCB

ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಸಿದ್ದಾರ್ಥ್​​ ಅವರ ಫೇಮಸ್​ ಆಗಿದ್ದಾರೆ. ಸಮಾಜದ ಅನೇಕ ಆಗುಹೋಗುಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ತಮ್ಮ ಅಭಿಪ್ರಾಯ ತಿಳಿಸುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಆ ಕಾರಣದಿಂದ ಅವರು ಕೆಲವೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದು ಕೂಡ ಉಂಟು. 2023ರಲ್ಲಿ ಅವರು ನಟಿಸಿದ ‘ಚಿತ್ತ’ ಸಿನಿಮಾ ಕನ್ನಡದಲ್ಲೂ ಡಬ್​ ಆಗಿ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು