AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯರು ಬಯಲಲ್ಲೇ ಬಟ್ಟೆ ಬದಲಿಸಬೇಕಿತ್ತು: ನಟಿ ಮಧೂ ಶಾ

ಕನ್ನಡದ ‘ಅಣ್ಣಯ್ಯ’, ‘ರನ್ನ’ ಸಿನಿಮಾಗಳ ನಾಯಕಿ ಮಧೂ ಶಾ, 90 ರ ದಶಕದಲ್ಲಿ ನಟಿಯಲು ಅನುಭವಿಸುತ್ತಿದ್ದ ಕಷ್ಟಗಳು, ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ನಟಿಯರು ಬಯಲಲ್ಲೇ ಬಟ್ಟೆ ಬದಲಿಸಬೇಕಿತ್ತು: ನಟಿ ಮಧೂ ಶಾ
ಮಂಜುನಾಥ ಸಿ.
|

Updated on: May 19, 2024 | 5:14 PM

Share

ಸಿನಿಮಾ ನಟ-ನಟಿಯರಿಗೆ ಇಂದು ಶೂಟಿಂಗ್ (Shooting) ಸೆಟ್​ನಲ್ಲಿ ಸಾಕಷ್ಟು ಸವಲತ್ತುಗಳನ್ನು ನೀಡಲಾಗುತ್ತದೆ. ಅವರಿಗಾಗಿ ಪ್ರತ್ಯೇಕ ಕ್ಯಾರಾವ್ಯಾನ್ ನೀಡಲಾಗಿರುತ್ತದೆ. ಆ ಕ್ಯಾರಾವ್ಯಾನ್​ನಲ್ಲಿ ಒಂದು ಮನೆಯಲ್ಲಿ ಸಿಗುವ ಎಲ್ಲ ಸವಲತ್ತುಗಳು ಸಿಗುತ್ತವೆ. ಏಸಿ ಕೋಣೆ, ಶೌಚಾಲಯ, ಮಲಗಲು ಪ್ರತ್ಯೇಕ ಬೆಡ್ ವ್ಯವಸ್ಥೆ, ಮೇಕಪ್​ ಮಾಡಿಕೊಳ್ಳಲು ಸುಜ್ಜಿತ ಮೇಕಪ್ ಟೇಬಲ್, ಬಟ್ಟೆ ಬದಲಿಸಲು ಸುಸಜ್ಜಿತ ಚೇಂಜಿಂಗ್ ರೂಮ್ ಇನ್ನೂ ಹಲವು ವ್ಯವಸ್ಥೆಗಳಿರುತ್ತವೆ, ನಾಯಕಿಗೆ ಪ್ರತ್ಯೇಕ ನೌಕರರು, ಕೇರ್ ಟೇಕರ್​ಗಳು ಇರುತ್ತಾರೆ. ಆದರೆ ಕೆಲ ದಶಕದ ಹಿಂದೆ ನಟಿಯರ ಪರಿಸ್ಥಿತಿ ಈಗಿನಂತಿರಲಿಲ್ಲ. ಆಗಿನ ನಟಿಯರು ಹಲವು ಕಷ್ಟಗಳನ್ನು ಎದುರಿಸಿ ನಟಿಯಾದವರು. ತಾವು ನಟಿಯಾಗಿದ್ದಾಗ ಅನುಭವಿಸಿದ ಸಮಸ್ಯೆಗಳ ಬಗ್ಗೆ ನಟಿ ಮಧೂ ಶಾ ಮಾತನಾಡಿದ್ದಾರೆ.

ಕನ್ನಡದ ‘ಅಣ್ಣಯ್ಯ’, ‘ರನ್ನ’ ಸಿನಿಮಾಗಳ ನಾಯಕಿ ಮಧೂ ಶಾ, ತೆಲುಗು, ತಮಿಳು, ಮಲಯಾಳಂನ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರೋಜಾ’, ‘ಜಂಟಲ್​ಮ್ಯಾನ್’ ಸಿನಿಮಾಗಳು ಸೇರಿದಂತೆ ರಜನೀಕಾಂತ್, ಕಮಲ್ ಹಾಸನ್ ಅವರುಗಳೊಟ್ಟಿಗೆ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಧೂ ಶಾ, ತಾವು ನಾಯಕಿಯಾಗಿದ್ದ ಸಮಯದಲ್ಲಿ ನಾಯಕಿಯರಿಗೆ ಇದ್ದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

90 ರ ದಶಕದ ನಾಯಕಿಯರಿಗೆ ಖಾಸಗಿತನ ಎಂಬುದೇ ಇರಲಿಲ್ಲ. ಮೂಲಭೂತ ಸೌಕರ್ಯವಾಗಿದ್ದ ಶೌಚಾಲಯ ಸಹ ಇರುತ್ತಿರಲಿಲ್ಲ. ಔಟ್​ಡೋರ್ ಶೂಟಿಂಗ್​ಗಳಿದ್ದಾಗಲಂತೂ ನಟಿಯರಿಗೆ ಬಹಳ ಕಷ್ಟವಾಗುತ್ತಿತ್ತು. ಒಮ್ಮೆ ನಾವು ಬೆಟ್ಟಗುಡ್ಡಗಳಲ್ಲಿ ಹಾಡೊಂದರ ಚಿತ್ರೀಕರಣ ಮಾಡುತ್ತಿದ್ದೆವು. ಅಲ್ಲಿ ಶೌಚಾಲಯ ಇಲ್ಲ ಏನೂ ವ್ಯವಸ್ಥೆ ಇಲ್ಲ. ನಾನು ಸೇರಿದಂತೆ ಅಲ್ಲಿದ್ದ ಮಹಿಳೆಯರೆಲ್ಲ ಬಯಲಿನಲ್ಲಿಯೇ ಶೌಚಾಲಯ ಮಾಡಬೇಕಿತ್ತು’ ಎಂದಿದ್ದಾರೆ ಮಧೂ ಶಾ.

ಇದನ್ನೂ ಓದಿ:ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

ಡ್ಯಾನ್ಸ್ ಮಾಡಲು ನಮಗೆ ಹಾಕಲಾಗುತ್ತಿದ್ದ ಬಟ್ಟೆಗಳು ಬಹಳ ಭಾರವಾಗಿರುತ್ತಿದ್ದವು. ಉರಿ ಬಿಸಿಲಿನಲ್ಲಿ ಭಾರವಾದ ಬಟ್ಟೆಗಳನ್ನು ಹಾಕಿ ಡ್ಯಾನ್ಸ್ ಮಾಡಲು ಬಿಡುತ್ತಿದ್ದರು. ಸೆಖೆಗೆ ದೇಹವೆಲ್ಲ ಬೆಂದು ಹೋಗಿರುತ್ತಿತ್ತು, ಹಾಡಿಗೆ ಹಲವು ಬಟ್ಟೆಗಳನ್ನು ಬದಲಿಸಬೇಕಿತ್ತು. ಅದಕ್ಕೆ ಚೇಂಜಿಂಗ್ ರೂಂ ಇರಲಿಲ್ಲ, ನಾವು ಬಯಲಿನಲ್ಲೇ ಬಟ್ಟೆ ಬದಲಿಸಬೇಕಾಗಿತ್ತು’ ಎಂದಿದ್ದಾರೆ ಮಧೂ ಶಾ.

ತಾವು ಮಣಿರತ್ನಂ ಜೊತೆಗೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿರುವ ಮಧೂ ಶಾ, ‘ಇರುವರ್’ ಸಿನಿಮಾದಲ್ಲಿ ನಟಿಸುವಾಗ ಒಮ್ಮೆ ಊಟ ಮಾಡಿ ಕಲ್ಲಿನ ಮೇಲೆ ಮಲಗಿಕೊಂಡಿದ್ದೆ. ಆಗ ಕೆಲವರು, ‘ನೋಡಿ ಎಷ್ಟು ಹಣ ಸಂಪಾದನೆ ಮಾಡಿದರೇನು, ಕಲ್ಲಿನ ಮೇಲೆಯೇ ಮಲಗುವುದಾದರೆ ಇಷ್ಟು ಹಣ ಸಂಪಾದನೆ ಮಾಡಿ ಪ್ರಯೋಜನವೇನು’ ಎಂದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!