Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ

ನಯನತಾರಾ ಅವರು ತಮ್ಮ ಹಿಂದಿನ ಸಂಬಂಧ ಮತ್ತು ವೃತ್ತಿಜೀವನದ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ಪ್ರಭುದೇವ ಅವರೊಂದಿಗಿನ ಸಂಬಂಧದ ಕಾರಣ ಸಿನಿಮಾಗಳಿಂದ ದೂರವಾಗಿದ್ದ ಬಗ್ಗೆ ಹಾಗೂ ಅದರಿಂದ ಪಡೆದ ಪಾಠಗಳ ಬಗ್ಗೆ ಅವರು ವಿವರಿಸಿದ್ದಾರೆ. ವಿಘ್ನೇಶ್ ಶಿವನ್ ಅವರನ್ನು ಮದುವೆಯಾದ ನಂತರ ಅವರ ಜೀವನದಲ್ಲಿ ಬಂದ ಬದಲಾವಣೆಗಳನ್ನು ಅವರು ಹಂಚಿಕೊಂಡಿದ್ದಾರೆ.

‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ
ಪ್ರಭುದೇವ-ನಯನತಾರಾ
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2024 | 11:54 AM

ನಯನತಾರಾ ಅವರು ಲೇಡಿ ಸೂಪರ್​ಸ್ಟಾರ್’ ಎಂದೇ ಫೇಮಸ್ ಆದವರು. ದಕ್ಷಿಣ ಭಾರತದಲ್ಲಿ ಅನೇಕ ಪ್ರಬಲ ಮಹಿಳಾ ಪಾತ್ರಗಳನ್ನು ಅವರು ಮಾಡಿದ್ದರು. ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. 2011ರಲ್ಲಿ ನಡೆದ ಅವರ ಜೀವನದ ಲವ್ ಬ್ರೇಕಪ್ ದೊಡ್ಡ ಹೊಡೆತ ನೀಡಿತು. ಈಗ ವಿಘ್ನೇಶ್​ ಶಿವನ್ ಅವರ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರು ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಿನಿಮಾಗಳನ್ನು ಬಿಟ್ಟಿದ್ದರು. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್​’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಯನಾತಾರ, 2011ರಲ್ಲಿ ಏಕೆ ಸಿನಿಮಾಗಳನ್ನು ತ್ಯಜಿಸಿದೆ ಎಂಬುದನ್ನು ಹೇಳಿದ್ದಾರೆ. ‘ನನ್ನ ಜೀವನದಲ್ಲಿ ಪ್ರೀತಿ ಬೇಕು ಎಂದರೆ ನಾನು ಕಾಂಪ್ರಮೈಸ್ ಆಗಬೇಕು ಎಂದುಕೊಂಡಿದ್ದೆ. ನಾನು ಆಗ ಸಣ್ಣವಳಿದ್ದೆ’ ಎಂದಿದ್ದಾರೆ ನಯನತಾರಾ.

‘ನಮ್ಮ ಉದ್ಯಮದಲ್ಲಿ ನಾವು ಹಲವಾರು ವಿಭಿನ್ನ ಸಂಬಂಧಗಳನ್ನು ನೋಡಿರುತ್ತೇವೆ. ಅದರಲ್ಲಿ ಇದೂ ಒಂದು ನಾನು ಅದನ್ನು ಕೆಟ್ಟದ್ದು ಎಂದು ಹೇಳುತ್ತಿಲ್ಲ. ಆದರೆ ಎರಡನೇ ಮದುವೆ ರೀತಿಯ ಸಂಬಂಧಗಳನ್ನು ಇಂಡಸ್ಟ್ರಿಯವರು ಮೊದಲಿನಿಂದ ನೋಡುತ್ತಿದ್ದಾರೆ. ಹಾಗಾಗಿ ಆ ಸಮಯದಲ್ಲಿ ಅದು ಸರಿ ಎನಿಸಿತು’ ಎಂದಿದ್ದಾರೆ ನಯನತಾರಾ.

‘ನಿನ್ನ ಜೀವನದಲ್ಲಿ ಪ್ರೀತಿ ಬೇಕಾದರೆ ಎಲ್ಲೋ ರಾಜಿ ಮಾಡಿಕೊಳ್ಳಬೇಕು ಎಂದು ನನ್ನೊಳಗೆ ಯೋಚಿಸಿದೆ. ನಾವು ಎಲ್ಲವನ್ನೂ ನೀಡಬೇಕು ಅನಿಸುತ್ತಿತ್ತು. ನೀವು ಏನನ್ನಾದರೂ ಮಾಡುವುದು ನಿಮ್ಮ ಸಂಗಾತಿಗೆ ಇಷ್ಟವಾಗದಿದ್ದರೆ, ನೀವು ತ್ಯಾಗ ಮಾಡಬೇಕು. ಇದು ಆ ಸಮಯದಲ್ಲಿ ಪ್ರೀತಿಯ ಬಗ್ಗೆ ನನ್ನ ತಿಳುವಳಿಕೆಯಾಗಿತ್ತು’ ಎಂದಿದ್ದಾರೆ ನಯನತಾರಾ.

‘ಆ ನಿರ್ದಿಷ್ಟ ಸಂಬಂಧದಿಂದ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ಎಷ್ಟು ಸಾಮರ್ಥ್ಯವನ್ನು ಹೊಂದಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಾ ಇರಲಿಲ್ಲ. ಅದರ ನಂತರ, ನಾನು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:  ‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?

ಇವರ ಸಂಬಂಧಕ್ಕೆ ಪ್ರಭುದೇವ ಅವರ ಆ ಸಂದರ್ಭದಲ್ಲಿ ಪತ್ನಿ ಕಡೆಯಿಂದ ವಿರೋಧ ಬಂತು. ನಂತರ ನಯನಾತಾರಾ ಸಂಬಂಧದಿಂದ ದೂರ ಬಂದರು. ಧನುಷ್ ಅವರು ನಿರ್ಮಾಣ ಮಾಡಿದ, ‘ನಾನುಂ ರೌಡಿ ದಾನ್’ ಚಿತ್ರವನ್ನು ವಿಗ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ನಯನತಾರಾ ನಾಯಕಿ. ಈ ಚಿತ್ರದ ಸೆಟ್​ನಲ್ಲಿ ನಯನತಾರಾ ಹಾಗೂ ವಿಗ್ನೇಶ್​ಗೆ ಪ್ರೀತಿ ಆಯಿತು. 2022ರಲ್ಲಿ ಅಧಿಕೃತವಾಗಿ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್