ದಿವ್ಯಾ ಉರುಡುಗ ನೀಡಿದ ಉಂಗುರ ಮತ್ತೆ ಕಳೆದುಕೊಂಡು ಹುಡುಕಾಡಿದ ಅರವಿಂದ್​; ವಿಡಿಯೋ ವೈರಲ್

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮ ಪಕ್ಷಿಗಳಂತೆ ಇದ್ದರು. ಅರವಿಂದ್ ಎಂದರೆ ತುಂಬಾನೇ ಇಷ್ಟ ಎಂದು ದಿವ್ಯಾ ಸಾಕಷ್ಟು ಬಾರಿ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ ನೀಡಿದ ಉಂಗುರ ಮತ್ತೆ ಕಳೆದುಕೊಂಡು ಹುಡುಕಾಡಿದ ಅರವಿಂದ್​; ವಿಡಿಯೋ ವೈರಲ್
ಅರವಿಂದ್ ಕೆಪಿ
Follow us
|

Updated on:Jun 16, 2021 | 7:58 PM

 ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆ.ಪಿ. ಬಿಗ್​ ಬಾಸ್ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿದ್ದರು. ಇದರ ಸಂಕೇತವಾಗಿ ದಿವ್ಯಾ ತಮ್ಮ ಕೈಯಲ್ಲಿದ್ದ ಉಂಗುರವನ್ನು ಅರವಿಂದ್​ಗೆ ನೀಡಿದ್ದರು. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಈ ಉಂಗುರ ಕಳೆದುಕೊಂಡು ಅರವಿಂದ್ ಪೇಚಿಗೆ ಸಿಲುಕಿದ್ದರು. ಈಗ ಅವರು ಮತ್ತೆ ಇದೇ ತಪ್ಪು ಮಾಡಿದ್ದಾರೆ! ಈ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮ ಪಕ್ಷಿಗಳಂತೆ ಇದ್ದರು. ಅರವಿಂದ್ ಎಂದರೆ ತುಂಬಾನೇ ಇಷ್ಟ ಎಂದು ದಿವ್ಯಾ ಸಾಕಷ್ಟು ಬಾರಿ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ, ಪ್ರತಿ ಸ್ಪರ್ಧಿಗಳು ತಮ್ಮಿಷ್ಟದ ವಸ್ತುಗಳನ್ನು ತಮ್ಮ ಪ್ರೀತಿಪಾತ್ರರಿಗೆ ನೀಡಬೇಕು.

ಆಗ ದಿವ್ಯಾ ಅವರು ತಮ್ಮ ತಂದೆ ನೀಡಿದ ಡೈಮಂಡ್​ ರಿಂಗ್​ಅನ್ನು ಅರವಿಂದ್​ಗೆ ನೀಡಿದ್ದರು. ಅಲ್ಲದೆ, ಇದನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಕೋರಿದ್ದರು. ಆದರೆ, ಅರವಿಂದ್​ ಉಂಗುರ ಕಳೆದುಕೊಂಡಿದ್ದರು. ಇದಕ್ಕಾಗಿ ಮನೆ ಮಂದಿಯೆಲ್ಲ ಹುಡುಕಾಡಿದ್ದರು. ಕೊನೆಗೂ ಈ ಉಂಗುರ ಸಿಕ್ಕಿತ್ತು. ನಂತರ ಆ ರಿಂಗ್​ ಅನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎನ್ನುವ ಭರವಸೆಯನ್ನು ದಿವ್ಯಾಗೆ ಅರವಿಂದ್ ನೀಡಿದ್ದರು.

ಬಿಗ್ ಬಾಸ್​​ ಎರಡನೇ ಇನ್ನಿಂಗ್ಸ್​ ಆರಂಭವಾಗುತ್ತಿದೆ. ಇದಕ್ಕೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಅರವಿಂದ್, ‘ಇಲ್ಲೇ ಇಟ್ಟಿದ್ನಲ್ಲ, ಸಿಗುತ್ತಿಲ್ಲ. ಎಲ್ಲೋಯ್ತು? ಮತ್ತೆ ಕಳೆದುಕೊಂಡ್ರೆ ಅಷ್ಟೇ’ ಎಂದು ಉಂಗುರಕ್ಕಾಗಿ ಹುಡುಕಾಡಿದ್ದಾರೆ. ಕೊನೆಗೆ ಆ ಉಂಗುರ ಅವರ ಕೈನಲ್ಲೇ ಇರೋದು ಗಮನಕ್ಕೆ ಬಂದಿದೆ. ‘ಈ ಬಾರಿ ಕಳೆದುಕೊಳ್ಳೋ ಸೀನೆ ಇಲ್ಲ. ನಾನ್​ ರೆಡಿ’ ಎಂದು ಅರವಿಂದ್ ಹೇಳಿದ್ದಾರೆ.

ಈ ವಿಡಿಯೋ ನೋಡಿ ಸಾಕಷ್ಟು ಜನರು ಖುಷಿಪಟ್ಟಿದ್ದಾರೆ. ದಿವ್ಯಾ ಹಾಗೂ ಅರವಿಂದ್​ ಕೆಮಿಸ್ಟ್ರಿ ನೋಡೋಕೆ ನಾವು ರೆಡಿ ಆಗಿದ್ದೇವೆ ಎಂದಿದ್ದಾರೆ. ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಲ್ಲುವುದಕ್ಕೂ ಮೊದಲು ದಿವ್ಯಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದು ಅರವಿಂದ್​ಗೆ ಸಾಕಷ್ಟು ನೋವುಂಟು ಮಾಡಿತ್ತು. ಆದರೆ, ಈಗ ಇಬ್ಬರೂ ಮತ್ತೆ ಒಟ್ಟಾಗಿ ಬಿಗ್​ ಬಾಸ್​ ಮನೆ ಸೇರುತ್ತಿರುವುದಕ್ಕೆ ವೀಕ್ಷಕರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Divya Suresh: ದಿವ್ಯಾ ಸುರೇಶ್ ಈಗ ರೌಡಿ ಬೇಬಿ; ಮಾದಕ ಲುಕ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿ

Published On - 7:47 pm, Wed, 16 June 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ