AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಐಶಾರಾಮಿ ಹೋಟೆಲ್​​ನಲ್ಲಿವೆ 42 ಟಿವಿಗಳು, ಇನ್ನೂ ಹಲವು ವಿಶೇಷತೆ

Allu Arjun hotel: ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆವ ನಟ ಅಲ್ಲು ಅರ್ಜುನ್ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ಅವರು ಐಶಾರಾಮಿ ಹೋಟೆಲ್ ಚೈನ್ ಬ್ಯುಸಿನೆಸ್ ಹೊಂದಿದ್ದಾರೆ. ಅವರದ್ದು ಸಾಧಾರಣ ಹೋಟೆಲ್ ಅಲ್ಲ. ಒಂದು ರೀತಿ ಎಕ್ಸ್​ಪೀರಿಯನ್ಸ್ ಸ್ಟೋರ್​​ ಮಾದರಿ. ಅವರ ಹೋಟೆಲ್​​ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಲ್ಲಿದೆ ಮಾಹಿತಿ...

ಅಲ್ಲು ಅರ್ಜುನ್ ಐಶಾರಾಮಿ ಹೋಟೆಲ್​​ನಲ್ಲಿವೆ 42 ಟಿವಿಗಳು, ಇನ್ನೂ ಹಲವು ವಿಶೇಷತೆ
Buffalo Wild Wings
ಮಂಜುನಾಥ ಸಿ.
|

Updated on: Jun 25, 2025 | 4:11 PM

Share

ಸಿನಿಮಾ (Cinema) ನಟರು ಉದ್ಯಮಿಗಳೂ ಆಗಿರುತ್ತಾರೆ. ಕರ್ನಾಟಕದಲ್ಲಿ ನಟ-ನಟಿಯರು ಸಾಮಾನ್ಯವಾಗಿ ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಡಬ್ಬಿಂಗ್ ಸ್ಟುಡಿಯೋ ಇನ್ನಿತರೆಗಳ ಮೇಲೆ ಹೂಡಿಕೆ ಮಾಡುತ್ತಾರೆ. ಹೋಟೆಲ್​ಗಳ ಮೇಲೆ ಹೂಡಿಕೆ ಮಾಡಿರುವವರು ಬಹಳ ಕಡಿಮೆ. ಕನ್ನಡ ಚಿತ್ರರಂಗದ ಸ್ಟಾರ್​​ಗಳಿಗೆ ಹೋಲಿಸಿದರೆ ಟಾಲಿವುಡ್​ನ ಸ್ಟಾರ್​ಗಳು ಉದ್ಯಮಗಳ ಮೇಲೆ ಹೂಡಿಕೆ ಮಾಡುವುದು ಬಹಳ ಹೆಚ್ಚು. ಅದಕ್ಕೆ ಉದ್ಯಮದ ಗಾತ್ರ, ಪಡೆವ ಸಂಭಾವನೆಯೂ ಕಾರಣ. ತೆಲುಗು ಸ್ಟಾರ್​ಗಳು ರಿಯಲ್ ಎಸ್ಟೇಟ್ ಜೊತೆಗೆ ಹೋಟೆಲ್​ಗಳ ಮೇಲೆ ಅತಿಯಾಗಿ ಹೂಡಿಕೆ ಮಾಡಿದ್ದಾರೆ. ಅದೂ ಸಾಮಾನ್ಯ ಹೋಟೆಲ್​ಗಳಲ್ಲ ಭಾರಿ ಐಶಾರಾಮಿ ಹೋಟೆಲ್​​ಗಳನ್ನು ನಿರ್ಮಿಸಿದ್ದಾರೆ. ಹಲವಾರು ಮಂದಿ ನಟರು ಹೋಟೆಲ್ ಉದ್ಯಮ ನಡೆಸುತ್ತಿದ್ದು, ಅವರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು.

ಅಲ್ಲು ಅರ್ಜುನ್ ಅವರು ಬಫೆಲ್ಲೊ ವೈಲ್ಡ್ ವಿಂಗ್ಸ್ ಹೆಸರಿನ ಐಶಾರಾಮಿ ಹೋಟೆಲ್ ಅನ್ನು ಹೈದರಾಬಾದ್​ನ ಗಚ್ಚಿಬೋಲಿ ಏರಿಯಾನಲ್ಲಿ ಹೊಂದಿದ್ದಾರೆ. ಇತರೆ ಕೆಲವು ಐಶಾರಾಮಿ ಹೋಟೆಲ್​ಗಳ ರೀತಿ ಇಲ್ಲ ಅಲ್ಲು ಅರ್ಜುನ್ ಅವರದ್ದು ಕೇವಲ ಹೋಟೆಲ್ ಅಲ್ಲ ಅದೊಂದು ‘ಎಕ್ಸ್​ಪೀರಿಯನ್ಸ್ ಸ್ಟೋರ್’ ಮಾದರಿ ಇದೆ. ಆಪಲ್, ಸ್ಯಾಮ್​ಸಂಗ್ಸ್ ಇನ್ನಿತರೆ ಸಂಸ್ಥೆಗಳವರು ತಮ್ಮ ಪ್ರಾಡಕ್ಟ್ ಅನ್ನು ಜನರಿಗೆ ಬಳಸಲು ಮಾಡಿರುವ ಎಕ್ಸ್​ಪೀರಿಯನ್ಸ್ ಸ್ಟೋರ್ ಮಾದರಿಯಲ್ಲಿಯೇ ಇದೆ ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್.

ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್​​ನಲ್ಲಿ ಕ್ರೀಡೆಗೆ ಪ್ರಥಮ ಆದ್ಯತೆ. ಅವರ ಹೋಟೆಲ್​ಗೆ ಯಾವಾಗಲೇ ಹೋದರು ಯಾವುದಾದರೂ ಒಂದು ಕ್ರೀಡೆ ಟಿವಿಯಲ್ಲಿ ಲೈವ್ ನಡೆಯುತ್ತಲೇ ಇರುತ್ತದೆ. ಸ್ಪೋರ್ಟ್​​ ನೋಡಲೆಂದು ಒಂದೇ ಹಾಲ್​​ನಲ್ಲಿ ಬರೋಬ್ಬರಿ 42 ವಿವಿಧ ಗಾತ್ರದ ಟಿವಿಗಳನ್ನು ಅಳವಡಿಸಲಾಗಿದೆ. ಎರಡು-ಮೂರು ಟಿವಿಗಳಂತೂ ಸಿನಿಮಾ ಸ್ಕ್ರೀನ್​ಗಳಷ್ಟು ದೊಡ್ಡದಾಗಿವೆ. ಅದು ಮಾತ್ರವೇ ಅಲ್ಲದೆ, ಇಲ್ಲಿ ಆಟವಾಡಲು ಸಹ ಸಾಕಷ್ಟು ವ್ಯವಸ್ಥೆ ಇದೆ.

ಇದನ್ನೂ ಓದಿ:ಶಕ್ತಿಮಾನ್ ಪಾತ್ರದಲ್ಲಿ ಬಾಲಿವುಡ್ ನಟನ ಬದಲು ಅಲ್ಲು ಅರ್ಜುನ್?

ಫೂಸ್​ಬಾಲ್ ಟೇಬಲ್, ಬಿಲಿಯರ್ಡ್ಸ್ ಟೇಬಲ್ ಇನ್ನೂ ಕೆಲವು ಇಂಡೋರ್ ಗೇಮ್​ಗಳನ್ನು ಈ ಹೋಟೆಲ್​​ನಲ್ಲಿ ಆಡಬಹುದು. ಇದಕ್ಕಿಂತಲೂ ವಿಶೇಷವೆಂದರೆ ಇಲ್ಲಿ ಪ್ಲೇ ಸ್ಟೇಷನ್​​ ಸಹ ಇವೆ. ಹಲವಾರು ಪ್ಲೇ ಸ್ಟೇಷನ್​ಗಳನ್ನು ಹೋಟೆಲ್ ಒಳಗೆ ಅಳವಡಿಸಲಾಗಿದ್ದು ಬಿಯರ್ ಹೀರುತ್ತಾ, ಇಷ್ಟದ ಆಹಾರ ಸವಿಯುತ್ತಾ ಗಂಟೆಗಳ ಕಾಲ ಗೇಮ್ ಸಹ ಆಡಬಹುದಾಗಿದೆ.

ಇನ್ನು ಮೆನುವಿನ ವಿಷಯಕ್ಕೆ ಬಂದರೆ ಹಲವು ರೀತಿಯ ಬರ್ಗರ್, ಪಿಜಾಗಳ ಜೊತೆಗೆ ಸ್ಟೇಕ್, ಸಿಜ್ಲರ್​ಗಳು (ದನದ ಮಾಂಸದ್ದಲ್ಲ ಬದಲಿಗೆ ಎಮ್ಮೆಯ ಮಾಂಸದ್ದು) ಸಹ ಇಲ್ಲಿ ದೊರೆಯುತ್ತವೆ. ಬೆಲೆ ತುಸು ದುಬಾರಿಯೇ. ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್​​ನ ಹೋಟೆಲ್​ ಗೆ ಭೇಟಿ ನೀಡಿ ಅಲ್ಲಿ ಆಹಾರ ಸವಿದಿರುವ ಕೆಲವು ಫುಡ್ ವ್ಲಾಗರ್​ಗಳು ಅಲ್ಲಿನ ತಿನಿಸುಗಳ ಗುಣಮಟ್ಟ ಮತ್ತು ರುಚಿಯನ್ನು ಬಹುವಾಗಿ ಕೊಂಡಾಡಿದ್ದಾರೆ. ಎಲ್ಲದಕ್ಕಿಂತಲೂ ಅಲ್ಲಿನ ಆಂಬಿಯನ್ಸ್​ ಅನ್ನು ಬಹಳ ಮೆಚ್ಚಿಕೊಂಡಿದ್ದಾರೆ. ‘ಬಫೆಲ್ಲೊ ವೈಲ್ಡ್ ವಿಂಗ್ಸ್’ ಅಮೆರಿಕದ ಜನಪ್ರಿಯ ಫುಡ್ ಚೈನ್, ಅದರ ಪ್ರಾಂಚೈಸಿಯನ್ನು ಅಲ್ಲು ಅರ್ಜುನ್ ಖರೀದಿಸಿ ಹೋಟೆಲ್ ತೆರೆದಿದ್ದಾರೆ. ಬೆಂಗಳೂರಿನಲ್ಲೂ ನಾಲ್ಕೈದು ಬಫೆಲ್ಲೊ ವೈಲ್ಡ್ ವಿಂಗ್ಸ್ ಹೋಟೆಲ್​ಗಳು ಇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು