ವಿಜಯ್ ದೇವರಕೊಂಡ ಜೊತೆ ನಟಿಸಿದ ಈ ಯುವತಿಗೆ ಈಗ ಭರ್ಜರಿ ಆಫರ್

ವಿಜಯ್ ದೇವರಕೊಂಡ ಅಭಿನಯದ ‘ಗೀತ ಗೋವಿಂದಂ’ ಚಿತ್ರವು ರಶ್ಮಿಕಾ ಮಂದಣ್ಣ ಮತ್ತು ಅನಿಷಾ ದಾಮಾ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಸಣ್ಣ ಪಾತ್ರದಲ್ಲಿ ನಟಿಸಿದ್ದ ಅನಿಷಾ, ತಮ್ಮ ಆಕರ್ಷಕ ನೋಟದಿಂದ ಪ್ರೇಕ್ಷಕರ ಗಮನ ಸೆಳೆದರು. ಈ ಚಿತ್ರದ ನಂತರ ಅವರಿಗೆ ಹಲವು ಅವಕಾಶಗಳು ಬಂದಿವೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅವರ ಜನಪ್ರಿಯತೆ ಗಗನಕ್ಕೇರಿದೆ.

ವಿಜಯ್ ದೇವರಕೊಂಡ ಜೊತೆ ನಟಿಸಿದ ಈ ಯುವತಿಗೆ ಈಗ ಭರ್ಜರಿ ಆಫರ್
Anisha
Edited By:

Updated on: Jan 19, 2025 | 6:30 AM

ವಿಜಯ್ ದೇವರಕೊಂಡ ಅವರಿಗೆ ಸೌತ್ ಇಂಡಸ್ಟ್ರಿಯಲ್ಲಿನ ಕ್ರೇಜ್ ಇದೆ.  ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ವಿಜಯ್, ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ನಾಯಕನಾಗಿ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ವಿಜಯ್ ಅಭಿನಯದ ‘ಗೀತ ಗೋವಿಂದಂ’, ‘ಟ್ಯಾಕ್ಸಿವಾಲಾ’ ಮೊದಲಾದ ಚಿತ್ರಗಳು ಪ್ರೇಕ್ಷಕರ ಮನಸೂರೆಗೊಂಡವು. ‘ಗೀತ ಗೋವಿಂದಂ’ ವಿಜಯ್ ಅವರ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ಪರಶುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಇತರ ಕಲಾವಿದರಿಗೂ ಬೇಡಿಕೆ ಬಂದಿದೆ.

‘ಗೀತ ಗೋವಿಂದಂ’ ಚಿತ್ರ 2018 ರಲ್ಲಿ ಬಿಡುಗಡೆಯಾಯಿತು ಮತ್ತು ದೊಡ್ಡ ಯಶಸ್ಸನ್ನು ಪಡೆಯಿತು. ಉತ್ತಮ ಆದಾಯವನ್ನೂ ಗಳಿಸಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ರಶ್ಮಿಕಾ ಜೊತೆ ಮತ್ತೊಬ್ಬ ಹುಡುಗಿ ಹೆಚ್ಚು ಫೇಮಸ್ ಆದಳು. ಈ ಸಿನಿಮಾದಲ್ಲಿ ವಿಜಯ್ ಪ್ರೀತಿಸುವ ವಿದ್ಯಾರ್ಥಿನಿಯಾಗಿ ನಟಿಸಿದ ಹುಡುಗಿ ನೆನಪಿದೆಯಾ? ಆ ಸುಂದರಿಯ ಹೆಸರು ಅನಿಷಾ ದಾಮಾ. ಈ ಚಿತ್ರದಲ್ಲಿ ತೆರೆ ಮೇಲೆ ಸ್ವಲ್ಪ ಕಾಲ ಕಾಣಿಸಿಕೊಂಡರೂ ತನ್ನ ಗ್ಲಾಮರಸ್ ಲುಕ್ ನಿಂದ ಪ್ರಭಾವ ಬೀರಿದ್ದಾರೆ.

‘ಗೀತಾ ಗೋವಿಂದಂ’ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದರು. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅನಿಷಾ ನಾಯಕಿ ಆಫರ್‌ಗಳಿಗಾಗಿ ಕಾದರು. ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಚೆಲುವೆಗೆ ಹಲವು ಆಫರ್​ಗಳು ಸಿಗುತ್ತಿವೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರ್ ಫೋಟೋಗಳದ್ದೇ ಸದ್ದು.

ಇದನ್ನೂ ಓದಿ: ನಿಮಗೂ ಕರೆ ಬರಬಹುದು: ವಿಜಯ್ ದೇವರಕೊಂಡ ಎಚ್ಚರಿಕೆ

ಅನಿಷಾಗೆ ಈಗ ಒಂದು ಒಳ್ಳೆಯ ಆಫರ್ ಬಂದಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರೋಬ್ಬರಿ 86 ಸಾವಿರ ಹಿಂಬಾಲಕರು ಇದ್ದಾರೆ. ‘ಗೀತ ಗೋವಿಂದಂ’ ಅವರ ಬಣ್ಣದ ಬದುಕನ್ನೇ ಬದಲಾಯಿಸಿದೆ ಎಂದರೂ ತಪ್ಪಾಗಲಾರದು. ಇನ್ನು, ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಕೂಡ ‘ಗೀತ ಗೋವಿಂದಂ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sun, 19 January 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us