Sign In

By signing in or creating an account, you agree with Associated Broadcasting Company's Terms & Conditions and Privacy Policy.

AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು

ಎ.ಆರ್.ರೆಹಮಾನ್ ಪುತ್ರ ಎಆರ್ ಅಮೀನ್ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು
ಎಆರ್ ಅಮೀನ್
Follow us
ಮಂಜುನಾಥ ಸಿ.
|

Updated on:Mar 05, 2023 | 8:29 PM

ಆಸ್ಕರ್ (Oscar) ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahaman) ಪುತ್ರ ಎಆರ್ ಅಮೀನ್ (AR Ameen) ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು, ಆ ಶಾಕ್​ನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

”ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಹಾಗೂ ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಹಾರೈಕೆಗಳಿಂದಲೇ ನಾನು ಇಂದು ಜೀವಂತವಾಗಿದ್ದೇನೆ. ಮೂರು ದಿನಗಳ ಹಿಂದೆ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ತಂಡ ವಹಿಸಿದ್ದ ಸುರಕ್ಷತಾ ಕ್ರಮಗಳ ಮೇಲೆ ನಂಬಿಕೆ ಇಟ್ಟು ವೇದಿಕೆ ಏರಿ ಕ್ಯಾಮೆರಾ ನೋಡುತ್ತಾ ನಾನು ನನ್ನ ಪರ್ಫಾಮೆನ್ಸ್ ಕಡೆ ಗಮನ ವಹಿಸಿದ್ದೆ. ಆಗ ಕ್ರೇನ್​ಗೆ ಕಟ್ಟಲಾಗಿದ್ದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದವು. ಕೆಲವು ಇಂಚು ಹಿಂದೆ-ಮುಂದೆ ಅಥವಾ ಕೆಲವು ಸೆಕೆಂಡ್ ತಡವಾಗಿದ್ದರೂ ಆ ಕಬ್ಬಿಣದ ರಿಗ್, ಗಾಜಿನ ಜೂಮರ್ ನೇರವಾಗಿ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈ ಅಪಘಾತದ ಆಘಾತದಿಂದ ನಾನು ಹಾಗೂ ನನ್ನ ತಂಡ ಶಾಕ್​ಗೆ ಒಳಗಾಗಿದ್ದೇವೆ. ಅದರಿಂದ ಹೊರಬರಲು ನಮಗೆ ಆಗುತ್ತಿಲ್ಲ ಎಂದು ಅಮೀನ್ ಬರೆದುಕೊಂಡಿದ್ದಾರೆ.

ಘಟನೆಯ ಕೆಲವು ಚಿತ್ರಗಳನ್ನು ಅಮೀನ್ ಹಂಚಿಕೊಂಡಿದ್ದು, ಕ್ರೇನ್​ಗೆ ಕಟ್ಟಲಾಗಿದ್ದ ಕಬ್ಬಿಣದ ಸ್ಟ್ಯಾಂಡ್ ವೇದಿಕೆ ಮೇಲೆ ಬಿದ್ದಿದೆ. ಅದನ್ನು ಹಿಡಿದುಕೊಂಡಿದ್ದ ಕ್ರೇನ್​ನ ಭಾಗವೂ ವೇದಿಕೆಗೆ ಬಿದ್ದಿದೆ. ಕ್ರೇನ್​ಗೆ ಕಟ್ಟಲಾಗಿದ್ದ ಗಾಜಿನ ಜೂಮರ್​ಗಳು ಸಹ ವೇದಿಕೆ ಮೇಲೆ ಬಿದ್ದು ಪುಡಿ-ಪುಡಿ ಆಗಿವೆ. ಘಟನೆಗೆ ಮುಂಚಿನ ಹಾಗೂ ಘಟನೆಯ ಬಳಿಕದ ಚಿತ್ರಗಳನ್ನು ಅಮೀನ್ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಅಮೀನ್ ಹಾಡುಗಾರರಾಗಿದ್ದು ಈಗಾಗಲೇ ಮೂರು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತಂದೆ ಎ.ಆರ್.ರೆಹಮಾನ್ ಸಂಗೀತ ನೀಡಿರುವ ಒಂದು ಇಂಗ್ಲೀಷ್ ಸಿನಿಮಾ ಸೇರಿದಂತೆ ತಮಿಳು, ಹಿಂದಿ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಬೇರೆ ಸಂಗೀತ ನಿರ್ದೇಶಕರ ಹಾಡುಗಳಿಗೂ ದನಿ ನೀಡಿದ್ದಾರೆ. ಲೈವ್ ಕಾನ್ಸರ್ಟ್​ಗಳನ್ನು ಸಹ ನೀಡುತ್ತಾರೆ. ಇದೀಗ ತಮ್ಮದೇ ಹೊಸ ಆಲ್ಬಂಗಾಗಿ ಚಿತ್ರೀಕರಣ ಮಾಡುವಾಗ ಈ ಅವಘಡ ಸಂಭವಿಸಿದೆ.

ಅಮೀನ್​ರ ಪೋಸ್ಟ್​ಗೆ ಸ್ಪಂದಿಸಿರುವ ಕೆಲವು ಸೆಲೆಬ್ರಿಟಿಗಳು ದೇವರಿಗೆ ಧನ್ಯವಾದ ಹೇಳಿದ್ದಾರೆ. ಹೆಚ್ಚು ಜಾಗರೂಕರಾಗಿರುವಂತೆ ಸಲಹೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sun, 5 March 23

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ