AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು

ಎ.ಆರ್.ರೆಹಮಾನ್ ಪುತ್ರ ಎಆರ್ ಅಮೀನ್ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು
ಎಆರ್ ಅಮೀನ್
ಮಂಜುನಾಥ ಸಿ.
|

Updated on:Mar 05, 2023 | 8:29 PM

Share

ಆಸ್ಕರ್ (Oscar) ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahaman) ಪುತ್ರ ಎಆರ್ ಅಮೀನ್ (AR Ameen) ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು, ಆ ಶಾಕ್​ನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

”ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಹಾಗೂ ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಹಾರೈಕೆಗಳಿಂದಲೇ ನಾನು ಇಂದು ಜೀವಂತವಾಗಿದ್ದೇನೆ. ಮೂರು ದಿನಗಳ ಹಿಂದೆ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ತಂಡ ವಹಿಸಿದ್ದ ಸುರಕ್ಷತಾ ಕ್ರಮಗಳ ಮೇಲೆ ನಂಬಿಕೆ ಇಟ್ಟು ವೇದಿಕೆ ಏರಿ ಕ್ಯಾಮೆರಾ ನೋಡುತ್ತಾ ನಾನು ನನ್ನ ಪರ್ಫಾಮೆನ್ಸ್ ಕಡೆ ಗಮನ ವಹಿಸಿದ್ದೆ. ಆಗ ಕ್ರೇನ್​ಗೆ ಕಟ್ಟಲಾಗಿದ್ದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದವು. ಕೆಲವು ಇಂಚು ಹಿಂದೆ-ಮುಂದೆ ಅಥವಾ ಕೆಲವು ಸೆಕೆಂಡ್ ತಡವಾಗಿದ್ದರೂ ಆ ಕಬ್ಬಿಣದ ರಿಗ್, ಗಾಜಿನ ಜೂಮರ್ ನೇರವಾಗಿ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈ ಅಪಘಾತದ ಆಘಾತದಿಂದ ನಾನು ಹಾಗೂ ನನ್ನ ತಂಡ ಶಾಕ್​ಗೆ ಒಳಗಾಗಿದ್ದೇವೆ. ಅದರಿಂದ ಹೊರಬರಲು ನಮಗೆ ಆಗುತ್ತಿಲ್ಲ ಎಂದು ಅಮೀನ್ ಬರೆದುಕೊಂಡಿದ್ದಾರೆ.

ಘಟನೆಯ ಕೆಲವು ಚಿತ್ರಗಳನ್ನು ಅಮೀನ್ ಹಂಚಿಕೊಂಡಿದ್ದು, ಕ್ರೇನ್​ಗೆ ಕಟ್ಟಲಾಗಿದ್ದ ಕಬ್ಬಿಣದ ಸ್ಟ್ಯಾಂಡ್ ವೇದಿಕೆ ಮೇಲೆ ಬಿದ್ದಿದೆ. ಅದನ್ನು ಹಿಡಿದುಕೊಂಡಿದ್ದ ಕ್ರೇನ್​ನ ಭಾಗವೂ ವೇದಿಕೆಗೆ ಬಿದ್ದಿದೆ. ಕ್ರೇನ್​ಗೆ ಕಟ್ಟಲಾಗಿದ್ದ ಗಾಜಿನ ಜೂಮರ್​ಗಳು ಸಹ ವೇದಿಕೆ ಮೇಲೆ ಬಿದ್ದು ಪುಡಿ-ಪುಡಿ ಆಗಿವೆ. ಘಟನೆಗೆ ಮುಂಚಿನ ಹಾಗೂ ಘಟನೆಯ ಬಳಿಕದ ಚಿತ್ರಗಳನ್ನು ಅಮೀನ್ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಅಮೀನ್ ಹಾಡುಗಾರರಾಗಿದ್ದು ಈಗಾಗಲೇ ಮೂರು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತಂದೆ ಎ.ಆರ್.ರೆಹಮಾನ್ ಸಂಗೀತ ನೀಡಿರುವ ಒಂದು ಇಂಗ್ಲೀಷ್ ಸಿನಿಮಾ ಸೇರಿದಂತೆ ತಮಿಳು, ಹಿಂದಿ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಬೇರೆ ಸಂಗೀತ ನಿರ್ದೇಶಕರ ಹಾಡುಗಳಿಗೂ ದನಿ ನೀಡಿದ್ದಾರೆ. ಲೈವ್ ಕಾನ್ಸರ್ಟ್​ಗಳನ್ನು ಸಹ ನೀಡುತ್ತಾರೆ. ಇದೀಗ ತಮ್ಮದೇ ಹೊಸ ಆಲ್ಬಂಗಾಗಿ ಚಿತ್ರೀಕರಣ ಮಾಡುವಾಗ ಈ ಅವಘಡ ಸಂಭವಿಸಿದೆ.

ಅಮೀನ್​ರ ಪೋಸ್ಟ್​ಗೆ ಸ್ಪಂದಿಸಿರುವ ಕೆಲವು ಸೆಲೆಬ್ರಿಟಿಗಳು ದೇವರಿಗೆ ಧನ್ಯವಾದ ಹೇಳಿದ್ದಾರೆ. ಹೆಚ್ಚು ಜಾಗರೂಕರಾಗಿರುವಂತೆ ಸಲಹೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sun, 5 March 23

ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ