AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಜತೆ ವಿವಾಹಿತ ಹೀರೋ ಸುತ್ತಾಟ; ರಸ್ತೆಯಲ್ಲಿ ರಂಪ ಮಾಡಿ ನಟಿಗೆ ಥಳಿಸಿದ ಪತ್ನಿ; ವಿಡಿಯೋ ವೈರಲ್​

Prakruti Mishra Viral Video: ಬಾಬುಶಾನ್​ ಮೊಹಂತಿ ಮತ್ತು ಪ್ರಕೃತಿ ಮಿಶ್ರಾ ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಟನ ಪತ್ನಿ ಬಂದು ಅಡ್ಡಗಟ್ಟಿದ್ದಾರೆ. ಅಲ್ಲದೇ ಪ್ರಕೃತಿ ಮೇಲೆ ಅವರು ಹಲ್ಲೆ ಮಾಡಿದ್ದಾರೆ.

ನಟಿ ಜತೆ ವಿವಾಹಿತ ಹೀರೋ ಸುತ್ತಾಟ; ರಸ್ತೆಯಲ್ಲಿ ರಂಪ ಮಾಡಿ ನಟಿಗೆ ಥಳಿಸಿದ ಪತ್ನಿ; ವಿಡಿಯೋ ವೈರಲ್​
ನಟಿ ಮೇಲೆ ಹಲ್ಲೆಯ ವೈರಲ್​ ವಿಡಿಯೋ
TV9 Web
| Edited By: |

Updated on:Jul 25, 2022 | 8:21 AM

Share

ಸೆಲೆಬ್ರಿಟಿಗಳ ಸಂಸಾರದ ಗಲಾಟೆ ತುಂಬ ವೇಗವಾಗಿ ಜಗಜ್ಜಾಹೀರಾಗುತ್ತದೆ. ಈ ವಿಚಾರದಲ್ಲಿ ನಟ-ನಟಿಯರು ಎಷ್ಟು ಹುಷಾರಾಗಿದ್ದರೂ ಸಾಲದು. ಕೆಲವೇ ದಿನಗಳ ಹಿಂದೆ ತೆಲುಗು ನಟ ನರೇಶ್​ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವೆ ಇಂಥ ಜಟಾಪಟಿ ಏರ್ಪಟ್ಟಿತ್ತು. ನರೇಶ್​ ಜೊತೆ ಪವಿತ್ರಾ ಲೋಕೇಶ್​ ಅವರಿಗೆ ಅಫೇರ್​ ಇದೆ ಎಂದು ರಮ್ಯಾ ಆರೋಪಿಸಿದ್ದೂ ಅಲ್ಲದೇ ಚಪ್ಪಲಿ ಹಿಡಿದು ಹೊಡೆದಾಟಕ್ಕೆ ನಿಂತಿದ್ದರು. ಈಗ ಒಡಿಯಾ ಚಿತ್ರರಂಗದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ನಟ ಬಾಬುಶಾನ್​ ಮೊಹಂತಿ (Babushaan Mohanty) ಅವರು ನಟಿ ಪ್ರಕೃತಿ ವಿಶ್ರಾ (Prakruti Mishra) ಜೊತೆ ಸುತ್ತಾಡುತ್ತಿರುವುದನ್ನು ಖಂಡಿಸಿ ಅವರ ಪತ್ನಿ ತೃಪ್ತಿ ಅವರು ರಂಪಾಟ ಮಾಡಿದ್ದಾರೆ. ಆ ವಿಡಿಯೋ (Prakruti Mishra Viral Video) ಸಖತ್​ ವೈರಲ್​ ಆಗಿದೆ.

ಒಡಿಯಾ ಸಿನಿಮಾ ಮತ್ತು ಹಿಂದಿ ಕಿರುತೆರೆಯಲ್ಲಿ ನಟಿ ಪ್ರಕೃತಿ ಮಿಶ್ರಾ ಅವರು ಫೇಮಸ್​ ಆಗಿದ್ದಾರೆ. ಅವರ ಜೊತೆ ಸಿನಿಮಾವೊಂದರಲ್ಲಿ ಬಾಬುಶಾನ್​ ಮೊಂಹತಿ ನಟಿಸಿದ್ದಾರೆ. ಒಟ್ಟಿಗೆ ನಟಿಸಿದ ಬಳಿಕ ಇಬ್ಬರ ನಡುವಿನ ಸ್ನೇಹ ಹೆಚ್ಚಿದೆ. ಇದರಿಂದ ಬಾಬುಶಾನ್​ ಪತ್ನಿ ತೃಪ್ತಿಯ ನಿದ್ದೆ ಕೆಟ್ಟಿದೆ. ಬಾಬುಶಾನ್​ ಮತ್ತು ಪ್ರಕೃತಿ ಮಿಶ್ರಾ ನಡುವಿನ ಸಂಬಂಧ ಅಂತ್ಯಗೊಳಿಸಲು ತೃಪ್ತಿ ಅವರು ನಡುರಸ್ತೆಯಲ್ಲಿ ನಿಂತು ಕೈ-ಕೈ ಮಿಲಾಯಿಸಿದ್ದಾರೆ.

ಇದನ್ನೂ ಓದಿ
Image
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​
Image
ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
Image
ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​

ಬಾಬುಶಾನ್​ ಮೊಹಂತಿ ಮತ್ತು ಪ್ರಕೃತಿ ಮಿಶ್ರಾ ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತೃಪ್ತಿ ಅವರು ಬಂದು ಅಡ್ಡಗಟ್ಟಿದ್ದಾರೆ. ಅಲ್ಲದೇ ಪ್ರಕೃತಿ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ಬಾಬುಶಾನ್​ ವಿಚಲಿತರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ನನ್ನ ಕುಟುಂಬದವರಿಗೆ ನೋವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ಕುಟುಂಬದವರಿಗೆ ಇಷ್ಟ ಇಲ್ಲ ಎಂದರೆ ನಾನು ಪ್ರಕೃತಿ ಜತೆ ಸಿನಿಮಾ ಮಾಡಲ್ಲ. ಅನಿವಾರ್ಯವಾದರೆ, ಭವಿಷ್ಯದಲ್ಲಿ ಯಾವ ನಟಿಯ ಜೊತೆಗೂ ಸಿನಿಮಾ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಪ್ರಕೃತಿ ಎಂಟ್ರಿ ಆದ ಬಳಿಕ ಬಿರುಕು ಮೂಡಿತು’ ಎಂದು ತೃಪ್ತಿ ಹೇಳಿದ್ದಾರೆ. ಹಲ್ಲೆ ಮಾಡಿದ್ದಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published On - 8:21 am, Mon, 25 July 22

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ