AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಟರ್ನಲ್’ ಟೀಸರ್, ಹೊಸದೆನೂ ಇಲ್ಲ

Bahubali The Eternal war: ‘ಬಾಹುಬಲಿ’ ಸಿನಿಮಾದ ಎಲ್ಲ ಪಾತ್ರಗಳು ನೆನಪುಳಿಯುವಂಥಹವು. ಇದೀಗ ‘ಬಾಹುಬಲಿ’ ಕತೆಯನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತವಾಗಲು ಬಿಡದೆ, ನಿರ್ಮಾಣ ಸಂಸ್ಥೆಯು ಇನ್ನಷ್ಟು ಹಿಗ್ಗಿಸಲು ಮುಂದಾಗಿದ್ದು ‘ಬಾಹುಬಲಿ: ದಿ ಎಟರ್ನಲ್’ ಹೆಸರಿನ ಮತ್ತೊಂದು ಸಿನಿಮಾ ನಿರ್ಮಿಸಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ.

ಸದ್ದಿಲ್ಲದೆ ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಟರ್ನಲ್’ ಟೀಸರ್, ಹೊಸದೆನೂ ಇಲ್ಲ
Bahubali The Eternal War
ಮಂಜುನಾಥ ಸಿ.
|

Updated on: Jun 04, 2026 | 8:59 AM

Share

ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಬರೆದ ಸಿನಿಮಾ ‘ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಸಿನಿಮಾ. ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾಗಳು ಇವು. ‘ಬಾಹುಬಲಿ’ ಸಿನಿಮಾದ ಎಲ್ಲ ಪಾತ್ರಗಳು ನೆನಪುಳಿಯುವಂಥಹವು. ಇದೀಗ ‘ಬಾಹುಬಲಿ’ ಕತೆಯನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತವಾಗಲು ಬಿಡದೆ, ನಿರ್ಮಾಣ ಸಂಸ್ಥೆಯು ಇನ್ನಷ್ಟು ಹಿಗ್ಗಿಸಲು ಮುಂದಾಗಿದ್ದು ‘ಬಾಹುಬಲಿ: ದಿ ಎಟರ್ನಲ್’ ಹೆಸರಿನ ಮತ್ತೊಂದು ಸಿನಿಮಾ ನಿರ್ಮಿಸಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ.

‘ಬಾಹುಬಲಿ: ದಿ ಎಟರ್ನಲ್’ ಅನಿಮೇಷನ್ ಸಿನಿಮಾ ಆಗಿದ್ದು, ನಿನ್ನೆ ಸಂಜೆ, ಎಆರ್ಕೆ (ಆರ್ಕ್) ಮೀಡಿಯಾ ಟೀಸರ್ ಬಿಡುಗಡೆ ಮಾಡಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅನಿಮೇಷನ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಡುಗಡೆ ಮಾಡಿದ್ದ ದೃಶ್ಯಗಳನ್ನೇ ಸೇರಿಸಿ ಈ ಟೀಸರ್ ಬಿಡುಗಡೆ ಮಾಡಲಾಗಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.

‘ಬಾಹುಬಲಿ: ದಿ ಎಟರ್ನಲ್’ ಸಿನಿಮಾವು, ಅಮರೇಂದ್ರ ಬಾಹುಬಲಿ, ಬಲ್ಲಾಳದೇವನಿಂದ ಕೊಲ್ಲಲ್ಪಟ್ಟ ಬಳಿಕ ಬೇರೆ ಲೋಕಕ್ಕೆ ಹೋಗಿ ಅಲ್ಲಿ ದೇವತೆಗಳ ಜೊತೆಗೆ ಯುದ್ಧ ಮಾಡುವ ಕತೆಯನ್ನು ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಬಾಹುಬಲಿಯು ಪಾತಾಳ ಮಂಡಲಂ ಲೋಕದಲ್ಲಿ ಶಿವನ ಆರಾಧನೆಯಲ್ಲಿ ತೊಡಗಿದ್ದಾನೆ. ಆದರೆ ‘ಬಾಹುಬಲಿ’ಯನ್ನು ವಶಕ್ಕೆ ಪಡೆಯಲು ಇಂದ್ರದೇವ ಬರುತ್ತಾನೆ ಆದರೆ ಇಂದ್ರನನ್ನು, ಬಾಹುಬಲಿಯ ಗೆಳೆಯ ವಿಹಾಸುರ ಎದುರಿಸುತ್ತಾನೆ. ಬೀಕರ ಯುದ್ಧ ನಡೆದು ವಿಹಾಸುರ ಸೋಲುತ್ತಾನೆ. ಬಳಿಕ ಬಾಹುಬಲಿ, ಆನೆಗಳ ರಥದ ಮೇಲೆ ಕುಳಿತು ಬಂದು ಇಂದ್ರನನ್ನೇ ಎದುರಿಸುತ್ತಾನೆ.

ಈ ಅನಿಮೇಟೆಡ್ ಟೀಸರ್ ಅದ್ಭುತವಾಗಿದೆ. ಅದ್ಭುತವಾದ ಆಕ್ಷನ್ ಟೀಸರ್​​ನಲ್ಲಿದೆ. ಆದರೆ ಈಗ ಟೀಸರ್​​ನಲ್ಲಿ ಇರುವ ದೃಶ್ಯಗಳನ್ನು ಕೆಲ ತಿಂಗಳುಗಳ ಹಿಂದೆ ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಈಗ ಟೀಸರ್​​ನಲ್ಲಿಯೇ ಅದೇ ದೃಶ್ಯಗಳನ್ನು ಸೇರಿಸಲಾಗಿದೆ. ಅಂದಹಾಗೆ ಸಿನಿಮಾನಲ್ಲಿ ಬಾಹುಬಲಿ ಪಾತ್ರಕ್ಕೆ ಖುದ್ದು ಪ್ರಭಾಸ್ ಧ್ವನಿ ನೀಡಿದ್ದಾರೆ. ರಮ್ಯಾ ಕೃಷ್ಣ ಸಹ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್

‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾವನ್ನು ಇಶಾನ್ ಶುಕ್ಲ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರೆಸೆಂಟ್ ಮಾಡುತ್ತಿರುವುದು ರಾಜಮೌಳಿ, ನಿರ್ಮಾಣ ಆರ್ಕ್ ಮೀಡಿಯಾ, ಸಂಗೀತ ನೀಡಿರುವುದು ಎಂಎಂ ಕೀರವಾಣಿ ಅವರು. ಚಿತ್ರಕತೆ ಬರೆದಿರುವುದು ಸ್ಕಾಟ್ ಮೊಸೀಯರ್ ಸಿನಿಮಾ ಮುಂದಿನ ವರ್ಷ ಅಂದರೆ 2027ರಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ