ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು

| Updated By: ಮದನ್​ ಕುಮಾರ್​

Updated on: Jul 09, 2021 | 7:24 AM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ.

ಚಕ್ರವರ್ತಿ-ಪ್ರಶಾಂತ್​ ಜಗಳದಲ್ಲಿ ಕೇಳಿದ್ದು ಕೇವಲ ಬೀಪ್​ ಶಬ್ದಗಳು
ಚಕ್ರವರ್ತಿ ಚಂದ್ರಚೂಡ್​-ಪ್ರಶಾಂತ್​ ಸಂಬರಗಿ
Follow us on

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ನಲ್ಲಿ ಮನೆ ಎರಡು ಭಾಗವಾಗಿದೆ. ಸದಾ ಗುಂಪುಗಾರಿಕೆ ಎನ್ನುವ ಆರೋಪ ಹೊರಿಸುತ್ತಿದ್ದ ಪ್ರಶಾಂತ್​ ಸಂಬರಗಿ ಅವರೇ ಗುಂಪೊಂದನ್ನು ಕಟ್ಟಿದ್ದಾರೆ. ಪ್ರಶಾಂತ್​, ಚಕ್ರರ್ತಿ ಚಂದ್ರಚೂಡ್​ ಹಾಗೂ ಶಮಂತ್​ ಈ ಗುಂಪಿನ ಸದಸ್ಯರು. ಇವರು ಮನೆಯ ಮೊದಲ ಮಹಿಳಾ ಕ್ಯಾಪ್ಟನ್​ ದಿವ್ಯಾ ಉರುಡುಗ ವಿರುದ್ಧ ತಿರುಗಿ ಬೀಳೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇವರ ನಡುವೆಯೇ ಈಗ ಬಿರುಕು ಕಾಣಿಸಿಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗಿದ್ದಾರೆ. ಈಗ ಕ್ಯಾಪ್ಟನ್​ ಆಗಿರುವ ದಿವ್ಯಾ ಪ್ರತೀ ಟಾಸ್ಕ್​​ನಲ್ಲಿ ಅರವಿಂದ್ ಪರ ವಹಿಸಿಕೊಂಡು ಮಾತನಾಡುತ್ತಾರೆ ಎನ್ನುವ ಆರೋಪ ಇದೆ. ಜುಲೈ 8ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಟಂಕಶಾಲೆ ಹೆಸರಿನ ಟಾಸ್ಕ್​ನಲ್ಲಿ ಶಮಂತ್​ ತನಗೆ ಮೋಸ ಆಗಿದೆ ಎಂದು ಆರೋಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಏರು ಧ್ವನಿಯಲ್ಲೇ ಮಾತನಾಡಿದರು. ಆದರೆ, ಅರವಿಂದ್ ಪರ ಪ್ರಶಾಂತ್​​ ಮಾತನಾಡಿಲ್ಲ.

ಇದಾದ ಬೆನ್ನಲ್ಲೇ ಅರವಿಂದ್​ ಅವರಿಂದ ರಘುಗೆ ಮೋಸ ಆಗಿದೆ ಎನ್ನುವ ವಿಚಾರವನ್ನು ಪ್ರಶಾಂತ್​ ಪ್ರಸ್ತಾಪಪಡಿಸಿದರು. ಈ ವಿಚಾರ ಅಷ್ಟು ಪ್ರಭಾವ ಬೀರಿಲ್ಲ. ಈ ಬಗ್ಗೆ ಚಕ್ರವರ್ತಿ ಅವರು ಪ್ರಶಾಂತ್​ಗೆ ಬುದ್ಧಿವಾದ ಹೇಳಿದರು. ‘ಬಿಗ್​ ಬಾಸ್​ ಮನೆಯಲ್ಲಿ ಉಳಿದವರೆಲ್ಲರೂ ಒಂದು. ನಾವಿಬ್ಬರೇ ಬೇರೆ. ನಿನ್ನ ಅಡ್ವೈಸ್​ಗಳನ್ನು ಎಲ್ಲರೂ ಹೇಳಿಕೊಂಡು ನಗುತ್ತಾರೆ. ಇಡೀ ಮನೆಯಲ್ಲಿ ನಾನು-ನೀನು ಹೋದರೆ ಸಾಕು ಎಂಬಂತಾಗಿದೆ’ ಎಂದು ಬಣ್ಣಿಸೋಕೆ ಹೋದರು.

ಇದಾದ ಬೆನ್ನಲ್ಲೇ ಚಕ್ರವರ್ತಿ ಹಾಗೂ ಪ್ರಶಾಂತ್​ ನಡುವೆ ಕಿತ್ತಾಟ ಆರಂಭವಾಯಿತು. ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು. ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು.

‘ಪ್ರಶಾಂತ್ ಸರ್​ ನಾನು ನಿಮ್ಮೊಂದಿಗೆ ಇನ್ನು ಮಾತನ್ನೇ ಆಡುವುದಿಲ್ಲ. ನೀನು ಮಾಡಿರೋದು ತಪ್ಪಾದ ಕೆಲಸ. ಗೆಳೆಯರ ನಡುವೆ ನಡೆದ ಮಾತನ್ನು ಮೂರನೇಯವನಿಗೆ ಹೇಳೋದು ದ್ರೋಹದ ಕೆಲಸ’ ಎಂದು ಹೇಳುವ ಮೂಲಕ ಪ್ರಶಾಂತ್​ ಜತೆ ಮಾತನಾಡುವುದಿಲ್ಲ ಎಂದರು ಚಕ್ರವರ್ತಿ.

ಇದನ್ನೂ ಓದಿ:

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

‘ನಾನು ಒಬ್ಬ ಅಪ್ಪ-ಅಮ್ಮನಿಗೆ ಹುಟ್ಟಿದೀನಿ, ಸರಿಯಾಗಿ ನಡ್ಕೋತೀನಿ’; ಪ್ರಶಾಂತ್​-ಚಕ್ರವರ್ತಿ ಮಧ್ಯೆ ಮತ್ತೆ ಹತ್ತಿತು ದ್ವೇಷದ ಬೆಂಕಿ