Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ಸುಂದರವಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ? ಮಂಜು ಬಗ್ಗೆ ದಿವ್ಯಾ ಮನದಲ್ಲಿ ಹೊಸ ಪ್ರಶ್ನೆ!

Bigg Boss Kannada: ನೋಡೋಕೆ ಇಷ್ಟು ಚೆನ್ನಾಗಿರುವ ಹುಡುಗಿಯ ಹಿಂದೆ ಹುಡುಗ ಬರಬೇಕು. ಆದರೆ ನಾನು ಯಾಕೆ ಹೀಗೆ ಆಗಿದ್ದೇನೆ ಎಂದು ದಿವ್ಯಾ ಸುರೇಶ್​ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟು ಸುಂದರವಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ? ಮಂಜು ಬಗ್ಗೆ ದಿವ್ಯಾ ಮನದಲ್ಲಿ ಹೊಸ ಪ್ರಶ್ನೆ!
ದಿವ್ಯಾ ಸುರೇಶ್​ - ಮಂಜು ಪಾವಗಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 10, 2021 | 6:39 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಅವರ ಲವ್​ ಟ್ರ್ಯಾಕ್​ ಎಲ್ಲೆಲ್ಲಿಗೋ ಹೋಗುತ್ತಿದೆ. ಸದಾ ಕಾಲ ಮಂಜ ಮಂಜ ಎಂದು ದಿವ್ಯಾ ಜಪ ಮಾಡುತ್ತಾರೆ. ಇಬ್ಬರೂ ಜೊತೆಯಾಗಿಯೇ ಹೆಚ್ಚು ಕಾಲ ಕಳೆಯುತ್ತಾರೆ. ನೋಡುವವರ ಕಣ್ಣು ಕುಕ್ಕುವ ರೀತಿಯಲ್ಲಿ ಈ ಜೋಡಿ ನಡೆದುಕೊಳ್ಳುತ್ತದೆ. ಒಟ್ಟಾರೆ ಇವರಿಬ್ಬರ ಕುರಿತು ಸದಾ ಒಂದಿಲ್ಲೊಂದು ಚರ್ಚೆ ನಡೆಯುವಂತಾಗಿದೆ. ವೀಕೆಂಡ್​ನಲ್ಲಿ ಸುದೀಪ್​ ಕೂಡ ಈ ವಿಚಾರ ಮಾತನಾಡಿದ್ದರು. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ಪ್ರಿಯಾಂಕಾ ತಿಮ್ಮೇಶ್​ ಕೂಡ ಮಂಜು-ದಿವ್ಯಾ ಲವ್​ಸ್ಟೋರಿಯನ್ನೇ ಒತ್ತಿ ಹೇಳಿದ್ದಾರೆ.

ನೀವು ಯಾವಾಗಲೂ ಮಂಜು ಪಾವಗಡ ಜೊತೆಗೆ ಕಾಲ ಕಳೆಯುತ್ತೀರಿ ಎಂದು ದಿವ್ಯಾಗೆ ನೇರವಾಗಿ ಹೇಳಿದ್ದಾರೆ ಪ್ರಿಯಾಂಕಾ. ಅದರಲ್ಲಿ ತಪ್ಪೇನಿದೆ? ಬೇರೆ ಸ್ಪರ್ಧಿಗಳೂ ಜೊತೆಯಾಗಿ ಇರುತ್ತಾರಲ್ಲ? ನಮ್ಮಿಬ್ಬರದ್ದು ಮಾತ್ರ ಯಾಕೆ ಹೈಲೈಟ್​ ಆಗುತ್ತಿದೆ ಎಂದು ದಿವ್ಯಾ ಮರುಪ್ರಶ್ನೆ ಹಾಕಿದ್ದಾರೆ. ಆಗ ದಿವ್ಯಾಗೆ ಅರ್ಥ ಮಾಡಿಸುವ ಸಲುವಾಗಿ ಪ್ರಿಯಾಂಕಾ ಎಲ್ಲವನ್ನೂ ಬಿಡಿಸಿ ಹೇಳಿದ್ದಾರೆ.

‘ಬೇರೆ ಸ್ಪರ್ಧಿಗಳು ಜೊತೆಗಿರುತ್ತಾರೆ ನಿಜ. ಆದರೆ ನೀವಿಬ್ಬರು ಮೂಲೆಗೆ ಹೋಗಿ ಪ್ರತ್ಯೇಕವಾಗಿ ಮಾತನಾಡುತ್ತಾ ಇರುತ್ತೀರಿ. ಇಷ್ಟು ದಿನ ದಿವ್ಯಾ ಮಂಜನ ಬಾಲ ಎಂಬ ಮಾತು ಬಂದಿದೆಯೇ ಹೊರತು, ಮಂಜು ದಿವ್ಯಾಳ ಬಾಲ ಅಂತ ಯಾರೂ ಹೇಳಿಲ್ಲ. ಇಷ್ಟು ಸುಂದರವಾಗಿರುವ ನಿಮ್ಮ ಹಿಂದೆ ಅವರು ಬರಬೇಕಿತ್ತು. ಆದರೆ ಇಲ್ಲಿ ಬೇರೆ ರೀತಿ ಆಗಿದೆ’ ಎಂದು ದಿವ್ಯಾ ಸುರೇಶ್​ ತಲೆಗೆ ಪ್ರಿಯಾಂಕಾ ಹುಳ ಬಿಟ್ಟಿದ್ದಾರೆ. ಇದರ ಬಗ್ಗೆ ದಿವ್ಯಾ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್​ ಹೇಳಿದ ಈ ಮಾತನ್ನು ತಮ್ಮಲ್ಲಿಯೇ ಇಟ್ಟುಕೊಂಡು ಸುಮ್ಮನಾಗುವ ಬದಲು ಮಂಜು ಬಳಿ ಹೋಗಿ ದಿವ್ಯಾ ಚರ್ಚೆ ಮಾಡಿದ್ದಾರೆ. ತಮಗೆ ಯಾಕೆ ಹೀಗೆ ಆಗುತ್ತಿದೆ ಅಂತ ಮಂಜು ಬಳಿ ಗೋಳು ತೋಡಿಕೊಂಡಿದ್ದಾರೆ. ‘ಪ್ರಿಯಾಂಕಾ ಹೇಳಿದ್ದು ನನಗೆ ಸರಿ ಎನಿಸಿತು. ಅವರ ಮಾತಿನಿಂದ ಖುಷಿ ಆಯಿತು. ಎಲ್ಲ ಸಾಮರ್ಥ್ಯ ಇದ್ದರೂ ಕೂಡ ನಾನು ಕೆಳಗೆ ಹೋಗುತ್ತಿದ್ದೇನೆ. ನೋಡೋಕೆ ಇಷ್ಟು ಚೆನ್ನಾಗಿರುವ ಹುಡುಗಿಯ ಹಿಂದೆ ಹುಡುಗ ಬರಬೇಕು. ಆದರೆ ನಾನು ಯಾಕೆ ಹೀಗೆ ಆಗಿದ್ದೇನೆ ಅಂತ ನನಗೆ ಆಲೋಚನೆ ಮೂಡಿತು’ ಎಂದು ದಿವ್ಯಾ ಹೇಳಿದ್ದಾರೆ.

ಇದನ್ನೆಲ್ಲ ಕೇಳಿಸಿಕೊಂಡು ಮಂಜು ಸುಮ್ಮನಾಗಿದ್ದಾರೆ. ಬೇರೆ ಎಲ್ಲ ವಿಚಾರದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರೇ ಹೊರತು, ‘ಇಷ್ಟು ಚೆನ್ನಾಗಿರುವ ನಾನು ನಿನ್ನ ಹಿಂದೆ ಯಾಕೆ ಬಿದ್ದೆ’ ಎಂದು ದಿವ್ಯಾ ಹೇಳಿದ ಮಾತಿಗೆ ಮಂಜು ಉತ್ತರ ನೀಡಿಲ್ಲ. ದಿವ್ಯಾ ನೇರವಾಗಿ ಇಂಥ ಮಾತು ಹೇಳಿದ ಮೇಲೆ ಮಂಜು ಭಾವನೆಗಳು ಬದಲಾಗುವ ಸಾಧ್ಯತೆ ಹೆಚ್ಚಿದೆ. ಪ್ರೀತಿ-ಪ್ರೇಮವನ್ನೆಲ್ಲ ಬದಿಗಿಟ್ಟು ಅವರು ಇನ್ಮುಂದೆ ಬರೀ ಆಟದ ಕಡೆಗೆ ಗಮನ ಹರಿಸಿದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು

(Bigg Boss Kannada 8: Divya Suresh becomes introspective about her relationship with Manju Pavagada in BBK8)

ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ