AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Thimmesh: ಮೊದಲ ದಿನವೇ ಶಮಂತ್ ಮಾನ ಹರಾಜು ಹಾಕಿದ ಪ್ರಿಯಾಂಕಾ! ಒಂದೇ ಮಾತಿಗೆ ಬ್ರೋ ಗೌಡ ಸೈಲೆಂಟ್

Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಸ್ಪರ್ಧೆ ನೀಡುತ್ತ ಬಂದಿದ್ದವರು ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎದುರಿನಲ್ಲಿ ಹೆಣಸಾಡಬೇಕಿದೆ. ತಮ್ಮ ಇಮೇಜ್ ಉಳಿಸಿಕೊಳ್ಳಲು ಕಷ್ಟಪಡಬೇಕಿದೆ.

Priyanka Thimmesh: ಮೊದಲ ದಿನವೇ ಶಮಂತ್ ಮಾನ ಹರಾಜು ಹಾಕಿದ ಪ್ರಿಯಾಂಕಾ! ಒಂದೇ ಮಾತಿಗೆ ಬ್ರೋ ಗೌಡ ಸೈಲೆಂಟ್
ಶಮಂತ್​ - ಪ್ರಿಯಾಂಕಾ ತಿಮ್ಮೇಶ್​​
ಮದನ್​ ಕುಮಾರ್​
| Edited By: |

Updated on:Apr 09, 2021 | 5:54 PM

Share

ಇಷ್ಟು ದಿನ ಬಿಗ್​ ಬಾಸ್​ ಮನೆಯಲ್ಲಿ ನಡೆದ ಆಟವೇ ಬೇರೆ, ಇನ್ಮುಂದೆ ನಡೆಯುವ ಆಟವೇ ಬೇರೆ. ಯಾಕೆಂದರೆ, ವೈಲ್ಡ್​ ಕಾರ್ಡ್​​ ಮೂಲಕ ಹೊಸ ಹೊಸ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ನೀಡಿದ ಬಳಿಕ ಅಲ್ಲಿನ ವಾತಾವರಣ ಕೊಂಚ ಗಂಭೀರವಾಗುತ್ತಿದೆ. ಈಗ ಮೂವರು ಹೊಸ ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಚಂದ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಅವರ ಆಗಮನದಿಂದಾಗಿ ಇನ್ನುಳಿದ ಸ್ಪರ್ಧಿಗಳಿಗೆ ಟೆನ್ಷನ್​ ಶುರುವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನದಿಂದಲೂ ಸ್ಪರ್ಧೆ ನೀಡುತ್ತ ಬಂದಿದ್ದವರು ಈಗ ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಎದುರಿನಲ್ಲಿ ಸೆಣೆಸಾಡಬೇಕಿದೆ. ತಮ್ಮ ಇಮೇಜ್​ ಉಳಿಸಿಕೊಳ್ಳಲು ಕಷ್ಟಪಡಬೇಕಿದೆ. ಎಲ್ಲರ ಮೇಲೂ ಈ ಭಾರ ಇದೆ. ಪರಿಸ್ಥಿತಿ ಹೀಗಿರುವಾಗ ನಟಿ ಪ್ರಿಯಾಂಕಾ ತಿಮ್ಮೇಶ್​ ಹೇಳಿದ ಒಂದು ಮಾತಿನಿಂದಾಗಿ ಶಮಂತ್ ಎಲ್ಲರ ಕಣ್ಣಲ್ಲಿ ಕಡೆಗಣಿಸಲ್ಪಡುವ ಸ್ಥಿತಿ ಬಂದಿದೆ!

ವೈಲ್ಡ್​​ ಕಾರ್ಡ್​ ಮೂಲಕ ಎಂಟ್ರಿ ನೀಡಿದ ಪ್ರಿಯಾಂಕಾ ಅವರು ಮನೆಯೊಳಗಿರುವ ಎಲ್ಲರ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ನೋಡಲು ಪ್ರಶಾಂತ್​ ಸಂಬರಗಿ ಒಂದು ಪ್ರಶ್ನೆ ಕೇಳಿದರು. ಇಲ್ಲಿರುವ ಎಲ್ಲರ ವೃತ್ತಿ ಏನು ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರಿಸಬೇಕಿತ್ತು. ಆಗ ಮೊದಲು ಬಂದ ಹೆಸರು ಶಮಂತ್​ ಅವರದ್ದು. ‘ಇವರು ಏನೂ ಮಾಡುತ್ತಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಸುಮ್ಮನೆ ಕೂತಿದ್ದಾರೆ ಅಷ್ಟೇ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು!

ಪ್ರಿಯಾಂಕಾ ಕಡೆಯಿಂದ ಈ ಮಾತು ಬರುತ್ತದೆ ಎಂದು ಶಮಂತ್​ ಊಹಿಸಿಯೇ ಇರಲಿಲ್ಲ. ಈ ಮಾತಿನಿಂದಾಗಿ ಶಮಂತ್​ ಸಂಪೂರ್ಣ ಸೈಲೆಂಟ್​ ಆಗಿ ಬಿಟ್ಟರು. ತಮ್ಮನ್ನು ಇಷ್ಟೆಲ್ಲ ಹಗುರಾಗಿ ಕಾಣುತ್ತಿರುವುದು ಗೊತ್ತಾಗಿ ಅವರಿಗೆ ಖಂಡಿತಾ ಬೇಜಾರಾಗಿದೆ. ಮೊದಲ ಎರಡು ವಾರ ಕ್ಯಾಪ್ಟನ್​ ಆದ ಅವಧಿಯನ್ನು ಹೊರತುಪಡಿಸಿದರೆ ಬೇರೆ ಎಲ್ಲ ವಾರಗಳಲ್ಲೂ ಶಮಂತ್​ ಪರ್ಫಾಮೆನ್ಸ್​ ಬಗ್ಗೆ ಎಲ್ಲ ಸ್ಪರ್ಧಿಗಳು ಆಕ್ಷೇಪ ಎತ್ತುತ್ತಿದ್ದರು. ಒಂದು ವಾರ ಕಳಪೆ ಹಣೆಪಟ್ಟಿಯಿಂದ ಅವರು ಜೈಲಿಗೂ ಹೋಗಬೇಕಾಯಿತು. ಪ್ರತಿ ವಾರವೂ ಶಮಂತ್​ ನಾಮಿನೇಟ್​ ಆಗುತ್ತಿದ್ದಾರೆ. ಅದರ ನಡುವೆ ಪ್ರಿಯಾಂಕಾ ಈ ರೀತಿ ಹೇಳಿರುವುದರಿಂದ ಅವರ ಇಮೇಜ್​ಗೆ ಪೆಟ್ಟು ಬಿದ್ದಂತಾಗಿದೆ.

ಇದನ್ನೂ ಓದಿ: ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್​ ನೇರ ಪ್ರಶ್ನೆಗೆ ಶಮಂತ್​ ತಬ್ಬಿಬ್ಬು

Published On - 4:34 pm, Fri, 9 April 21

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ