ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

Bigg Boss Kannada: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ.

ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?
ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 25, 2021 | 2:23 PM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೇರೆ ಯಾವುದೇ ಮನರಂಜನೆ ಇಲ್ಲದ ಆ ದೊಡ್ಮನೆಯೊಳಗೆ ನಕ್ಕು ನಗಿಸುವ ಮೂಲಕ ಎಲ್ಲ ಸ್ಪರ್ಧಿಗಳಿಗೆ ಮಂಜು ಭರಪೂರ ಮನರಂಜನೆ ನೀಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಮಂಜು ಜೊತೆ ಯಾರೇ ಮಾತಿಗೆ ಕುಳಿತರೂ ಅಲ್ಲಿ ಕಾಮಿಡಿಗೆ ಕೊರತೆಯೇ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಸತತ 8 ವಾರಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಬರುತ್ತಿದ್ದಾರೆ. ದಿವ್ಯಾ ಸುರೇಶ್​ ಜೊತೆಗಿನ ಲವ್​ ಕಾರಣಕ್ಕೂ ಅವರು ಹೆಚ್ಚು ಸುದ್ದಿ ಆಗುತ್ತಾರೆ.

ಏ.24ರ ಎಪಿಸೋಡ್​ನಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ಮಂಜು ಹೇಳಿದ ಒಂದು ಮಾತು ಹೆಚ್ಚು ಹೈಲೈಟ್​ ಆಗುತ್ತಿದೆ. ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ನನ್ನ ಹಿಂದಿಂದೆ ಬರಬೇಡ ಹೋಗು’ ಎಂದು ವೈಷ್ಣವಿಗೆ ಮಂಜು ಹೇಳಿದ್ದಾರೆ. ಇದರ ಹಿಂದೆ ಒಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮಂಜು ಈ ಮಾತನ್ನು ಸೀರಿಯಸ್​ ಆಗಿ ಹೇಳಿಲ್ಲ. ಬದಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಒಂದು ಫನ್ನಿ ಘಟನೆ ನಡೆದಿದೆ.

ನಟಿ ವೈಷ್ಣವಿ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ. ಯಾವುದೇ ಲೋಟ ಅಥವಾ ಬಾಟಲಿಯನ್ನು ಬಳಸಿ ವೈಷ್ಣವಿ ನೀರು ಕುಡಿಯುವಂತಿಲ್ಲ. ಅವರಿಗೆ ನೀರು ಬೇಕು ಅನಿಸಿದಾಗ ಮನೆಯಲ್ಲಿ ಇರುವ ಯಾರಾದರೊಬ್ಬ ಸದಸ್ಯನಿಗೆ ಒಂದು ಡ್ಯಾನ್ಸ್​ ಸ್ಟೆಪ್​ ಹೇಳಿಕೊಡಬೇಕು. ಡ್ಯಾನ್ಸ್ ಕಲಿತು ತೋರಿಸುವ ಸದಸ್ಯನೇ ವೈಷ್ಣವಿಗೆ ಚಿಕ್ಕ ಲೋಟದಲ್ಲಿ ನೀರು ಕುಡಿಸಬೇಕು. ಏ.24ರ ಎಪಿಸೋಡ್​ನಲ್ಲಿ ಮಂಜುಗೆ ವೈಷ್ಣವಿ ಡ್ಯಾನ್ಸ್​ ಕಲಿಸಿದರು.

‘ಬಾ ನಿನಗೆ ನೀರು ಕುಡಿಸುತ್ತೇನೆ’ ಎಂದು ಮಂಜು ಮುಂದೆ ಸಾಗುತ್ತಿರುವಾಗ ಅವರನ್ನು ವೈಷ್ಣವಿ ಹಿಂಬಾಲಿಸಿದರು. ಆಗ ಮಂಜು ತಮಾಷೆಗೆ, ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ಹಿಂದೆ ಹಿಂದೆ ಬರಬೇಡ ಹೋಗು’ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಮನೆಮಂದಿಯಲ್ಲಾ ನಕ್ಕಿದ್ದಾರೆ. ‘ನೋಡಿ ಬಿಗ್​ ಬಾಸ್​, ನಾನು ಅಗ್ನಿಸಾಕ್ಷಿ ಹೀರೋಯಿನ್​ಗೆ ನೀರು ಕುಡಿಸಿಬಿಟ್ಟೆ’ ಎಂದು ಮಂಜು ಬೀಗಿದ್ದಾರೆ.

ಅಂದಹಾಗೆ, ವೈಷ್ಣವಿ ಈ ರೀತಿ ಶಿಕ್ಷೆ ಪಡೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕೆಲವೇ ದಿನಗಳ ಹಿಂದೆ ಲೋಟ ಒಡೆದು ಹಾಕಿದ್ದಕ್ಕಾಗಿ ಜೋಕ್​ ಹೇಳಬೇಕು ಎಂಬ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು. ಆಗಲೂ ಕೂಡ ಅವರು ಮನೆಯ ಸದಸ್ಯರಿಗೆ ಜೋಕ್​ ಹೇಳಿ ನಗಿಸಲು ಹರಸಾಹಸ ಪಟ್ಟಿದ್ದರು. ಈಗ ಡ್ಯಾನ್ಸ್​ ಹೇಳಿಕೊಡುವ ಶಿಕ್ಷೆ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

(Bigg Boss Kannada: Manju Pavagada asks Vaishnavi Gowda not to follow him in BBK8)

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ