ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Apr 25, 2021 | 2:23 PM

Bigg Boss Kannada: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ.

ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?
ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.
Follow us on

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೇರೆ ಯಾವುದೇ ಮನರಂಜನೆ ಇಲ್ಲದ ಆ ದೊಡ್ಮನೆಯೊಳಗೆ ನಕ್ಕು ನಗಿಸುವ ಮೂಲಕ ಎಲ್ಲ ಸ್ಪರ್ಧಿಗಳಿಗೆ ಮಂಜು ಭರಪೂರ ಮನರಂಜನೆ ನೀಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಮಂಜು ಜೊತೆ ಯಾರೇ ಮಾತಿಗೆ ಕುಳಿತರೂ ಅಲ್ಲಿ ಕಾಮಿಡಿಗೆ ಕೊರತೆಯೇ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಸತತ 8 ವಾರಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಬರುತ್ತಿದ್ದಾರೆ. ದಿವ್ಯಾ ಸುರೇಶ್​ ಜೊತೆಗಿನ ಲವ್​ ಕಾರಣಕ್ಕೂ ಅವರು ಹೆಚ್ಚು ಸುದ್ದಿ ಆಗುತ್ತಾರೆ.

ಏ.24ರ ಎಪಿಸೋಡ್​ನಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ಮಂಜು ಹೇಳಿದ ಒಂದು ಮಾತು ಹೆಚ್ಚು ಹೈಲೈಟ್​ ಆಗುತ್ತಿದೆ. ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ನನ್ನ ಹಿಂದಿಂದೆ ಬರಬೇಡ ಹೋಗು’ ಎಂದು ವೈಷ್ಣವಿಗೆ ಮಂಜು ಹೇಳಿದ್ದಾರೆ. ಇದರ ಹಿಂದೆ ಒಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮಂಜು ಈ ಮಾತನ್ನು ಸೀರಿಯಸ್​ ಆಗಿ ಹೇಳಿಲ್ಲ. ಬದಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಒಂದು ಫನ್ನಿ ಘಟನೆ ನಡೆದಿದೆ.

ನಟಿ ವೈಷ್ಣವಿ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ. ಯಾವುದೇ ಲೋಟ ಅಥವಾ ಬಾಟಲಿಯನ್ನು ಬಳಸಿ ವೈಷ್ಣವಿ ನೀರು ಕುಡಿಯುವಂತಿಲ್ಲ. ಅವರಿಗೆ ನೀರು ಬೇಕು ಅನಿಸಿದಾಗ ಮನೆಯಲ್ಲಿ ಇರುವ ಯಾರಾದರೊಬ್ಬ ಸದಸ್ಯನಿಗೆ ಒಂದು ಡ್ಯಾನ್ಸ್​ ಸ್ಟೆಪ್​ ಹೇಳಿಕೊಡಬೇಕು. ಡ್ಯಾನ್ಸ್ ಕಲಿತು ತೋರಿಸುವ ಸದಸ್ಯನೇ ವೈಷ್ಣವಿಗೆ ಚಿಕ್ಕ ಲೋಟದಲ್ಲಿ ನೀರು ಕುಡಿಸಬೇಕು. ಏ.24ರ ಎಪಿಸೋಡ್​ನಲ್ಲಿ ಮಂಜುಗೆ ವೈಷ್ಣವಿ ಡ್ಯಾನ್ಸ್​ ಕಲಿಸಿದರು.

‘ಬಾ ನಿನಗೆ ನೀರು ಕುಡಿಸುತ್ತೇನೆ’ ಎಂದು ಮಂಜು ಮುಂದೆ ಸಾಗುತ್ತಿರುವಾಗ ಅವರನ್ನು ವೈಷ್ಣವಿ ಹಿಂಬಾಲಿಸಿದರು. ಆಗ ಮಂಜು ತಮಾಷೆಗೆ, ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ಹಿಂದೆ ಹಿಂದೆ ಬರಬೇಡ ಹೋಗು’ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಮನೆಮಂದಿಯಲ್ಲಾ ನಕ್ಕಿದ್ದಾರೆ. ‘ನೋಡಿ ಬಿಗ್​ ಬಾಸ್​, ನಾನು ಅಗ್ನಿಸಾಕ್ಷಿ ಹೀರೋಯಿನ್​ಗೆ ನೀರು ಕುಡಿಸಿಬಿಟ್ಟೆ’ ಎಂದು ಮಂಜು ಬೀಗಿದ್ದಾರೆ.

ಅಂದಹಾಗೆ, ವೈಷ್ಣವಿ ಈ ರೀತಿ ಶಿಕ್ಷೆ ಪಡೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕೆಲವೇ ದಿನಗಳ ಹಿಂದೆ ಲೋಟ ಒಡೆದು ಹಾಕಿದ್ದಕ್ಕಾಗಿ ಜೋಕ್​ ಹೇಳಬೇಕು ಎಂಬ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು. ಆಗಲೂ ಕೂಡ ಅವರು ಮನೆಯ ಸದಸ್ಯರಿಗೆ ಜೋಕ್​ ಹೇಳಿ ನಗಿಸಲು ಹರಸಾಹಸ ಪಟ್ಟಿದ್ದರು. ಈಗ ಡ್ಯಾನ್ಸ್​ ಹೇಳಿಕೊಡುವ ಶಿಕ್ಷೆ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

(Bigg Boss Kannada: Manju Pavagada asks Vaishnavi Gowda not to follow him in BBK8)