AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಮಂಜುಗೆ ಮಣ್ಣು ಮುಕ್ಕಿಸಿದ ಹೆಣ್ಮಕ್ಕಳು! ಇದು ಯಾರೂ ನಿರೀಕ್ಷಿಸದ ಹೀನಾಯ ಸೋಲು

ಇಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಸೋಲಿಲ್ಲದ ಸರದಾರನಂತೆ ಓಡಾಡಿಕೊಂಡಿದ್ದ ಲ್ಯಾಗ್ ಮಂಜು ಈಗ ಹೆಣ್ಣುಮಕ್ಕಳ ಎದುರ ಹೀನಾಯವಾಗಿ ಸೋತಿದ್ದಾರೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ.

BBK8: ಮಂಜುಗೆ ಮಣ್ಣು ಮುಕ್ಕಿಸಿದ ಹೆಣ್ಮಕ್ಕಳು! ಇದು ಯಾರೂ ನಿರೀಕ್ಷಿಸದ ಹೀನಾಯ ಸೋಲು
ಬಿಗ್​ ಬಾಸ್​ ಕನ್ನಡ ಸೀಸನ್​ 8
ಮದನ್​ ಕುಮಾರ್​
|

Updated on: Mar 16, 2021 | 12:22 PM

Share

ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆಯೊಳಗಿನ ಆಟ ರಂಗೇರುತ್ತಿದೆ. ಸಿಕ್ಕಾಪಟ್ಟೆ ಟ್ವಿಸ್ಟ್​ ಇರುವಂತಹ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಪ್ರೇಕ್ಷಕರ ಮನ ಗೆಲ್ಲಲು ಎಲ್ಲರೂ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ಟಾಸ್ಕ್​ನಲ್ಲಿ ಮುನ್ನಡೆ ಸಾಧಿಸುತ್ತ, ಎಲ್ಲರನ್ನೂ ನಗಿಸುತ್ತ ಮೆಚ್ಚುಗೆ ಗಳಿಸಿಕೊಂಡಿದ್ದ ಲ್ಯಾಗ್​ ಮಂಜು ಅಲಿಯಾಸ್​ ಮಂಜು ಪಾವಗಡ ಅವರಿಗೆ ಒಂದು ಟಾಸ್ಕ್​ನಲ್ಲಿ ತೀವ್ರ ಹಿನ್ನಡೆ ಆಗಿದೆ. ಹೆಣ್ಣುಮಕ್ಕಳ ಎದುರು ಮಂಜು ಸೋತಿದ್ದಾರೆ.

7 ಹೆಂಗಸರು ಹಾಗೂ 7 ಗಂಡಸರನ್ನು ಒಳಗೊಂಡ ಎರಡು ಟೀಮ್​ ಮಾಡಲಾಯಿತು. ಹೆಣ್ಣುಮಕ್ಕಳಲ್ಲಿ ಯಾರಾದರೂ ನಾಲ್ಕು ಜನರನ್ನು ಟಾರ್ಗೆಟ್​ ಮಾಡಿ, ಅವರನ್ನು ಅಳಿಸಬೇಕು ಅಥವಾ ನಗಿಸಬೇಕು ಎಂದು ಗಂಡುಮಕ್ಕಳಿಗೆ ಬಿಗ್​ ಬಾಸ್​ ಟಾಸ್ಕ್​ ನೀಡಿದರು. ಈ ಟಾಸ್ಕ್​ನಲ್ಲಿ ಗೆದ್ದವರಿಗೆ ಪಿಜ್ಜಾ ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಿದ ಬಳಿಕ ಎಲ್ಲರ ಉತ್ಸಾಹ ತೀವ್ರವಾಯಿತು.

ಕಾಮಿಡಿ ಮಾಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಮಂಜು, ಈ ಆಟದಲ್ಲಿ ಹೆಣ್ಮಕ್ಕಳನ್ನು ನಗಿಸಿ, ತಮ್ಮ ತಂಡವನ್ನು ತುಂಬ ಸುಲಭವಾಗಿ ಗೆಲ್ಲಿಸುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಇಷ್ಟು ದಿನಗಳ ಕಾಲ ಮಂಜನ ಮಾತಿಗೆ ಬಿದ್ದು ಬಿದ್ದು ನಗುತ್ತಿದ್ದ ಹೆಣ್ಮಕ್ಕಳು ಟಾಸ್ಕ್​ ವಿಚಾರ ಬಂದಾಗ ಕಿಂಚಿತ್ತೂ ನಗಲೇ ಇಲ್ಲ! ಮಾತು ಮಾತಿಗೂ ನಕ್ಕು ನಲಿಯುತ್ತಿದ್ದ ಶುಭಾ ಪೂಂಜಾ ಕೂಡ ಸ್ವಲ್ಪವೂ ನಗಲಿಲ್ಲ. ತಮ್ಮೆಲ್ಲ ಪ್ರತಿಭೆಯನ್ನು ಬಳಸಿದರೂ ಮಂಜು ಯಶಸ್ವಿ ಆಗಲೇ ಇಲ್ಲ.

ಹೆಣ್ಮಕ್ಕಳನ್ನು ನಗಿಸುವುದರಲ್ಲಿ ಮಂಜು ಹೀಗೆ ಹೀನಾಯವಾಗಿ ವಿಫಲರಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಅಂತಿಮವಾಗಿ ಆಟದ ಅವಧಿ ಮುಗಿಯುವವರೆಗೂ ಹೆಣ್ಣುಮಕ್ಕಳ ತಂಡದ ಯಾರೊಬ್ಬರೂ ನಗಲಿಲ್ಲ. ದಿವ್ಯಾ ಉರುಡುಗ ಅವರಂತೂ ಪಿಜಾ ಆಸೆಯಾಗಿ ನಗುವನ್ನು ತಡೆದಿಟ್ಟುಕೊಂಡಿದ್ದ ತುಂಬ ತಮಾಷೆಯಾಗಿತ್ತು. ಕಡೆಗೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂಬುದು ಸಾಬೀತಾಯಿತು. ಟಾಸ್ಕ್​ ಗೆದ್ದ ಅವರಿಗೆ ಬಹುಮಾನವಾಗಿ ಪಿಜ್ಜಾ ಕೂಡ ಸಿಕ್ಕಿತು. ಇಂಥ ಹಲವು ಗೇಮ್​ಗಳಿಂದಾಗಿ ಬಿಗ್​ ಬಾಸ್​ ಮನೆಯ ವಾತಾವರಣ ರಂಗೇರಿದೆ.

ಇದನ್ನೂ ಓದಿ: ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

BBK8: ಈ ಬಾರಿಯ ಬಿಗ್​ ಬಾಸ್​ 9 ಸದಸ್ಯರ ಮೇಲೆ ಎಲಿಮಿನೇಷನ್​ ತೂಗುಗತ್ತಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?