AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?

 ‘ಕೆಜಿಎಫ್​ 2’ ಎದುರು ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತೆರೆಗೆ ತರುತ್ತಿರುವುದಕ್ಕೆ ಆಮಿರ್​ ಖಾನ್​ ಅವರು ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಇರುವುದು ಆರೋಗ್ಯಕರ ಸ್ಪರ್ಧೆ ಎಂದು ಹೇಳಿದ್ದರು. ‘ಕೆಜಿಎಫ್​ 2’ ಎದುರು ತೆರೆಗೆ ಬಂದರೆ ಆಮಿರ್​ ಖಾನ್​ ಸಿನಿಮಾ ಸೋಲಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು.

‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?
ಆಮಿರ್ ಖಾನ್​-ಯಶ್
TV9 Web
| Edited By: |

Updated on:Feb 15, 2022 | 5:40 PM

Share

ಏಪ್ರಿಲ್​ 14ರಂದು ‘ಕೆಜಿಎಫ್​ 2’ ಸಿನಿಮಾ (KGF Chapter 2) ತೆರೆಗೆ ಬರುತ್ತಿದೆ. ಈ ಸಿನಿಮಾದ ಎದುರು ಆಮಿರ್ ಖಾನ್ (Aamir Khanb)​ ನಟನೆಯ ‘ಲಾಲ್​ ಸಿಂಗ್​ ಛಡ್ಡಾ’ (Laal Singh Chaddha) ತೆರೆಗೆ ಬರಬೇಕಿತ್ತು. ಎರಡೂ ಸಿನಿಮಾಗಳ ನಡುವೆ ದೊಡ್ಡ ಕ್ಲ್ಯಾಶ್​ ಏರ್ಪಡಲಿದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಈಗ ಈ ರೇಸ್​ನಿಂದ ಆಮಿರ್ ಖಾನ್​ ಸಿನಿಮಾ ಹಿಂದೆ ಸರಿದಿದೆ. ಇದರಿಂದ ‘ಕೆಜಿಎಫ್​ 2’ ಸಿನಿಮಾಗೆ ಮತ್ತಷ್ಟು ಚಿತ್ರಮಂದಿರಗಳು ಸಿಗುವ ಸಾಧ್ಯತೆ ಇದೆ. ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾದ ರಿಲೀಸ್​ ದಿನಾಂಕ ಆಗಸ್ಟ್ ತಿಂಗಳಿಗೆ ಮುಂದೂಡಲ್ಪಟ್ಟಿದೆ.

‘ಕೆಜಿಎಫ್​ 2’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಯಶ್​ ನಟನೆಯ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. ಈಗಾಗಲೇ ‘ಕೆಜಿಎಫ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿರುವುದರಿಂದ ಪಾರ್ಟ್​ 2 ಬಗ್ಗೆ ಕುತೂಹಲ ಮೂಡುವುದು ಸಹಜ. ಈಗಾಗಲೇ ‘ಕೆಜಿಎಫ್​ 2’ ಸಿನಿಮಾದ ಟೀಸರ್​ ಸಾಕಷ್ಟು ಹವಾ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ನಟಿಸಿರುವುದರಿಂದ ಸಿನಿಮಾಗೆ ದೊಡ್ಡ ಮೈಲೇಜ್​ ಸಿಕ್ಕಿದೆ. ಹಿಂದಿಯಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗುತ್ತಿದೆ. ಈಗ ‘ಕೆಜಿಎಫ್​ 2’ಗೆ ಆಮೀರ್​ ಖಾನ್​ ಅವರು ಹಾದಿ ಮಾಡಿಕೊಟ್ಟಿದ್ದಾರೆ.

‘ಕೆಜಿಎಫ್​ 2’ ಎದುರು ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತೆರೆಗೆ ತರುತ್ತಿರುವುದಕ್ಕೆ ಆಮಿರ್​ ಖಾನ್​ ಅವರು ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಇರುವುದು ಆರೋಗ್ಯಕರ ಸ್ಪರ್ಧೆ ಎಂದು ಹೇಳಿದ್ದರು. ‘ಕೆಜಿಎಫ್​ 2’ ಎದುರು ತೆರೆಗೆ ಬಂದರೆ ಆಮಿರ್​ ಖಾನ್​ ಸಿನಿಮಾ ಸೋಲಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆದರೆ, ಈಗ ಆಮಿರ್​ ಖಾನ್​ ಸಿನಿಮಾದ ರಿಲೀಸ್​ ದಿನಾಂಕವೇ ಮುಂದೂಡಲ್ಪಟ್ಟಿದೆ.

‘ನಮ್ಮ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣ. ಆಗಸ್ಟ್ 11, 2022ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ’ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಭಾಸ್​ ನಟನೆಯ ‘ಆದಿಪುರಷ್​’ ಚಿತ್ರ ಆಗಸ್ಟ್ ಸಂದರ್ಭದಲ್ಲಿ ತೆರೆಗೆ ಬರುವ ನೀರಿಕ್ಷೆ ಇದೆ. ಆಮಿರ್​ ಖಾನ್​ ಹಾಗೂ ಪ್ರಭಾಸ್​ ಸಿನಿಮಾ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆಮಿರ್​ ಖಾನ್​ ಚಿತ್ರ ರೇಸ್​ನಿಂದ ಹಿಂದೆ ಸರಿಯುವ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುವ ಬಗ್ಗೆ ಘೋಷಣೆ ಮಾಡಿದೆ. ‘ಕೆಜಿಎಫ್​ 2’ ಹಾಗೂ ‘ಜೆರ್ಸಿ’ ನಡುವೆ ಈಗ ಸ್ಪರ್ಧೆ ಏರ್ಪಡುತ್ತಿದೆ.

ಇದನ್ನೂ ಓದಿ: ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ 

ಯಶ್​ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ​ ಬಳಿ ಕ್ಷಮೆ ಕೇಳಿದೆ; ಆಮಿರ್​ ಖಾನ್​

Published On - 5:33 pm, Tue, 15 February 22

Follow Us
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ