AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

‘ಅಂದಾಜ್​ ಅಪ್ನ ಅಪ್ನ’ ಶೂಟಿಂಗ್​ ಸಮಯದಲ್ಲಿ ಒಂದು ಘಟನೆ ನಡೆಯಿತು. ಆ ಬಳಿಕ ರವೀನಾ ಟಂಡನ್​ ಅವರು ಆಮಿರ್​ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು.

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ
ಆಮಿರ್​ ಖಾನ್​, ರವೀನಾ ಟಂಡನ್​
TV9 Web
| Updated By: ಮದನ್​ ಕುಮಾರ್​|

Updated on:Feb 06, 2022 | 8:20 AM

Share

ಹಲವು ಸ್ಟಾರ್​ ಕಲಾವಿದರ ಜೊತೆಗೆ ನಟಿಸಿದ ರವೀನಾ ಟಂಡನ್ (Raveena Tandon) ಅವರು ಒಂದು ಕಾಲದಲ್ಲಿ ಬಾಲಿವುಡ್​ನ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ (KGF 2) ಚಿತ್ರದಲ್ಲಿ ಅಭಿನಯಿಸಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ರವೀನಾ ಟಂಡನ್​ ಅವರು ಹಿಂದಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಹೋಗಿದ್ದರು. ಆಗ ಅವರು ಹಳೇ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ರವೀನಾ ಮತ್ತು ಆಮಿರ್​ ಖಾನ್ (Aamir Khan)​ ನಟನೆಯ ‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಹಾಡನ್ನು ಸ್ಪರ್ಧಿಯೊಬ್ಬರು ಈ ಶೋನಲ್ಲಿ ಹಾಡಿದರು. ಆಗ ರವೀನಾ ಟಂಡನ್​ ಅವರು ನೆನಪಿನ ಪುಟ ತೆರೆದರು. ಆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು ತೀರಿಸಿಕೊಂಡಿದ್ದರು. ಆದರೆ ಅದು ದ್ವೇಷದ ಸೇಡಲ್ಲ. ಎಲ್ಲವೂ ನಡೆದಿದ್ದು ತಮಾಷೆಗಾಗಿ. ಆ ಘಟನೆಯನ್ನು ಈಗ ರವೀನಾ ಟಂಡನ್​ ನೆನಪು ಮಾಡಿಕೊಂಡಿದ್ದಾರೆ.

‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ಅವರು ಪ್ರ್ಯಾಂಕ್​ ಮಾಡುತ್ತಿದ್ದರು. ಒಮ್ಮೆ ರವೀನಾಗೂ ಪ್ರ್ಯಾಂಕ್​ ಮಾಡಲಾಗಿತ್ತು. ‘ಕುದರೆ ಗಾಡಿಯ ಮೇಲೆ ನಾವು ಚಿತ್ರೀಕರಣ ಮಾಡುತ್ತಿದ್ದೆವು. ಆಮಿರ್​ ಖಾನ್​ ಅವರಿ ಇಡೀ ತಂಡದ ಜೊತೆ ಸೇರಿಕೊಂಡು ನನ್ನ ಮೇಲೆ ಪ್ರ್ಯಾಂಕ್​ ಮಾಡಲು ಸಿದ್ಧರಾಗಿದ್ದರು. ಬಿಸಿ ಟೀ ಲೋಟ ನನ್ನ ಮೇಲೆ ಬೀಳುತ್ತಿರುವಂತೆ ಅವರು ನಟಿಸಿದರು. ಆ ಪ್ರ್ಯಾಂಕ್​ನಿಂದ ನಾನು ಹೆದರಿದೆ’ ಎಂದು ತಾವು ಪ್ರ್ಯಾಂಕ್​ಗೆ ಒಳಗಾದ ಘಟನೆನ್ನು ರವೀನಾ ಟಂಡನ್​ ಮೆಲುಕು ಹಾಕಿದ್ದಾರೆ.

ಈ ಘಟನೆ ನಡೆದ ಬಳಿಕ ರವೀನಾ ಟಂಡನ್​ ಅವರು ಆಮಿರ್​ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ‘ಎಲ್ಲರೂ ನನ್ನನ್ನು ನೋಡಿ ನಕ್ಕರು. ಅದೇ ರೀತಿ ನಾನು ಕೂಡ ಆಮಿರ್​ ಖಾನ್​ಗೆ ಪ್ರ್ಯಾಂಕ್​ ಮಾಡಿದೆ. ಆಗ ವ್ಯಾನಿಟಿ ವ್ಯಾನ್​ ಇರುತ್ತಿರಲಿಲ್ಲ. ವಾಶ್​ರೂಮ್​ಗಾಗಿ ಆಮಿರ್​ ಖಾನ್​ ಸ್ವಲ್ಪ ದೂರಕ್ಕೆ ತೆರಳಿದ್ದರು. ಆಗ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಶೂಟಿಂಗ್​ ಪ್ಯಾಕಪ್​ ಮಾಡಿದರು. ಆದರೆ ಅದು ಆಮಿರ್​​ ಖಾನ್​ಗೆ ಗೊತ್ತಿರಲಿಲ್ಲ. ಅವರಿಗೆ ಕಷ್ಟ ಆಗುವಂತಹ ಒಂದು ಡ್ಯಾನ್ಸ್​ ಸ್ಟೆಪ್​ ಅನ್ನು ಪ್ರಾಕ್ಟೀಸ್​ ಮಾಡಲು ಹೇಳಿ ಎಂದು ನೃತ್ಯನಿರ್ದೇಶಕರ ಬಳಿ ಮನವಿ ಮಾಡಿಕೊಂಡೆ. ಅದಕ್ಕೆ ಕೊರಿಯೋಗ್ರಾಫರ್​ ಒಪ್ಪಿದರು. ಅದನ್ನು ನಿಜ ಎಂದು ತಿಳಿದ ಆಮಿರ್​ ಖಾನ್​ ಸತತ 30 ನಿಮಿಷ ನಿಮಿಷ ಡ್ಯಾನ್ಸ್​ ಪ್ರಾಕ್ಟೀಸ್​ ಮಾಡಿದ್ದರು. ಆ ಘಟನೆ ನೆನಪಿಸಿಕೊಂಡಾಗಲೆಲ್ಲ ನನಗೆ ನಗು ಬರುತ್ತದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

ಇದನ್ನೂ ಓದಿ:

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

Published On - 8:11 am, Sun, 6 February 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!