AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರಿಗೆ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗಲೇ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿದ್ದರು.

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?
ಮಕ್ಕಳ ಜೊತೆ ರವೀನಾ ಟಂಡನ್​
TV9 Web
| Edited By: |

Updated on: Jan 27, 2022 | 9:05 AM

Share

ನಟಿ ರವೀನಾ ಟಂಡನ್​ (Raveena Tandon) ಅವರು ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. 1990ರ ದಶಕದಲ್ಲಿ ಅವರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು. ಈಗಲೂ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಉಪೇಂದ್ರ’ ಚಿತ್ರದ ಬಳಿಕ ಇದು ಕನ್ನಡದಲ್ಲಿ ರವೀನಾ ಟಂಡನ್​ ಅವರಿಗೆ 2ನೇ ಸಿನಿಮಾ. ಇನ್ನು, ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಸದಾ ಆಸಕ್ತಿ ತೋರಿಸುತ್ತಾರೆ. ಒಂದು ಕಾಲದಲ್ಲಿ ರವೀನಾ ಟಂಡನ್​ ಅವರು ತಮ್ಮ ವೈಯಕ್ತಿಕ ಜೀವನದ ಅತಿ ಮುಖ್ಯ ವಿಚಾರವನ್ನೇ ಮುಚ್ಚಿಟ್ಟಿದ್ದರು. ಅಚ್ಚರಿ ಎಂದರೆ ತಮ್ಮ 21ನೇ ವಯಸ್ಸಿನಲ್ಲಿಯೇ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಆದರೆ ಆ ವಿಷಯವನ್ನು ಅವರು ಹಲವು ವರ್ಷಗಳ ಕಾಲ ಗುಟ್ಟಾಗಿ ಇಟ್ಟಿದ್ದರು. ದತ್ತು ಪುತ್ರಿಯರ ವಿಚಾರದಲ್ಲಿ ತಾವು ಗೌಪ್ಯತೆ ಕಾಪಾಡಿಕೊಂಡಿದ್ದು ಯಾಕೆ ಎಂಬುದರ ಕುರಿತು ರವೀನಾ ಟಂಡನ್​ ಮಾತನಾಡಿದ್ದಾರೆ. ಈ ಕುರಿತು ‘ಹಿಂದುಸ್ತಾನ್​ ಟೈಮ್ಸ್​’ ಲೇಖನ ಪ್ರಕಟಿಸಿದೆ.

ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ ಅವರು ತುಂಬ ಫೇಮಸ್​ ಆಗಿದ್ದರು. ಪತ್ತರ್​ ಕೆ ಫೂಲ್​, ಮೊಹ್ರಾ, ದಿಲ್​ವಾಲೆ, ಲಾಡ್ಲಾ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕೇವಲ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡರು. ಆದರೆ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಿರಾಕರಿಸಿದರು. ಅದಕ್ಕೆ ಕಾರಣ; ಟ್ಯಾಬ್ಲಾಯ್ಡ್ ​ಪ್ರತಿಕೆಗಳ ಭಯ. ಮದುವೆ ಆಗದೆಯೇ ಮಕ್ಕಳನ್ನು ದತ್ತು ಪಡೆದ ನಟಿಯ ಬಗ್ಗೆ ಆ ಪತ್ರಿಕೆಗಳು ಕೆಟ್ಟ ವರದಿ ಪ್ರಕಟ ಮಾಡುತ್ತವೆ ಎಂಬ ಅಳುಕು ರವೀನಾ ಟಂಡನ್​ ಅವರಿಗೆ ಇತ್ತು.

‘ಅದು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಕೆಟ್ಟ ಕಾಲ ಆಗಿತ್ತು. ತುಂಬ ಕೆಟ್ಟ ಹೆಡ್​ಲೈನ್​ ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ಯಾವ ವಿಚಾರ ಇಟ್ಟುಕೊಂಡು ಬೇಕಿದ್ದರೂ ಹಗರಣ ಸೃಷ್ಟಿ ಮಾಡುತ್ತಿದ್ದರು. ನಾನು ಹೆಣ್ಣುಮಕ್ಕಳನ್ನು ದತ್ತು ಪಡೆದಾಗ ಅವರ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಅವರು 10ನೇ ತರಗತಿ ಮುಗಿಸಿದ ನಂತರವೇ ನನ್ನ ಜೊತೆ ಶೂಟಿಂಗ್​ಗೆ ಬರಲು ಆರಂಭಿಸಿದರು. ಈ ಹುಡುಗಿಯರು ಯಾರು ಅಂತ ಎಲ್ಲರೂ ಕೇಳಲು ಶುರು ಮಾಡಿದರು. ಆಗ ನಾನು ಎಲ್ಲವನ್ನೂ ಹೇಳಿದೆ’ ಎಂದಿದ್ದಾರೆ ರವೀನಾ ಟಂಡನ್​.

‘ಮಕ್ಕಳ ಬಗ್ಗೆ ಏನೇ ಹೇಳಿದರೂ ಅದನ್ನು ಇಟ್ಟುಕೊಂಡು ಕೆಟ್ಟದಾಗಿ ಬರೆಯುತ್ತಾರೆ ಎಂಬ ಭಯ ನನ್ನಲ್ಲಿ ಇತ್ತು. ಈಕೆ ಗುಟ್ಟಾಗಿ ಮಗು ಮಾಡಿಕೊಂಡಿದ್ದಾಳೆ ಅಂತ ಮ್ಯಾಗಜಿನ್​ನವರು ಹೇಳಿಬಿಡುತ್ತಿದ್ದರು. ಮಕ್ಕಳ ತಂದೆ ಯಾರು ಅಂತಲೂ ಊಹಿಸಲು ಶುರು ಮಾಡುತ್ತಿದ್ದರು. ಅದು ಅಂಥ ಕಾಲ ಆಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ನಾನು ಮೌನವಾಗಿದ್ದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

ರವೀನಾ ಟಂಡನ್​ ಜನ್ಮದಿನ; ‘ಕೆಜಿಎಫ್​ 2’, ‘ಉಪೇಂದ್ರ’ ಚಿತ್ರದ ನಟಿಗೆ ದೊಡ್ಡ ಪಾರ್ಟಿ ಅಂದ್ರೆ ಹಿಡಿಸಲ್ಲ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್