ಈ ಪಾತ್ರಕ್ಕಾಗಿ ಕಲಾವಿದರು ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ವಿವರ..
ಪಾತ್ರಕ್ಕಾಗಿ ಹಲವರು ದೇಹದ ತೂಕ ಹೆಚ್ಚಿಸಿಕೊಂಡರೆ, ಇನ್ನೂ ಕೆಲವು ಆ್ಯಕ್ಷನ್ ಮಾಡುವಾಗ ಡ್ಯೂಪ್ ಬಳಸುವುದಿಲ್ಲ. ಈ ರೀತಿ ಮಾಡಿದವರು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಹಲವು ಸ್ಟಾರ್ ಹೀರೋಗಳಿದ್ದಾರೆ. ಕೆಲವು ಹೀರೋಗಳು ಪಾತ್ರಗಳು ಸಾಕಷ್ಟು ಗಮನ ಸೆಳೆದ ಉದಾಹರಣೆ ಇದೆ. ಪಾತ್ರಕ್ಕಾಗಿ ಅನೇಕರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಕೆಲವರು ದೇಹದ ತೂಕ ಹೆಚ್ಚಿಸಿಕೊಂಡರೆ, ಇನ್ನೂ ಕೆಲವು ಆ್ಯಕ್ಷನ್ ಮಾಡುವಾಗ ಡ್ಯೂಪ್ ಬಳಸುವುದಿಲ್ಲ. ಈ ರೀತಿ ಮಾಡಿದವರು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಆಮಿರ್ ಖಾನ್
ಆಮಿರ್ ಖಾನ್ ಅವರು ಬಾಲಿವುಡ್ನ ಪರ್ಫೆಕ್ಷನಿಸ್ಟ್ ಎಂದೇ ಫೇಮಸ್ ಆದವರು. ಅವರನ್ನು ಈ ರೀತಿ ಕರೆಯುವುದಕ್ಕೂ ಒಂದು ಕಾರಣ ಇದೆ. ಆಮಿರ್ ಅವರು ಪ್ರತಿ ಸಿನಿಮಾಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ‘ದಂಗಲ್’ ಸಿನಿಮಾದಲ್ಲಿ ಎರಡು ಶೇಡ್ನ ಪಾತ್ರ ಬರುತ್ತದೆ. ಒಂದು ಶೇಡ್ನಲ್ಲಿ ಅವರು ಸಖತ್ ದಪ್ಪ ಇದ್ದರು. ಅವರು ಸಮೋಸಾ ಮತ್ತಿತ್ಯಾದಿ ಜಂಕ್ ಫುಡ್ ತಿಂದು ದೇಹದ ತೂಕ ಹೆಚ್ಚಿಸಿಕೊಂಡರು. ಪಾತ್ರದ ಶೂಟಿಂಗ್ ಮುಗಿದ ಬಳಿಕ ಜಿಮ್ ಮಾಡಿ ತೂಕ ಇಳಿಸಿಕೊಂಡರು.
ಭೂಮಿ ಪಡ್ನೇಕರ್
ನಟಿ ಭೂಮಿ ಪಡ್ನೇಕರ್ ಅವರು ಪಾತ್ರಕ್ಕಾಗಿ ಸಾಕಷ್ಟು ಪ್ರಯೋಗ ಮಾಡುತ್ತಾರೆ. ಅವರು ಆಯುಷ್ಮಾನ್ ಖುರಾನಾ ನಟನೆಯ ‘ದಮ್ ಲಗಾ ಕೆ ಹೈಶಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗಾಗಿ ಅವರು 30 ಕೆಜಿ ತೂಕ ಹೆಚ್ಚಿಸಿಕೊಂಡರು. ಇದು ಅನೇಕರ ಅಚ್ಚರಿಗೆ ಕಾರಣ ಆಗಿತ್ತು.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆ್ಯಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಬಯೋಪಿಕ್ ‘ಚಪಾಕ್’ ಚಿತ್ರದಲ್ಲಿ ದೀಪಿಕಾ ನಟಿಸಿದ್ದರು. ಪಾತ್ರದ ಬಗ್ಗೆ ತಿಳಿಯಲು ವಾರಗಳ ಕಾಲ ಆ್ಯಸಿಡ್ ದಾಳಿ ಸಂತ್ರಸ್ತೆಯ ಜೊತೆ ದೀಪಿಕಾ ಸಮಯ ಕಳೆದಿದ್ದರು.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅವರು ಮೇರಿ ಕೋಮ್ ಬಯೋಪಿಕ್ನಲ್ಲಿ ನಟಿಸಿದ್ದರು. ಈ ಚಿತ್ರಕ್ಕಾಗಿ ಅವರು ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅವರ ನಟನೆ ಸ್ಫೂರ್ತಿದಾಯಕವಾಗಿತ್ತು. ಈ ಪಾತ್ರಕ್ಕಾಗಿ ಪ್ರಿಯಾಂಕಾ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು.
ರಾಜ್ಕುಮಾರ್ ರಾವ್
‘ಟ್ರ್ಯಾಪ್ಡ್’ ಸಿನಿಮಾದಲ್ಲಿ ರಾಜ್ಕುಮಾರ್ ರಾವ್ ನಟಿಸಿದ್ದರು. ಅಪಾರ್ಟ್ಮೆಂಟ್ ಒಂದರಲ್ಲಿ ಕೆಲವು ದಿನಗಳ ಕಾಲ ವ್ಯಕ್ತಿಯೋರ್ವ ಸಿಕ್ಕಿ ಬೀಳುತ್ತಾನೆ. ಆತನಿಗೆ ಆಹಾರ ಸಿಗುವುದಿಲ್ಲ. ಈ ಚಿತ್ರದಲ್ಲಿ ನಟಿಸಲು ಅವರು ಸಾಕಷ್ಟು ತೆಳ್ಳಗಾಗಿದ್ದರು.
ರಣದೀಪ್ ಹೂಡ
ರಣದೀಪ್ ಹೂಡ ಅವರು ಅದ್ಭುತ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ. ‘ಸರ್ಬ್ಜಿತ್’ ಸಿನಿಮಾಗಾಗಿ ಸಾಕಷ್ಟು ಫಿಸಿಕಲ್ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದರು. ಈ ಚಿತ್ರಕ್ಕಾಗಿ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದರು.
ರಣವೀರ್ ಸಿಂಗ್
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಈ ಪಾತ್ರ ಮಾಡುವಾಗ ಅವರು ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು. ಈ ಪಾತ್ರ ನೋಡಿ ಪ್ರೇಕ್ಷಕರು ಅಚ್ಚರಿಗೊಂಡಿದ್ದರು.
ಇದನ್ನೂ ಓದಿ: ಕನ್ನಡ ಸಿನಿಮಾ ಮಾಡಿದ್ದ ದೀಪಿಕಾ ಪಡುಕೋಣೆಗೆ ಬಾಲಿವುಡ್ ಆಫರ್ ಸಿಕ್ಕಿದ್ದು ಹೇಗೆ?
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್ ಅವರು ನಮ್ಮೊಂದಿಗೆ ಇಲ್ಲ. ಕ್ರಿಕೆಟರ್ ಎಂಎಸ್ ಧೋನಿ ಬಯೋಪಿಕ್ನಲ್ಲಿ ಅವರ ನಟನೆ ಮೆಚ್ಚುಗೆ ಪಡೆಯುವಂಥದ್ದು. ಅವರು ಧೋನಿ ಮ್ಯಾನರಿಸಂನ ಮೈಗೂಡಿಸಿಕೊಂಡು ಗಮನ ಸೆಳೆದರು.
ರಣಬೀರ್ ಕಪೂರ್
ರಣಬೀರ್ ಕಪೂರ್ ಅವರು ‘ಅನಿಮಲ್’ ಸಿನಿಮಾ ಮೂಲಕ ಭೇಷ್ ಎನಿಸಿಕೊಂಡರು. ಈ ಚಿತ್ರದಲ್ಲಿ ಅವರಿಗೆ ಹಲವು ಶೇಡ್ ಇದೆ. ಈ ಚಿತ್ರಕ್ಕಾಗಿ ರಣಬೀರ್ ಅವರು ಸಾಕಷ್ಟು ವರ್ಕೌಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ