AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ.

ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​
ಅಭಿಷೇಕ್​ ಬಚ್ಚನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 15, 2021 | 10:08 PM

Share

ಅಭಿಷೇಕ್​ ಬಚ್ಚನ್​ (Abhishek Bachchan) ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾಗಳೂ ಕೈ ಹಿಡಿದಿಲ್ಲ. ಅವರಿಗೆ ಯಾವ ಸಿನಿಮಾಗಳೂ ಇತ್ತೀಚೆಗೆ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ತಂದುಕೊಟ್ಟಿಲ್ಲ. ಇದು ಅವರಿಗೆ ಬೇಸರ ತರಿಸಿದೆ. ಸ್ಟಾರ್​ ನಟನ ಮಗನಾದರೂ ಹೇಳಿಕೊಳ್ಳುವಂಥ ಆಫರ್​ಗಳು ಬರುತ್ತಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಅಭಿಷೇಕ್​ಗೆ ಬೇಸರವಿದೆ. ಈ ಮಧ್ಯೆ ಅಭಿಷೇಕ್​ ಬಚ್ಚನ್​ ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡಿದ್ದಾರೆ. ಇನ್ನೆಂದಿಗೂ ಅವರ ಜತೆ ಸಿನಿಮಾ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಈಗ ಬಾಲಿವುಡ್​ ಅಂಗಳದಲ್ಲಿ ಗುಸುಗುಸು ಒಂದು ಹರಿದಾಡುತ್ತಿದೆ.

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ. ಹೀಗೆಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹಾಗೂ ಅಭಿಷೇಕ್​ ನಡುವೆ ಯಾವುದೂ ಸರಿ ಇಲ್ಲ ಎನ್ನುತ್ತಿವೆ ಮೂಲಗಳು.

‘ಧೂಮ್​ 3’ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಹಾಗೂ ಅಭಿಷೇಕ್​ ನಟಿಸಿದ್ದರು. ಧೂಮ್​ ಸರಣಿಯಲ್ಲಿ ಅಭಿಷೇಕ್​ ಈ ಮೊದಲಿನಿಂದಲೂ ನಟಿಸುತ್ತಿದ್ದಾರೆ. ಆಮಿರ್​ ಖಾನ್​ ‘ಧೂಮ್​ 3’ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆಮಿರ್​ ಹೇಳಿದರು ಎಂಬ ಕಾರಣಕ್ಕೆ ಶೂಟಿಂಗ್​ ಸಮಯದಲ್ಲಿ ‘ಧೂಮ್​ 3’ ಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಅಭಿಷೇಕ್​ ಹಾಗೂ ಆದಿತ್ಯಾ ನಡುವೆ ಜಗಳ ಏರ್ಪಟ್ಟಿತ್ತು. ಇದನ್ನು ಅಭಿಷೇಕ್​ ಸಹಿಸಿಕೊಂಡಿದ್ದರು. ಆದರೆ, ಅವರಿಗೆ ಬೇಸರ ಆಗುವ ದೊಡ್ಡ ಘಟನೆ ನಡೆದಿತ್ತು.

‘ಧೂಮ್​ 3’ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ಸೆಟ್​ಗೆ ಅಭಿಷೇಕ್​ ಬರೋದು ತಡವಾಗಿತ್ತು. ಅದಕ್ಕೂ ಮೊದಲೇ ಆಮಿರ್​ ಹಾಗೂ ಆದಿತ್ಯ ಕೂತು ಸಿನಿಮಾದ ಕ್ಲೈಮ್ಯಾಕ್ಸ್​ ಬದಲಾಯಿಸಿದ್ದರು. ಈ ವಿಚಾರ ಅಭಿಷೇಕ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಅಲ್ಲದೆ, ಇನ್ನುಮುಂದೆ ‘ಧೂಮ್​’ ಸರಣಿಯ ಯಾವುದೇ ಸಿನಿಮಾಗಳಲ್ಲೂ ಅವರು ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು.

ಆದಿತ್ಯ ಚೋಪ್ರಾ ‘ಬಂಟಿ ಔರ್​ ಬಬ್ಲಿ 2’ ಆಫರ್​ಅನ್ನು ಅಭಿಷೇಕ್​ಗೆ ನೀಡಿದ್ದರು. ಆದರೆ, ಅವರು ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಇದಾದ ನಂತರದಲ್ಲಿ ಸೈಫ್​ ಅಲಿ ಖಾನ್​ಗೆ ಈ ಆಫರ್​ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಭಿಷೇಕ್​ ಬಚ್ಚನ್​ಗೆ ಶಸ್ತ್ರಚಿಕಿತ್ಸೆ: ಫೋಟೋ ಹಂಚಿಕೊಂಡು ಘಟನೆ ವಿವರಿಸಿದ ನಟ…

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ