AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ.

ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡ ಅಭಿಷೇಕ್​ ಬಚ್ಚನ್​; ಕೈ ತಪ್ಪಿತು ಹಲವು ಆಫರ್​
ಅಭಿಷೇಕ್​ ಬಚ್ಚನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 15, 2021 | 10:08 PM

Share

ಅಭಿಷೇಕ್​ ಬಚ್ಚನ್​ (Abhishek Bachchan) ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾಗಳೂ ಕೈ ಹಿಡಿದಿಲ್ಲ. ಅವರಿಗೆ ಯಾವ ಸಿನಿಮಾಗಳೂ ಇತ್ತೀಚೆಗೆ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ತಂದುಕೊಟ್ಟಿಲ್ಲ. ಇದು ಅವರಿಗೆ ಬೇಸರ ತರಿಸಿದೆ. ಸ್ಟಾರ್​ ನಟನ ಮಗನಾದರೂ ಹೇಳಿಕೊಳ್ಳುವಂಥ ಆಫರ್​ಗಳು ಬರುತ್ತಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಅಭಿಷೇಕ್​ಗೆ ಬೇಸರವಿದೆ. ಈ ಮಧ್ಯೆ ಅಭಿಷೇಕ್​ ಬಚ್ಚನ್​ ಖ್ಯಾತ ನಿರ್ಮಾಪಕನ ಜತೆ ಸಂಬಂಧ ಕಡಿದುಕೊಂಡಿದ್ದಾರೆ. ಇನ್ನೆಂದಿಗೂ ಅವರ ಜತೆ ಸಿನಿಮಾ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಈಗ ಬಾಲಿವುಡ್​ ಅಂಗಳದಲ್ಲಿ ಗುಸುಗುಸು ಒಂದು ಹರಿದಾಡುತ್ತಿದೆ.

‘ಬಂಟಿ ಔರ್​ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಹಾಗೂ ರಾಣಿ ಮುಖರ್ಜಿ ನಟಿಸಿದ್ದರು. ಈ ಸಿನಿಮಾದ ಪಾರ್ಟ್​ 2 ಬರುತ್ತಿದೆ. ಮೊದಲ ಸಿನಿಮಾದಲ್ಲಿ ಅಭಿಷೇಕ್​ ಮಾಡಿದ್ದ ಪಾತ್ರವನ್ನು ‘ಬಂಟಿ ಔರ್​ ಬಬ್ಲಿ 2’ನಲ್ಲಿ ಸೈಫ್​ ಅಲಿ ಖಾನ್​ಗೆ ನೀಡಲಾಗಿದೆ. ಹೀಗೆಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹಾಗೂ ಅಭಿಷೇಕ್​ ನಡುವೆ ಯಾವುದೂ ಸರಿ ಇಲ್ಲ ಎನ್ನುತ್ತಿವೆ ಮೂಲಗಳು.

‘ಧೂಮ್​ 3’ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಹಾಗೂ ಅಭಿಷೇಕ್​ ನಟಿಸಿದ್ದರು. ಧೂಮ್​ ಸರಣಿಯಲ್ಲಿ ಅಭಿಷೇಕ್​ ಈ ಮೊದಲಿನಿಂದಲೂ ನಟಿಸುತ್ತಿದ್ದಾರೆ. ಆಮಿರ್​ ಖಾನ್​ ‘ಧೂಮ್​ 3’ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆಮಿರ್​ ಹೇಳಿದರು ಎಂಬ ಕಾರಣಕ್ಕೆ ಶೂಟಿಂಗ್​ ಸಮಯದಲ್ಲಿ ‘ಧೂಮ್​ 3’ ಕತೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಅಭಿಷೇಕ್​ ಹಾಗೂ ಆದಿತ್ಯಾ ನಡುವೆ ಜಗಳ ಏರ್ಪಟ್ಟಿತ್ತು. ಇದನ್ನು ಅಭಿಷೇಕ್​ ಸಹಿಸಿಕೊಂಡಿದ್ದರು. ಆದರೆ, ಅವರಿಗೆ ಬೇಸರ ಆಗುವ ದೊಡ್ಡ ಘಟನೆ ನಡೆದಿತ್ತು.

‘ಧೂಮ್​ 3’ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ಸೆಟ್​ಗೆ ಅಭಿಷೇಕ್​ ಬರೋದು ತಡವಾಗಿತ್ತು. ಅದಕ್ಕೂ ಮೊದಲೇ ಆಮಿರ್​ ಹಾಗೂ ಆದಿತ್ಯ ಕೂತು ಸಿನಿಮಾದ ಕ್ಲೈಮ್ಯಾಕ್ಸ್​ ಬದಲಾಯಿಸಿದ್ದರು. ಈ ವಿಚಾರ ಅಭಿಷೇಕ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಅಲ್ಲದೆ, ಇನ್ನುಮುಂದೆ ‘ಧೂಮ್​’ ಸರಣಿಯ ಯಾವುದೇ ಸಿನಿಮಾಗಳಲ್ಲೂ ಅವರು ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು.

ಆದಿತ್ಯ ಚೋಪ್ರಾ ‘ಬಂಟಿ ಔರ್​ ಬಬ್ಲಿ 2’ ಆಫರ್​ಅನ್ನು ಅಭಿಷೇಕ್​ಗೆ ನೀಡಿದ್ದರು. ಆದರೆ, ಅವರು ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಇದಾದ ನಂತರದಲ್ಲಿ ಸೈಫ್​ ಅಲಿ ಖಾನ್​ಗೆ ಈ ಆಫರ್​ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಭಿಷೇಕ್​ ಬಚ್ಚನ್​ಗೆ ಶಸ್ತ್ರಚಿಕಿತ್ಸೆ: ಫೋಟೋ ಹಂಚಿಕೊಂಡು ಘಟನೆ ವಿವರಿಸಿದ ನಟ…

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ